ಗುಬ್ಬಿಗೂಡು

ಹಾರಿಬಂತು ಗುಬ್ಬಿಯೊಂದು
ಕಂಡಿತೊಂದು ಶಾಲೆಮಾಡು
ಕಟ್ಟಿತಲ್ಲೆ ಗೂಡಿನೋಡು

ಹುಲ್ಲು ಕಡ್ಡಿ ನಾರು ಗೀರು
ಸಾಕು ಅದುವೆ ಪರಿಕರ
ಬದುಕಲದುವೆ ಹಂದರ

ಗೂಡು ಕಟ್ಟಿ ಕೈಯ ತಟ್ಟಿ
ಕರೆದು ಅದರ ಗೆಳತಿಯ
ಮೊಟ್ಟೆ ಇಟ್ಟು ಕಾವು ಕೊಟ್ಟು

ಮರಿಯ ಕಂಡು ಹರ್ಷ ಪಟ್ಟು
ಕಾಳು ತರಲು ಗುಬ್ಬಿಹೊರಟು
ಕಣ್ಮಣಿಗೆ ಗುಟುಕು ಕೊಟ್ಟು

ಪುಟ್ಟ ಮರಿಯ ದೊಡ್ಡ ಮಾಡಿ
ರೆಕ್ಕೆಯೊಳಗೆ ಮರೆಯ ಮಾಡಿ
ಹಾರ ಬಯಸೆ ಪ್ರೀತಿ ತೋರಿ

ಬದುಕ ಕಲಿಸಿ ಬಿಡುವುದು
ಗುಬ್ಬಿಗಿಲ್ಲಿ ಯಾರು ಗುರುವು
ಯಾವ ಶಾಲೆ ಯಾರ ಪಾಠ

ಪ್ರಕೃತಿ ಜೊತೆಗೆ ಕಲಿತ ಪಾಠ
ತಾನು ಕಲಿತು ಮರಿಗೂ ಕಲಿಸಿ
ಚಂದದಿಂದ ಬದುಕಿತು

ಕಲಿತು ಕಲಿಸಿ ಬದುಕೊ ರೀತಿ
ಮನುಜಗಿದುವೆ ಒಳ್ಳೆ ನೀತಿ
ಬಾಳಬೆಳಗೊ ಸಹಜ ಪ್ರೀತಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಡ ವಸ್ತುವೆ?
Next post ಗಾಳಿ ಪಟ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…