Home / ಬಾಲ ಚಿಲುಮೆ / ಕವಿತೆ / ತಿಂಡಿ ಲೆಕ್ಕ

ತಿಂಡಿ ಲೆಕ್ಕ

ಬೆಳ್ಳಂಬೆಳಗ್ಗೆ ಬಿಸಿ ಬಿಸಿ ಇಡ್ಳಿ
ಯಾರಿಗೆ ಬೇಕು ಇಡ್ಳಿ?
ಅಣ್ಣನಿಗೆ ಹತ್ತು ನಂಗೊಂದಿಪ್ಪತ್ತು
ಒಟ್ಟಾರೆಷ್ಟು ಇಡ್ಳಿ?
ಒಟ್ಟಾರೆ ಮೂವತ್ತು ಇಡ್ಳಿ

ಕಣ್ ಕಣ್ ಬಿಟ್ಟು ಉದ್ದಿನ ಹಿಟ್ಟು
ಯಾರಿಗೆ ಬೇಕು ದೋಸೆ?
ಅಣ್ಣನಿಗಿಪ್ಪತ್ತು ನಂಗೊಂದು ಮೂವತ್ತು
ಒಟ್ಟಾರೆಷ್ಟು ದೋಸೆ?
ಒಟ್ಟಾರೆ ಐವತ್ತು ದೋಸೆ

ಊತದ್ದಾಯ್ತು ಬಾತದ್ದಾಯ್ತು
ಯಾರಿಗೆ ಬೇಕು ಊತಪ್ಪ?
ಅಣ್ಣನಿಗೆ ಮೂವತ್ತು ನಂಗೊಂದು ನಲುವತ್ತು
ಒಟ್ಟಾರೆಷ್ಟು ಊತಪ್ಪ?
ಒಟ್ಟಾರೆ ಎಪ್ಪತ್ತು ಊತಪ್ಪ

ರೌಂಡ್ ರೌಂಡ್ ಉಬ್ಬಿ ಬಂತೈ ಉರುಳಿ
ಯಾರಿಗೆ ಬೇಕು ಪೂರಿ?
ಅಣ್ಣನಿಗೆ ನಲುವತ್ತು ನಂಗೊಂದೈವತ್ತು
ಒಟ್ಟಾರೆಷ್ಟು ಪೂರಿ?
ಒಟ್ಟಾರೆ ತೊಂಬತ್ತು ಪೂರಿ

ಗುಡುಗುಡು ಗುಮ್ಮಟ ದೇವರ ಲಡ್ಡು
ಯಾರಿಗೆ ಬೇಕು ಲಡ್ಡು?
ಅಣ್ಣನಿಗೈವತ್ತು ನಂಗೊಂದರುವತ್ತು
ಒಟ್ಟಾರೆಷ್ಟು ಲಡ್ಡು?
ಒಟ್ಟಾರೆ ನೂರತ್ತು ಲಡ್ಡು
ಇಲ್ಲಿಗೆ ಮುಗಿಯಿತು ಸೆಡ್ಡು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...