Home / ಕವನ / ಕವಿತೆ / ರಸವಂತಿ

ರಸವಂತಿ

ಇವಳು ಬರುತ್ತಾಳೆ, ಬೆಳಕಿನ ತಂಬಿಗೆ ತುಂಬಿ ತರುತ್ತಾಳೆ,
ಹನಿಹನಿ ಹನಿಸಿ ಹಳ್ಳಹರಿಸಿ ನನ್ನ ಕುದಿಮನವನದರಲ್ಲಿ ತೇಲಿಸುತ್ತಾಳೆ
ಎಳೆಹುಲ್ಲ ಮೆತ್ತೆ ತೊಡೆಯ ಮೇಲೆ ಹೂಗೈಯಿಂದ ತಟ್ಟಿ
ತೊಟ್ಟಿಲ ತೂಗಿ ನನ್ನ ತಲೆಯ ಚಕ್ರಭ್ರಮಣವ ನಿಲ್ಲಿಸುತ್ತಾಳೆ,
ಮಬ್ಬುಗತ್ತಲಲ್ಲಿ ಬೆಂಕಿ ಹೊತ್ತಿಸಿ ಮೈಬೆಚ್ಚಗಿಡುತ್ತಾಳೆ
ನೆಲವನೆಲ್ಲ ನೀಲಿನೀರಲದ್ದಿ ಎರಕಹೊಯ್ದು
ತೊಲೆಕಂಬವಿಲ್ಲದ ಗೋಡೆಬೇಲಿಯಿಲ್ಲದ ಮನೆಯಲ್ಲಿ
ಹೂಹರವಿ ಸಿಂಗರಿಸುತ್ತಾಳೆ
ಕಾಯಕಾಯ ಬೆಸೆದು ಹಣ್ಣಾಗಿಸಿ ರಸವೀಂಟಿಸುತ್ತಾಳೆ
ನಾಡಿ ನಾಡಿಯಲ್ಲಿ ಜೇನ ತೊರೆ ಹರಿಸಿ
ಕಾಯಕಲ್ಪ ತೊಡಿಸುತ್ತಾಳೆ.
ತಾಯಿಯೋ ಪ್ರೇಯಸಿಯೋ ಎಂಬ ಭ್ರಮೆ ಬರಿಸುತ್ತಾಳೆ
ಬೇರಿಂದ ಚಿಗುರಿನವರೆಗೆ ಗೆಜ್ಜೆ ಪೋಣಿಸಿ
ಮೈಯರಳಿಸಿ ರವಷ್ಟೂ ರೋಮವೂ ಮಲಗಗೊಡದೆ
ಹೊಸನಾದ ಗೂಢಗಳಿಗೆ ಕಿವಿದೆರೆಸುತ್ತಾಳೆ
ಕೆಂಡ ಕೆದರಿ ಹೊವರಳಿಸುತ್ತಾಳೆ
ಬೂದಿಯಲ್ಲಿ ಬಂಡಾಯವ ಬಡಿದೆಬ್ಬಿಸಿ
ಜೀವವೂದಿ ಕಾವೇರಿಸುತ್ತಾಳೆ
ಇವಳು ಬರುವುದು ಸುಳುವು ಹತ್ತದೇ ಗೊತ್ತಾಗುತ್ತದೆ
ಇವಳ ಬರುವು ಉಳಿದು ಚಿರವಾಗದೆ
ಮತ್ತೆ ಹೊತ್ತು ಹೋಗುತ್ತದೆ ಹೇಗೋ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...