ಕಾಬೂಲಿವಾಲಾ

ಅಂದು –
ಉದ್ದನೆಯ ದಾಡಿ ತಲೆಗೆ ಸಡಿಲಾದ ಪೇಟಾ
ಕಂದುಬಣ್ಣದ ದೊಗಲೆ ಜುಬ್ಬಾ
ಹೆಗಲ ಮೇಲಿನ ಕೋಲಿನ ಅಂಚಿಗೆ
ತೂಗಾಡುವ ಬುಟ್ಟಿಗಳು
ಬದಾಮ್ ಪಿಸ್ತಾ ಕಲ್ಲುಸಕ್ಕರೆ ಒಂದೆಡೆ
ಮತ್ತೊಂದೆಡೆ ಉಪ್ಪುಪ್ಪಿನ ಕಡಲೇಬೀಜಗಳು
ನನಗಿನ್ನೂ ಚೆನ್ನಾಗಿ ನೆನಪಿದೆ
ಅತನೇ ಕಾಬೂಲಿವಾಲಾ ಎಂದು.
ಕಾಬೂಲು ಕಂದಹಾರ ಸುತ್ತಾಡಿ
ಹೆಂಡತಿ ಮಕ್ಕಳನು ಬಿಟ್ಟು
ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದಿದ್ದವನೂ ಎಂದು-
ಅದೇ ಅದೇ ನನ್ನ ಮದುವೆಯ ದಿನದಂದು
ಬೆಳೆದ ತನ್ನ ಮಗಳ ನೆನೆದು ಕಣ್ಣೀರು ತುಂಬಿ
ಕಾಬೂಲಿಗೆ ಮರಳಿದವನೂ ಎಂದು.

ಇಂದು –
ಕಾಬೂಲಿವಾಲಾ,
ಈಗ ಇದೆಲ್ಲಾ ಏನಾಗುತ್ತಿದೆ ನಿನ್ನ ನಾಡಿನಲ್ಲಿ
ಅಮೇರಿಕದ ವ್ಯಾಪಾರಿಮಳಿಗೆಯಡಿ
ಭಯೋತ್ಪಾದಕ ಪಾತಕಿಗಳಿಗೆ ಸಿಲುಕಿ ಸತ್ತ
ಸಾವಿರಾರು ಅತ್ಮಗಳ ಶಾಪ.
ಕಾಬೂಲು ಕಂದಹಾರಗಳ ತುಂಬೆಲ್ಲ ಗುಂಡುರಾಶಿಗಳ ಸುರಿಮಳೆ
ಭೂಮಿಯೂ ನಡುಗಿ ಭ್ರೂಣಗಳು ಪಾತಿಸುತ್ತಿರುವದು,
ಮುಖ ಪಾದ ಕಾಣಿಸಿದ್ದಕ್ಕೆ
ಹಾಡೇ ಹಗಲು ಹೆಂಗಸರನು ಕೊಂದು
ಧರ್ಮಾಂಧತೆಯಲಿ ಮೆರೆದ ತಾಲಿಬಾನ್ ತಲೆಹಿಡುಕರು
ಮುಗ್ಧತೆಯಲಿ ಕಕ್ಕಾಬಿಕ್ಕಿಯಾಗಿ ಬಿಕ್ಕುವ
ತೊಟ್ಟಿಕ್ಕುವ ಕಣ್ಣೀರು ಕಥೆಗಳು.

ಈಗ-
ಜಗಗೆಲ್ಲ ಬಯಸುವ ಕ್ರೂರಿಗಳನು ಹಿಮ್ಮೆಟ್ಟಿಸಲು
ನೀನು ಹೆಗಲಿಗೆ ಬಂದೂಕು ಏರಿಸಿದ್ದು ತಪ್ಪೇನಿಲ್ಲ,
ಸುಕ್ಕುಗಟ್ಟಿದ ನಿನ್ನ ಹಣೆಯ ಗೆರೆಗಳ ತುಂಬ ಬೆವರು
ಅದರೊಳಗೆ ಮೆತ್ತಿದ ಭೂಮಿಯ ದುರಂತ ಧೂಳು
ಸಾವು ನೋವಿನ ವ್ಯಥೆಯ ಹಾಡುಗಳಿಗೆ
ಕೊನೆ ಎಂದು? ಹೇಗೆ?

ಪ್ರೀತಿವಿಶ್ವಾಸತೆಗೆ ಏನೆಲ್ಲ ಗೆಲ್ಲುವ ಶಕ್ತಿ ಇದೆ
ಗಾಂಧಿ ಹೇಳಿದ್ದು, ಅಂದು ನೀನೂ ಹೇಳಿದ್ದೆ, ನೆನಪಿಸಿಕೋ-
ಕಲ್ಲು ಸಕ್ಕರೆ ಪ್ರೀತಿಯಿಂದ ಕೊಡುತ್ತಿದ್ದ ನಿನ್ನ ಕೈ
ಈಗ ಬಂದೂಕು ಹಿಡಿದದ್ದು
ತಪ್ಪೋ ಒಪ್ಪೋ ಒಂದಿಷ್ಟು ಯೋಚಿಸು
ಯಾರೋ ಮಾಡುವ ತಪ್ಪಿಗೆ
ಯಾರ್ಯಾರೋ ಅನುಭವಿಸುವ ತಳಮಳ.

“ಖಂಡಿಸಬೇಕಾಗಿದೆ ಯುದ್ಧ ಕೊಲೆ
ಬೆಳೆಸಿಕೊಳ್ಳಬೇಕಾಗಿದೆ ನಾಗರಿಕತೆ.
ಎಂದೇ ಟ್ಯಾಂಕರು ಬಂಕರು ಬಂದೂಕು
ಮಿಸೈಲ್ಸ್‌ಗಳ ಕ್ರೂರ ತಲೆಗಳ ತುಂಬೆಲ್ಲ
ಪ್ರೀತಿವಿಶ್ವಾಸಗಳ ಕಲ್ಲು ಸಕ್ಕರೆ ತುಂಬಿಸಿ
ಭಯೋತ್ಪಾದಕರಿಗೆ ಸವಾಲೊಡ್ಡಿದರೆ
ಶಾಂತಿ ನೆಲೆಸೀತು ನಮ್ಮ ನಿಮ್ಮೆಲ್ಲರ ನಾಡುಗಳಲಿ”
******
(ರವೀಂದ್ರನಾಥ್ ಟ್ಯಾಗೂರ ಅವರ ಕಥೆ “ಕಾಬೂಲಿವಾಲಾ” ನೆನಪಿಸಿಕೊಂಡು, ಈಗ ಕಾಬೂಲಿವಾಲಾ ಉತ್ತರ ಮೈತ್ರಿಕೂಟದಲ್ಲೊಬ್ಬ ಎಂದೇ ತಿಳಿದುಕೊಂಡು ಅವನೊಂದಿಗೆ ಒಂದೆರಡು ಮಾತುಗಳು)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದಿರನಿಗೊಂದು ಲಾಲಿ ಹಾಡು
Next post ದಿಕ್ಕು

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys