ಸಾಲೆಯ ನೋಡಿದಿಯಾ ಸರಕಾರದ

ಸಾಲೆಯ ನೋಡಿದಿಯಾ ಸರಕಾರದ
ಸಾಲೆಯ ನೋಡಿದಿಯಾ ||ಪ||

ಸಾಲಿ ಸದ್ಗುರುವಿನ ಮಾಲು ಮಂಟಪವಿದು
ಮೇಲೆ ಕಾಣಿಸುವದು ಭೂಲೋಕದಲ್ಲಿ ||ಅ.ಪ.||

ಕುಂಭ ಆರು ಮಧ್ಯದಿ
ತುಂಬಿರುವ ಒಂಭತ್ತು ದ್ವಾರದಲಿ
ಸಾಂಬ ಸದಾಶಿವ ಧ್ಯಾನಕೆ ಇಂಬಾಗಿ
ನಂಬಿಕೊಂಡು ನಿಜ ಅಕ್ಷರ ಕಲಿಸುವ ||೧||

ಪಶ್ಚಿಮ ಬಾಗಿಲಕೆ
ಗಚ್ಚಿನ ಕೆಲ್ಸಾ ಹೆಚ್ಚಿನ ದೇಗುಲಕೆ
ಸ್ವಚ್ಚ ಪೂರ್ವೋತ್ತರ ದಕ್ಷಿಣ ದ್ವಾರದಿ
ಉಚ್ಚರಿಸುವ ತತ್ವಾಂಕಿತ ಸಾರದ ||೨||

ಮೋಜಿಲಿಂದಿರುವ ಮಾಸ್ತಾರಾ
ರಾಜಿತಮಾದ ಸಹಜ ಶಿಕ್ಷಣ ವಿಸ್ತಾರಾ
ಸೋಜಿಗವೆನಿಪ ಶ್ರೀ ಗುಡಿಪುರ ಗ್ರಾಮದಿ
ರಾಜ ಶಿಶುನಾಳಧೀಶನ ದಯದಿಂದ ||೩||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನದೊಳಗಣ ಕಿಚ್ಚು
Next post ಇಂದು ಏಕಾದಶಿ ವ್ರತವ ತೀರಿಸಿದೆ

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…