ಇಂದು ಏಕಾದಶಿ ವ್ರತವ ತೀರಿಸಿದೆ
ಶ್ರೀ ಗುರುನಾಥನುಪದೇಶ ಬಲದಿಂದ ||ಪ||

ಹೊಂದಿದೆನು ದ್ವಿತೀಯ ಸಂಧ್ಯಾವಂದನೆಯ ಕಾಲದಲಿ
ಬಂಧುರ ಬಯಲು ಬ್ರಹ್ಮಾನಂದದಲಿ ||೧||

ತೋಟ ಸರೋವರ ಸಹಿತ ಲಕ್ಷ್ಮಿ ವಿಲಾಸಕೆ ಸೀಬೆ ವೃಕ್ಷದ ನೆಲದೀ
ನಿಟಾದ ವೃಂದಾವನವ ವಿವಾಹದ್ವಾದಶಿ ನಾಳೆ ನೋಡೆ
ತ್ರಿಕೂಟದ ಜೋತಿ ಬೆಳಕಿನೊಳುಸುರಿದೆ ||೨||

ಭೂಮಿಪ ಸಮಾನ ಮಾಮಲೇದೇಶಪಾಂಡೆ
ರಾಮರಾವಜಿ ನೀನು ಜ್ಞಾನದಿಂ ತಿಳಿದೇ ||೩||

ಸೀಮೆಯೊಳು ಶಿಶುನಾಳಧೀಶನೊರವಿಲೆ ಬಂದು
ನೇಮಿಸಿರುವ ನಾಗನೂರೆಂಬಸ್ಥಲದಿ ನಿಂದು ||೪||

****