ಗಾಳಿ ಪಟ

ಇದು ಆಷಾಢ ಮಾಸದ ಕಾಲ
ಕೂಗಿ ಕರೆದನು ಮಿತ್ರರ ಬಾಲು
ಓಡಿ ಬಂದರು ಕಾಳ ರಘು ಮಾಲ
ಕುಳಿತರು ಗಾಳಿಪಟವನು ಮಾಡಲು

ಹುಡುಕಿ ತಂದರು ಹಳೆಯ ಬಿದಿರು
ಕುಡುಗೋಲಿನಲ್ಲಿ ಸೀಳಿದರು
ಕಾಡಿಗೆ ಓಡಿ ಹುಡುಕಿದರು
ಬಿಲ್ವದ ಹಣ್ಣನು ತಂದರು

ಹಾಳೆಯನೊಂದನು ಹರಡಿದರು
ಅಳತೆಗೆ ಸರಿಸಮ ಕತ್ತರಿಸಿದರು
ಬಿದಿರಿಗೆ ಅಂಟನು ಸವರಿದರು
ಅಡ್ಡಡ್ಡ ಉದ್ದುದ್ದ ಹಚ್ಚಿದರು

ಹೊಸೆದರು ನೂರಡಿ ಹಗ್ಗವನು
ಕಟ್ಟಲು ಸೂತ್ರದ ದಾರವನು
ಧೋತ್ರದ ದಡಿಯಾಯ್ತು ಫರಫರಿ
ಬಾಲಂಗೋಸಿಯನು ಇಳಿಯಬಿಟ್ಟರು

ತಮ್ಮೆತ್ತರದ ಗಾಳಿಪಟವನು
ಬಯಲಲಿ ಕಾಳ ಹಿಡಿದು ನಿಂತನು
ದೂರದಿ ದಾರವ ಹಿಡಿದನು ಬಾಲನು
ರಘು ಬಾಲಂಗೋಸಿ ಹಿಡಿದು ನಿಂತನು

ಕೈಬಿಡೋ ಕಾಳ ಕೂಗಿದ ಬಾಲನು
ಮೇಲಕೆ ತೂರಿದ ಪಟವ ಕಾಳನು
ಬಾಲನು ಹಿಡಿದ ದಾರವನೆಳೆದನು
ಮೇಲಕೆ ಹಾರಿತು ಮಾಡುವ ಸದ್ದನು

ಫರಫರಿ ಮಾಡಿತು ಗುಂಯ್‌ನೋ ಸದ್ದು
ಹರಡಿತು ಊರಿನ ತುಂಬೆಲ್ಲ
ನೆರೆದರು ಮೈದಾನದಲಿ ಜನರು
ಮಕ್ಕಳ ಜಾಣ್ಮೆಯ ಹೊಗಳಿದರು

ಸಂಜೆಯ ತನಕ ಆಡಿಸಲವನು
ಬಳಲಿ ಅಸ್ತಮಿಸಿದ ಸೂರ್ಯನು
ಇಬ್ಬರು ಸೇರಿ ಎಳೆದರು ಹಗ್ಗವನು
ಒಬ್ಬನು ದುಂಡಗೆ ಸುತ್ತಿದನು

ಏರಿದ ಪಟವನು ಇಳಿಸಿಬಿಟ್ಟರು
ಚುಂಬಿಸಿ ಅದನು ಮನೆಗೆ ಒಯ್ದರು
ಕತ್ತಲು ಕವಿಯಲು ಚದುರಿದರು
ಮನೆಯಲಿ ಕಥೆಯನು ಹೇಳಿದರು

ತಿಂಗಳು ಪೂರ್ತಿ ಆಡಿದರು
ಶ್ರಾವಣ ಬರಲು ಮುದುರಿದರು
ಪಟ ದಾರಗಳನ್ನು ಜೋಪಾನದಲಿ
ಇಟ್ಟನು ಬಾಲ ಮೇಲಟ್ಟದಲಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...