ಸಾಧಕರು

ಸಾಧಕರು

ವಿಶ್ವ ಮಟ್ಟದ ಕೊರಿಯಾದ ಇಂಚಿಯಾನ್‌ಗಳಲ್ಲಿ ಜರುಗಿದ ೨೦೧೪ ರ ಏಷ್ಯನ್ ಗೇಮ್ಸ್‌ನ ರಿಲೆಯಲ್ಲಿ ಬಂಗಾರದ ಸಾಧನೆ ಮಾಡಿರುವ ರಾಜ್ಯದ ಹೆಮ್ಮೆಯ ಓಟಗಾರ್‍ತಿ ಚಿನ್ನದ ಜಿಂಕೆಯೆಂದೇ ಖ್ಯಾತರಾಗಿರುವ ಎಂ.ಆರ್‌. ಪೂವಮ್ಮ ಅವರಿಗೆ ಕನ್ನಡ ನಾಡಿನ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಸಂದಿದೆ.

ಕೊರಿಯಾದ ಇಂಚಿಯಾನ್‌ನಲ್ಲಿ ನಡೆದ ೨೦೧೪ ರ ಏಷ್ಯನ್ ಗೇಮ್ಸ್‌ನಲ್ಲಿ ಮಿಂಚಿದ ಮಹಾಸಾಧಕಿ ಚಿನ್ನದ ರಾಣಿ ಎಂ.ಆರ್‌. ಪೂವಮ್ಮ ೪೦೦ ಮೀ ಓಟದಲ್ಲಿ ಕಂಚು ಹಾಗೂ ೪೦೦ x ೪ ಮೀ ರಿಲೇಯಲ್ಲಿ ಚಿನ್ನದ ಪದಕ ಗಳಿಸಿದ ವಿಖ್ಯಾತಿ ಇವರದು!

ಎಂ.ಆರ್. ಪೂವಮ್ಮ ೨೦೧೩ ರಲ್ಲಿ ಪುಣೆಯಲ್ಲಿ ನಡೆದ ಏಷ್ಯನ್ ಚಾಂಪಿಯನ್ ಷಿಪ್‌ನಲ್ಲಿಯೂ ೪೦೦ ಮೀ ಓಟದಲ್ಲಿ ಬೆಳ್ಳಿ ಹಾಗೂ ರಿಲೆಯಲ್ಲಿ ಬಂಗಾರ ಪದಕವನ್ನು ತಮ್ಮ ಸ್ವಂತ ಮಾಡಿಕೊಂಡಿರುವರು.

ಇನ್ನು ತಮ್ಮ ಭುಜದ ಮೇಲೆ ಗಾಯದ ಸಮಸ್ಯೆಯ ಮಧ್ಯೆಯೂ ಏಷ್ಯನ್ ಗೇಮ್ಸ್‌ನಲ್ಲಿ ಹುರುಪಲಿ ಸ್ಪರ್ಧಿಸಿದ್ದ ಪ್ಯಾರಾ ಈಜು ಪಟು ಭವ್ಯ ಭಾರತೀಯ ಎಂಬ ನವ ಇತಿಹಾಸ ಬರೆದ ಬೆಂಗಳೂರಿನ ಶರತ್‌ಗಾಯಕ್ವಾಡ್ ಅವರಿಗೂ ಕನ್ನಡ ನಾಡಿನ ಹೆಮ್ಮೆಯ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಸಂದಿದೆ.

ಶ್ರೀಯುತರು- ಈ ಗೇಮ್ಸ್‌ನಲ್ಲಿ ಆರು ಪದಕಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಈ ಹಿಂದೆ ಇದೇ ಗೇಮ್ಸ್‌ನಲ್ಲಿ ಅತ್ಲೀಟ್ ಚಿನ್ನದ ರಾಣಿ ಪಿ.ಟಿ. ಉಷಾ ಅವರು ಗೆದ್ದಿದ್ದ ಐದು ಪದಕಗಳ ದಾಖಲೆಯನ್ನೂ ಇವರು ಮುರಿದು, ಅತ್ಯಾಮೋಘ ಸಾಧನೆ ಮಾಡಿ ಮಹಾಸಾಧಕರ ಪಟ್ಟಿಗೆ ಸೇರ್ಪಡೆಯಾಗಿರುವರು.

ಮುದ್ದು ಪುಟಾಣಿಗಳೆ… ನಾನು ಇಂಜಿನಿಯರ್, ಡಾಕ್ಟರ್, ಐ‌ಎ‌ಎಸ್, ಐಪಿ‌ಎಸ್…. ಆಗುವನೆಂದು ಗುರಿ ಹೊಂದಬೇಡಿ! ನಾನು ಒಳ್ಳೆಯ ಕ್ರೀಡಾ ಪಟುವಾಗುವೆ. ದೇಶಕ್ಕೆ ಕೀರ್ತಿ ತರುವೆ. ವಿಶ್ವಮಟ್ಟದಲ್ಲಿ ಭವ್ಯ ಭಾರತದ ಕೀರ್ತಿಪಾತಕೆಯನ್ನು ಮುಗಿಲಿಗೇರಿಸುವೆ ಎಂಬ ಗುರಿನೂ ಹೊಂದಿರಿ. ಅಲ್ಲವೇ??
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಗರ ಪಂಚಮಿ
Next post ಅವಳ ಹೆಸರು ಇವಳಿಗಿಷ್ಟ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

cheap jordans|wholesale air max|wholesale jordans|wholesale jewelry|wholesale jerseys