Home / ಕವನ / ಕವಿತೆ / ಏನ ದುಡಿದೆ ನೀನು?

ಏನ ದುಡಿದೆ ನೀನು?

ಏನ ದುಡಿದೆ ನೀನು-ಭಾರಿ
ಅದೇನ ಕಡಿದೆ ನೀನು?
ನೀನು ಬರುವ ಮೊದಲೇ-ಇತ್ತೋ
ಭೂಮಿ ಸೂರ್ಯ ಬಾನು

ಕಣ್ಣು ಬಿಡುವ ಮೊದಲೇ-ಸೂರ್ಯನ
ಹಣತೆಯು ಬೆಳಗಿತ್ತೋ
ಮಣ್ಣಿಗಿಳಿವ ಮೊದಲೇ – ಅಮ್ಮನ
ಎದೆಯಲಿ ಹಾಲಿತ್ತೋ
ಉಸಿರಾಡಲಿ ಎಂದೇ – ಸುತ್ತಾ
ಗಾಳಿ ಬೀಸುತಿತ್ತೋ
ದಾಹ ಕಳೆಯಲೆಂದೇ – ನೀರಿನ
ಧಾರೆಯು ಹರಿದಿತ್ತೋ

ಇದ್ದ ಮಣ್ಣ ಎತ್ತಿ- ಕಟ್ಟಿದೆ
ದೊಡ್ಡ ಸೌಧವನ್ನ
ಬಿದ್ದ ನೀರ ಹರಿಸಿ – ಗಳಿಸಿದೆ
ವಿದ್ಯುತ್ ಬಲವನ್ನ
ಸದ್ದು ಬೆಳಕ ಸೀಳಿ – ತೆರೆದೆಯೊ
ಶಕ್ತಿಯ ಕದವನ್ನ
ನಿನ್ನದು ನಿಂತಿದೆಯೋ – ನೆಮ್ಮಿ
ಮೊದಲೆ ಇದ್ದುದನ್ನ.

ಇದ್ದುದನ್ನೆ ಹಿಡಿದು – ಭಾಗಿಸಿ
ಕೂಡಿ ಗುಣಿಸಿ ಕಳೆದು
ಗೆದ್ದೆ ಹೊಸದ, ನಾನೇ-ಸೃಷ್ಟಿಗೆ
ಪ್ರಭು ಎನಬಹುದೇನು?
ಚುಕ್ಕಿ ಬಾನ ತಡಕಿ – ಅಷ್ಟಕೆ
ಸೊಕ್ಕಿ ಕುಣಿವ ತಮ್ಮ
ಇರಲಾರಳೆ ಹೇಳೋ – ಅವುಗಳ
ಹಡೆದ ಒಬ್ಬ ಅಮ್ಮ ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...