Home / ಬಾಲ ಚಿಲುಮೆ / ಕವಿತೆ / ನಾಗರ ಪಂಚಮಿ

ನಾಗರ ಪಂಚಮಿ

ನಾಗರ ಪಂಚಮಿ
ನಾಡಿಗೆ ಸಂಭ್ರಮ
ತರುವುದು ಹೆಂಗಸರಿಗೆ ಮಹಾ ಹರುಷ
ಎಲ್ಲರ ಮನೆಯಲಿ
ಹುರಿ ಕರಿ ದನಿಯಲಿ
ನಾನಾ ಉಂಡಿ ತಯಾರಿಕೆಯ ಸ್ಪರ್ಶ

ಹುತ್ತವ ಹುಡುಕುತ
ಕಲ್ಲಿನ ನಾಗರ ಕಟ್ಟೆಗೆ
ಧಾವಿಸಿ ಪೂಜಿಸಿ ಎರೆವರು ಹಾಲನ್ನು
ಮಕ್ಕಳು ಮರಿಗಳು
ಹಿರಿಯರಾದಿಯಾಗಿ
ಒಟ್ಟಾಗಿ ಕಳೆವರು ನಗುತಲಿ ಕೆಲೆಯುತ

ಮಕ್ಕಳ ಜೇಬುಗಳು
ತುಂತುಂಬ ಉಂಡಿಗಳು
ತಿನ್ನುತ್ತ ತಿನಿಸುತ್ತ ಸುತ್ತುವರು ಊರನ್ನು
ಉಂಡಿ ಕೊಬ್ಬರಿ
ಕರಜಿಕಾಯಿ ಅಳ್ಳು
ಬೀರುತ ಬೆಸೆಯುವರು ಸಂಬಂಧವನು

ಮರುದಿನ ಶಾಲೆಗೆ
ಉಂಡಿ ಕೊಬ್ರಿ ಮೇಷ್ಟಿಗೆ
ಕೊಡುವರು ಗುರುದಕ್ಷಿಣೆ ಭಕ್ತಿಯಲಿ
ನಸುನಗುತ ಆ ಗುರು
ಪ್ರಸಾದವೆಂದು ಪಡೆವರು
ಗುರು-ಶಿಷ್ಯ ಸಂಬಂಧ ವೃದ್ಧಿಸಲೆಂದು

ಗಂಡಸರು ಜಿದ್ದಿನಲ್ಲಿ
ಹೆಂಗಸರು ಜೀಕಿನಲ್ಲಿ
ಮುಳು ಮುಳುಗೇಳುವರು ತಿಂಗಳು ತನಕ
ಭಾರ ಎತ್ತುತ
ಕುಸ್ತಿಯಾಡುತ
ಗಂಡಸರು ಮೆರೆವರು ಕುಣಿವರು ತಕ ತಕ

ವರ್ಷವು ಮುಗಿದರೂ
ನೆನಪನು ಮರೆಯರು
ನಾಗರಪಂಚಮಿ ನಾಡ ಹಬ್ಬವನು
ಗರ ಗರ ಕೊಬ್ಬರಿ
ಬಟ್ಟಲು ಬುಗುರಿ
ಮಕ್ಕಳು ಮೆಲುಕನು ಹಾಕುವರು
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...