ನಾಗರ ಪಂಚಮಿ

ನಾಗರ ಪಂಚಮಿ
ನಾಡಿಗೆ ಸಂಭ್ರಮ
ತರುವುದು ಹೆಂಗಸರಿಗೆ ಮಹಾ ಹರುಷ
ಎಲ್ಲರ ಮನೆಯಲಿ
ಹುರಿ ಕರಿ ದನಿಯಲಿ
ನಾನಾ ಉಂಡಿ ತಯಾರಿಕೆಯ ಸ್ಪರ್ಶ

ಹುತ್ತವ ಹುಡುಕುತ
ಕಲ್ಲಿನ ನಾಗರ ಕಟ್ಟೆಗೆ
ಧಾವಿಸಿ ಪೂಜಿಸಿ ಎರೆವರು ಹಾಲನ್ನು
ಮಕ್ಕಳು ಮರಿಗಳು
ಹಿರಿಯರಾದಿಯಾಗಿ
ಒಟ್ಟಾಗಿ ಕಳೆವರು ನಗುತಲಿ ಕೆಲೆಯುತ

ಮಕ್ಕಳ ಜೇಬುಗಳು
ತುಂತುಂಬ ಉಂಡಿಗಳು
ತಿನ್ನುತ್ತ ತಿನಿಸುತ್ತ ಸುತ್ತುವರು ಊರನ್ನು
ಉಂಡಿ ಕೊಬ್ಬರಿ
ಕರಜಿಕಾಯಿ ಅಳ್ಳು
ಬೀರುತ ಬೆಸೆಯುವರು ಸಂಬಂಧವನು

ಮರುದಿನ ಶಾಲೆಗೆ
ಉಂಡಿ ಕೊಬ್ರಿ ಮೇಷ್ಟಿಗೆ
ಕೊಡುವರು ಗುರುದಕ್ಷಿಣೆ ಭಕ್ತಿಯಲಿ
ನಸುನಗುತ ಆ ಗುರು
ಪ್ರಸಾದವೆಂದು ಪಡೆವರು
ಗುರು-ಶಿಷ್ಯ ಸಂಬಂಧ ವೃದ್ಧಿಸಲೆಂದು

ಗಂಡಸರು ಜಿದ್ದಿನಲ್ಲಿ
ಹೆಂಗಸರು ಜೀಕಿನಲ್ಲಿ
ಮುಳು ಮುಳುಗೇಳುವರು ತಿಂಗಳು ತನಕ
ಭಾರ ಎತ್ತುತ
ಕುಸ್ತಿಯಾಡುತ
ಗಂಡಸರು ಮೆರೆವರು ಕುಣಿವರು ತಕ ತಕ

ವರ್ಷವು ಮುಗಿದರೂ
ನೆನಪನು ಮರೆಯರು
ನಾಗರಪಂಚಮಿ ನಾಡ ಹಬ್ಬವನು
ಗರ ಗರ ಕೊಬ್ಬರಿ
ಬಟ್ಟಲು ಬುಗುರಿ
ಮಕ್ಕಳು ಮೆಲುಕನು ಹಾಕುವರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾವೆಲ್ಲರೂ ಹಿಂದು
Next post ಸಾಧಕರು

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

cheap jordans|wholesale air max|wholesale jordans|wholesale jewelry|wholesale jerseys