ಗುಬ್ಬಿಗೂಡು

ಹಾರಿಬಂತು ಗುಬ್ಬಿಯೊಂದು
ಕಂಡಿತೊಂದು ಶಾಲೆಮಾಡು
ಕಟ್ಟಿತಲ್ಲೆ ಗೂಡಿನೋಡು

ಹುಲ್ಲು ಕಡ್ಡಿ ನಾರು ಗೀರು
ಸಾಕು ಅದುವೆ ಪರಿಕರ
ಬದುಕಲದುವೆ ಹಂದರ

ಗೂಡು ಕಟ್ಟಿ ಕೈಯ ತಟ್ಟಿ
ಕರೆದು ಅದರ ಗೆಳತಿಯ
ಮೊಟ್ಟೆ ಇಟ್ಟು ಕಾವು ಕೊಟ್ಟು

ಮರಿಯ ಕಂಡು ಹರ್ಷ ಪಟ್ಟು
ಕಾಳು ತರಲು ಗುಬ್ಬಿಹೊರಟು
ಕಣ್ಮಣಿಗೆ ಗುಟುಕು ಕೊಟ್ಟು

ಪುಟ್ಟ ಮರಿಯ ದೊಡ್ಡ ಮಾಡಿ
ರೆಕ್ಕೆಯೊಳಗೆ ಮರೆಯ ಮಾಡಿ
ಹಾರ ಬಯಸೆ ಪ್ರೀತಿ ತೋರಿ

ಬದುಕ ಕಲಿಸಿ ಬಿಡುವುದು
ಗುಬ್ಬಿಗಿಲ್ಲಿ ಯಾರು ಗುರುವು
ಯಾವ ಶಾಲೆ ಯಾರ ಪಾಠ

ಪ್ರಕೃತಿ ಜೊತೆಗೆ ಕಲಿತ ಪಾಠ
ತಾನು ಕಲಿತು ಮರಿಗೂ ಕಲಿಸಿ
ಚಂದದಿಂದ ಬದುಕಿತು

ಕಲಿತು ಕಲಿಸಿ ಬದುಕೊ ರೀತಿ
ಮನುಜಗಿದುವೆ ಒಳ್ಳೆ ನೀತಿ
ಬಾಳಬೆಳಗೊ ಸಹಜ ಪ್ರೀತಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಡ ವಸ್ತುವೆ?
Next post ಗಾಳಿ ಪಟ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…