ಗಾಳಿ ಪಟ

ಇದು ಆಷಾಢ ಮಾಸದ ಕಾಲ
ಕೂಗಿ ಕರೆದನು ಮಿತ್ರರ ಬಾಲು
ಓಡಿ ಬಂದರು ಕಾಳ ರಘು ಮಾಲ
ಕುಳಿತರು ಗಾಳಿಪಟವನು ಮಾಡಲು

ಹುಡುಕಿ ತಂದರು ಹಳೆಯ ಬಿದಿರು
ಕುಡುಗೋಲಿನಲ್ಲಿ ಸೀಳಿದರು
ಕಾಡಿಗೆ ಓಡಿ ಹುಡುಕಿದರು
ಬಿಲ್ವದ ಹಣ್ಣನು ತಂದರು

ಹಾಳೆಯನೊಂದನು ಹರಡಿದರು
ಅಳತೆಗೆ ಸರಿಸಮ ಕತ್ತರಿಸಿದರು
ಬಿದಿರಿಗೆ ಅಂಟನು ಸವರಿದರು
ಅಡ್ಡಡ್ಡ ಉದ್ದುದ್ದ ಹಚ್ಚಿದರು

ಹೊಸೆದರು ನೂರಡಿ ಹಗ್ಗವನು
ಕಟ್ಟಲು ಸೂತ್ರದ ದಾರವನು
ಧೋತ್ರದ ದಡಿಯಾಯ್ತು ಫರಫರಿ
ಬಾಲಂಗೋಸಿಯನು ಇಳಿಯಬಿಟ್ಟರು

ತಮ್ಮೆತ್ತರದ ಗಾಳಿಪಟವನು
ಬಯಲಲಿ ಕಾಳ ಹಿಡಿದು ನಿಂತನು
ದೂರದಿ ದಾರವ ಹಿಡಿದನು ಬಾಲನು
ರಘು ಬಾಲಂಗೋಸಿ ಹಿಡಿದು ನಿಂತನು

ಕೈಬಿಡೋ ಕಾಳ ಕೂಗಿದ ಬಾಲನು
ಮೇಲಕೆ ತೂರಿದ ಪಟವ ಕಾಳನು
ಬಾಲನು ಹಿಡಿದ ದಾರವನೆಳೆದನು
ಮೇಲಕೆ ಹಾರಿತು ಮಾಡುವ ಸದ್ದನು

ಫರಫರಿ ಮಾಡಿತು ಗುಂಯ್‌ನೋ ಸದ್ದು
ಹರಡಿತು ಊರಿನ ತುಂಬೆಲ್ಲ
ನೆರೆದರು ಮೈದಾನದಲಿ ಜನರು
ಮಕ್ಕಳ ಜಾಣ್ಮೆಯ ಹೊಗಳಿದರು

ಸಂಜೆಯ ತನಕ ಆಡಿಸಲವನು
ಬಳಲಿ ಅಸ್ತಮಿಸಿದ ಸೂರ್ಯನು
ಇಬ್ಬರು ಸೇರಿ ಎಳೆದರು ಹಗ್ಗವನು
ಒಬ್ಬನು ದುಂಡಗೆ ಸುತ್ತಿದನು

ಏರಿದ ಪಟವನು ಇಳಿಸಿಬಿಟ್ಟರು
ಚುಂಬಿಸಿ ಅದನು ಮನೆಗೆ ಒಯ್ದರು
ಕತ್ತಲು ಕವಿಯಲು ಚದುರಿದರು
ಮನೆಯಲಿ ಕಥೆಯನು ಹೇಳಿದರು

ತಿಂಗಳು ಪೂರ್ತಿ ಆಡಿದರು
ಶ್ರಾವಣ ಬರಲು ಮುದುರಿದರು
ಪಟ ದಾರಗಳನ್ನು ಜೋಪಾನದಲಿ
ಇಟ್ಟನು ಬಾಲ ಮೇಲಟ್ಟದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುಬ್ಬಿಗೂಡು
Next post ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ ‘ಶಿಶುಸಾಹಿತ್ಯ’

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…