ನಮ್ಮೂರ ಹೋಳಿ ಹಾಡು – ೧

ಹೋಳಿಯ ಹಬ್ಬ ವಿಶಾಲದ
ಪದಗಳ ಕೇಳಿರಿ ಜನರೆಲ್ಲಽ|
ಬಾಲಕರೆಲ್ಲರೂ ಕೋಲಾಟವ
ಪಿಡಿದೇಳುವ ಶೃತಿ ಸೊಲ್ಲಽ||ಪ||

ದಕ್ಷವತೀಶನು ದಕ್ಷಬ್ರಹ್ಮ ತಾ
ತನ್ನ ಪ್ರೀತಿ ಸುತೆಯುಽ
ಸಾಕ್ಷಾತ್ ವರ ವಿರೂಪಾಕ್ಷನಿಗಿತ್ತ
ನುಪೇಕ್ಷದಿ ಸಲಿಸುವೆಯಽ||೧||

ಮನದೊಳರಿದು ದಕ್ಷನು
ಶಿವ ತನ್ನಯ ಮನೆಯಳಿಯನೆಂದು
ಘನಗರ್ವದಿ ಶಿವನನು
ಕರೆಯ ಪೋದನು ಕೈಲಾಸಕಂದು||೨||

ಭೂತೇಶನು ತಿಳಿದಾತನ ಗರ್ವವ
ಮಾತಾಡಿಸಲಿಲ್ಲಽ ಖ್ಯಾತಿಲಿ
ದಕ್ಷನು ತಾ ತಿಳಿಯದೆ
ಕೋಪಾತುರದೊಳು ಸೊಲ್ಲಽ||೩||

ಸಿಟ್ಟೀಲಿ ಕರೆಸಿದ ಶ್ರೇಷ್ಠರನೆಲ್ಲ
ವಶಿಷ್ಠ ಗುರುಗಳಂದು
ಇಟ್ಟನು ಹೋಮವ ಸಿಟ್ಟಿಲಿ
ಶಿವನ ತಾ ಸುಟ್ಟು ಬಿಡುವೆನೆಂದು||೪||

ಆ ಸತಿ ದೇವಿಯಳೀ ಸುದ್ದಿಯ
ಕೇಳ್ಯಾಳಾಶಿವನಪ್ಪಣೆಯ
ತಾ ಸಾರಿದಳತಿ ಬ್ಯಾಸರದಿಂದ
ದಕ್ಷೇಶ್ವರನರಮನೆಯ||೫||

ಆ ಸತಿ ದೇವಿಯವಳೀ
ಸುದ್ದಿಯ ಕೇಳಿದಳಾ ಶಿವನಪ್ಪಣೆಯ
ತಾ ಸಾರಿದಳು ಅಭ್ಯಾಸದಿಂದ
ದಕ್ಷೇಶ್ವರನರಮನೆಯ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಜಲ್
Next post ತಿಂಡಿ ಲೆಕ್ಕ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…