ನಮ್ಮ ಚಂದ್ರಾಮ

ನಮ್ಮ ಚಂದ್ರಾಮ
ಬೆಳುದಿಂಗಳಲಿ ಮಿಂದಾಂವ
ತಂಪಿನ ಬೆಳಕನು ಚೆಲ್ಲಾಂವ

ನಾಚುವ ಮಲ್ಲಿಗೆ ಮೊಗ್ಗೆಗೆ ಊದಿ
ಮೆಲ್ಲಗೆ ಬಿಡಿಸಾಂವ
ನಮ್ಮ ಚಂದ್ರಾಮ

ಕಾಡಿಗೆ ಇಬ್ಬನಿ ಸುರಿಸಾಂವ
ನಾಡಿಗೆ ಮಂಜು ಕಳಿಸಾಂವ
ಬೀಸುವ ಗಾಳಿಯ ಮೋಡವನೇರಿ
ಸವಾರಿ ಹೊರಟಾಂವ
ನಮ್ಮ ಚಂದ್ರಾಮ

ಒಂದರೆ ತಿಂಗಳು ಕುಗ್ಗಾಂವ _
ಇನ್ನರೆ ತಿಂಗಳು ಹಿಗ್ಗಾಂವ
ತಾರೆಗಳೊಂದಿಗೆ ಕತ್ತಲು ಬೆಳಕಿನ
ಕಣ್ಣಮುಚ್ಚಾಲೆ ಆಡಾಂವ
ನಮ್ಮ ಚಂದ್ರಾಮ

ಕಿಟಕಿಯ ಬಳಿಯಲಿ ನಿತುಕೊಂಡಾಂವ
ಕಿಟಕಿಯ ಒಳಕೂ ಕಾಲಿಟ್ಟಾಂವ
ಬಳಲಿದ ಮಕ್ಕಳ ಕಣ್ಣಿಗೆ ಕನಸಿನ
ಮುಲಾಮ ಹಚ್ಚಾಂವ
ನಮ್ಮ ಚಂದ್ರಾಮ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಮ್ಮೂರ ಹೋಳಿ ಹಾಡು – ೬
Next post ಆಶ್ರಯ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…