ಕರೆ

ಇವನು
ಸಂತೆಯಲ್ಲಿ ವ್ಯಾಪಾರವಿಲ್ಲದೆ ಚಿಂತಿತನಾದ
ಬದುಕಿನ ತದುಕುವಿಗೆ ಮೈಗೊಟ್ಟ
ಬವಣೆಯ ಭಾರಕ್ಕೆ ಬೆಂಬಾಗಿದ
ದುರ್ವಾಸನೆಗಳಿಂದುಸುರು ಕಟ್ಟಿದ
ಪಾಶಗಳಿಂದ ಹೆಡೆಮುರಿ ಕಟ್ಟಿಸಿಕೊಂಡ
ದಾಸ್ಯದೊತ್ತಾಯದ ಜೀತಕ್ಕೆ ಹೆಗಲನಿತ್ತ
ಸ್ವಾತಂತ್ರ್ಯ ಸಂಕೋಲೆಗೆ ಕಾಲನಿತ್ತ
ನಾಯಿ ನರಿ ಗೂಬೆ ಗೋರಿಲ್ಲಾಗಳ
ಎಳೆದಾಟಕ್ಕೆ ನಜ್ಜು ಗೊಜ್ಜಾದ
ಮೀಸಲಡುಗೆಯ ಹಡಬೆನಾಯಿಗಿಕ್ಕಿ ಬಿಕ್ಕಿದ
ಹಣದೊಡನಾಡಿ ಹಾಣಾಹಣಿ ಹೆಣವಾದ
ಕಾಮನ ಕಣ್ಮುಚ್ಚಾಲೆಯಲ್ಲಿ ಕಣ್ಕಟ್ಟಿ
ಗೋಡೆ ಗೋಡೆ ಹಾಯ್ದು ಗಟಾರಕ್ಕೆ ಬಿದ್ದ
ಭೂತವು ಬೆಂಬತ್ತಿ ಬೇತಾಳವಾದಾಗ ತತ್ತಿಹಾಕಿದ
ನರನಾಡಿಗಳೆಲ್ಲ ಇರುಳೆಲ್ಲ ನರಳಿ ರೋಧಿಸಿದರೂ
ಹಗಲ ಹಗರಣದ ಹಡಬಿಟ್ಟಿ ಬಟ್ಟೆಗಳಲ್ಲಿ
ಮೈತೂರಿಸಿಕೊಂಡ ತನ್ನ ತಾ ಕಳಕೊಂಡ
ಹಲವಾರು ಹೆಜ್ಜೆಗಳಲ್ಲೇ ನಡೆದು
ಎಡವಿ‌ಎಡವಿ ದಾರಿ ತಪ್ಪಿದ
ಕೆಲವರು ತೋರಿಸಿದಲ್ಲಿ ತೆವಳಿ ಬವಳಿಬಿದ್ದ
ಒಲವಿನ ನೆಲೆಗಾಣದೆ ನೆಲುವಿಗೆ ಹಾರಿಹಾರಿ
ನೆಲಕಂಡು ನೊಂದು ಅವಡುಗಚ್ಚಿದ
ಸಲ್ಲದ ಸಿಂಗಾರಕ್ಕೆ ಒಲ್ಲದೆ ಅಣಿಯಾಗಿ
ಹೂಮುಡಿದು ಎಣ್ಣೆಯುರಿಸಿ ಕಾದೂಕಾದೂ
ಗಂಡ ಬಾರದೆ ಕಂಗಾಲಾದವಳಂತಾದ
ಅರ್ಥವಿಲ್ಲದ ಮಂತ್ರವೂದಿ ಅನರ್ಥದ ಹೊಗೆ‌ಎಬ್ಬಿಸಿ
ತತ್ವವಿಲ್ಲದ ತಂತ್ರದಲ್ಲಿ ತಂತಿಯಿಲ್ಲದ ತಂಬೂರಿ ಮೀಟಿದ
ದಿಕ್ಕೆಳೆದ ಕಡೆ ನಡೆದು ದಿಕ್ಕೆಟ್ಟ
ಜೀವನವು ಸಾವಿಗಿಂತ ಕಡೆಯಾದಾಗ
ಮನೆ ಮಸಣದಲ್ಲೋ ಗುಡ್ಡ ಗುಡಿಯಲ್ಲೋ
ಹೊಲ ಹಾದಿಯಲ್ಲೋ ನೆಲಜಲದಲ್ಲೋ
ಕೊನೆಗೊಮ್ಮೆ ಒಳಗಿನಾಳದಿಂದ
ಅಖಂಡ ಗೂಢಗರ್ಭಮೂಲದಿಂದ
ಕರೆಯೊಂದು ಕೇಳಿ ಬಂತು
ಈ ಕರೆಗಳಿಗೆ ಎಲ್ಲರೂ ಕಿವಿದೆರೆದಿದ್ದರೆ
ಇವನು ಕಿವುಡಾಗಿದ್ದ
ಆ ಕರೆಗೆಲ್ಲರೂ ಕಿವುಡಾಗಿದ್ದರೆ
ಇವನು ಕಿವಿದೆರೆದಿದ್ದ ಕಾಣದಿದ್ದುದಕೆ ಕಣ್ತೆರೆದಿದ್ದ
(೨೩-೪-೭೪)
*****

Tagged:

Leave a Reply

Your email address will not be published. Required fields are marked *

ಪೆಟ್ರೋಲ್ ವಾಸ್ತೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...