ನಮ್ಮೂರ ಹೋಳಿ ಹಾಡು – ೬

ಮಾರ ವೀರ ತನ್ನ ಮನದಿ
ಧೈರ್ಯ ಮಾಡಿ
ಹರನ ತಪವ ಸೂರೆಗೊಂಬುದಕೆ
ತನ್ನ ಸೈನ್ಯವೆಲ್ಲ ಕೂಡಿಸಿ ||ಪ||

ಅಳಿಯು ಗಿಳಿಯು ಕೋಗಿಲೆಗಳ
ಬಳಗವೆಲ್ಲಾ ಮುಂದೆ
ಹೈಮಾಚಲಕೆ ತೆರಳ ಹೇಳಿ
ಪುಷ್ಪದಲರು ಬಿಲ್ಲಿಗೇರಿಸಿ ||೧||

ಅಂಗಜನು ಪೋಗಿ ಮಾತಂಗ
ಪರ್ವತವನು ಏರಿ
ತುಂಗವಿಕ್ರಮನಾ ಶರವ
ಲಂಗಿಸಿಟ್ಟನಾಕ್ಷಣ ||೨||

ರಸದಾಳಿಯ ಚಾಪಕ್ಗಿನ್ನು
ಕುಸುಮ ಬಾಣವನ್ನು ಹೂಡಿ
ಎಸೆಯುವಾಗ ಮುನಿ ಸಮೂಹ
ದೆಶೆಯಗೆಟ್ಟರೆಲ್ಲರೋ ||೩||

ಇಟ್ಟ ಕುಸುಮ ಬಾಣಕಿನ್ನು
ಭ್ರಷ್ಟವಾಯ್ತು ಶಿವನ ತಪವು
ನೆಟ್ಟನುರಿಗಣ್ಣು ತೆರೆಯೆ
ಸುಟ್ಟ ಮದನ ಕಾಮನು ||೪||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೀಪದ ಬೆಳಕು…
Next post ನಮ್ಮ ಚಂದ್ರಾಮ

ಸಣ್ಣ ಕತೆ

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…