ನಮ್ಮೂರ ಹೋಳಿ ಹಾಡು – ೬

ಮಾರ ವೀರ ತನ್ನ ಮನದಿ
ಧೈರ್ಯ ಮಾಡಿ
ಹರನ ತಪವ ಸೂರೆಗೊಂಬುದಕೆ
ತನ್ನ ಸೈನ್ಯವೆಲ್ಲ ಕೂಡಿಸಿ ||ಪ||

ಅಳಿಯು ಗಿಳಿಯು ಕೋಗಿಲೆಗಳ
ಬಳಗವೆಲ್ಲಾ ಮುಂದೆ
ಹೈಮಾಚಲಕೆ ತೆರಳ ಹೇಳಿ
ಪುಷ್ಪದಲರು ಬಿಲ್ಲಿಗೇರಿಸಿ ||೧||

ಅಂಗಜನು ಪೋಗಿ ಮಾತಂಗ
ಪರ್ವತವನು ಏರಿ
ತುಂಗವಿಕ್ರಮನಾ ಶರವ
ಲಂಗಿಸಿಟ್ಟನಾಕ್ಷಣ ||೨||

ರಸದಾಳಿಯ ಚಾಪಕ್ಗಿನ್ನು
ಕುಸುಮ ಬಾಣವನ್ನು ಹೂಡಿ
ಎಸೆಯುವಾಗ ಮುನಿ ಸಮೂಹ
ದೆಶೆಯಗೆಟ್ಟರೆಲ್ಲರೋ ||೩||

ಇಟ್ಟ ಕುಸುಮ ಬಾಣಕಿನ್ನು
ಭ್ರಷ್ಟವಾಯ್ತು ಶಿವನ ತಪವು
ನೆಟ್ಟನುರಿಗಣ್ಣು ತೆರೆಯೆ
ಸುಟ್ಟ ಮದನ ಕಾಮನು ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀಪದ ಬೆಳಕು…
Next post ನಮ್ಮ ಚಂದ್ರಾಮ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…