ಏನ ದುಡಿದೆ ನೀನು?

ಏನ ದುಡಿದೆ ನೀನು-ಭಾರಿ
ಅದೇನ ಕಡಿದೆ ನೀನು?
ನೀನು ಬರುವ ಮೊದಲೇ-ಇತ್ತೋ
ಭೂಮಿ ಸೂರ್ಯ ಬಾನು

ಕಣ್ಣು ಬಿಡುವ ಮೊದಲೇ-ಸೂರ್ಯನ
ಹಣತೆಯು ಬೆಳಗಿತ್ತೋ
ಮಣ್ಣಿಗಿಳಿವ ಮೊದಲೇ – ಅಮ್ಮನ
ಎದೆಯಲಿ ಹಾಲಿತ್ತೋ
ಉಸಿರಾಡಲಿ ಎಂದೇ – ಸುತ್ತಾ
ಗಾಳಿ ಬೀಸುತಿತ್ತೋ
ದಾಹ ಕಳೆಯಲೆಂದೇ – ನೀರಿನ
ಧಾರೆಯು ಹರಿದಿತ್ತೋ

ಇದ್ದ ಮಣ್ಣ ಎತ್ತಿ- ಕಟ್ಟಿದೆ
ದೊಡ್ಡ ಸೌಧವನ್ನ
ಬಿದ್ದ ನೀರ ಹರಿಸಿ – ಗಳಿಸಿದೆ
ವಿದ್ಯುತ್ ಬಲವನ್ನ
ಸದ್ದು ಬೆಳಕ ಸೀಳಿ – ತೆರೆದೆಯೊ
ಶಕ್ತಿಯ ಕದವನ್ನ
ನಿನ್ನದು ನಿಂತಿದೆಯೋ – ನೆಮ್ಮಿ
ಮೊದಲೆ ಇದ್ದುದನ್ನ.

ಇದ್ದುದನ್ನೆ ಹಿಡಿದು – ಭಾಗಿಸಿ
ಕೂಡಿ ಗುಣಿಸಿ ಕಳೆದು
ಗೆದ್ದೆ ಹೊಸದ, ನಾನೇ-ಸೃಷ್ಟಿಗೆ
ಪ್ರಭು ಎನಬಹುದೇನು?
ಚುಕ್ಕಿ ಬಾನ ತಡಕಿ – ಅಷ್ಟಕೆ
ಸೊಕ್ಕಿ ಕುಣಿವ ತಮ್ಮ
ಇರಲಾರಳೆ ಹೇಳೋ – ಅವುಗಳ
ಹಡೆದ ಒಬ್ಬ ಅಮ್ಮ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೩೮
Next post ಬೆರಗುಗೊಳಿಸುವುದಿಲ್ಲ

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys