Home / ಕವನ / ಕವಿತೆ / ಕಾಬೂಲಿವಾಲಾ

ಕಾಬೂಲಿವಾಲಾ

ಅಂದು –
ಉದ್ದನೆಯ ದಾಡಿ ತಲೆಗೆ ಸಡಿಲಾದ ಪೇಟಾ
ಕಂದುಬಣ್ಣದ ದೊಗಲೆ ಜುಬ್ಬಾ
ಹೆಗಲ ಮೇಲಿನ ಕೋಲಿನ ಅಂಚಿಗೆ
ತೂಗಾಡುವ ಬುಟ್ಟಿಗಳು
ಬದಾಮ್ ಪಿಸ್ತಾ ಕಲ್ಲುಸಕ್ಕರೆ ಒಂದೆಡೆ
ಮತ್ತೊಂದೆಡೆ ಉಪ್ಪುಪ್ಪಿನ ಕಡಲೇಬೀಜಗಳು
ನನಗಿನ್ನೂ ಚೆನ್ನಾಗಿ ನೆನಪಿದೆ
ಅತನೇ ಕಾಬೂಲಿವಾಲಾ ಎಂದು.
ಕಾಬೂಲು ಕಂದಹಾರ ಸುತ್ತಾಡಿ
ಹೆಂಡತಿ ಮಕ್ಕಳನು ಬಿಟ್ಟು
ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದಿದ್ದವನೂ ಎಂದು-
ಅದೇ ಅದೇ ನನ್ನ ಮದುವೆಯ ದಿನದಂದು
ಬೆಳೆದ ತನ್ನ ಮಗಳ ನೆನೆದು ಕಣ್ಣೀರು ತುಂಬಿ
ಕಾಬೂಲಿಗೆ ಮರಳಿದವನೂ ಎಂದು.

ಇಂದು –
ಕಾಬೂಲಿವಾಲಾ,
ಈಗ ಇದೆಲ್ಲಾ ಏನಾಗುತ್ತಿದೆ ನಿನ್ನ ನಾಡಿನಲ್ಲಿ
ಅಮೇರಿಕದ ವ್ಯಾಪಾರಿಮಳಿಗೆಯಡಿ
ಭಯೋತ್ಪಾದಕ ಪಾತಕಿಗಳಿಗೆ ಸಿಲುಕಿ ಸತ್ತ
ಸಾವಿರಾರು ಅತ್ಮಗಳ ಶಾಪ.
ಕಾಬೂಲು ಕಂದಹಾರಗಳ ತುಂಬೆಲ್ಲ ಗುಂಡುರಾಶಿಗಳ ಸುರಿಮಳೆ
ಭೂಮಿಯೂ ನಡುಗಿ ಭ್ರೂಣಗಳು ಪಾತಿಸುತ್ತಿರುವದು,
ಮುಖ ಪಾದ ಕಾಣಿಸಿದ್ದಕ್ಕೆ
ಹಾಡೇ ಹಗಲು ಹೆಂಗಸರನು ಕೊಂದು
ಧರ್ಮಾಂಧತೆಯಲಿ ಮೆರೆದ ತಾಲಿಬಾನ್ ತಲೆಹಿಡುಕರು
ಮುಗ್ಧತೆಯಲಿ ಕಕ್ಕಾಬಿಕ್ಕಿಯಾಗಿ ಬಿಕ್ಕುವ
ತೊಟ್ಟಿಕ್ಕುವ ಕಣ್ಣೀರು ಕಥೆಗಳು.

ಈಗ-
ಜಗಗೆಲ್ಲ ಬಯಸುವ ಕ್ರೂರಿಗಳನು ಹಿಮ್ಮೆಟ್ಟಿಸಲು
ನೀನು ಹೆಗಲಿಗೆ ಬಂದೂಕು ಏರಿಸಿದ್ದು ತಪ್ಪೇನಿಲ್ಲ,
ಸುಕ್ಕುಗಟ್ಟಿದ ನಿನ್ನ ಹಣೆಯ ಗೆರೆಗಳ ತುಂಬ ಬೆವರು
ಅದರೊಳಗೆ ಮೆತ್ತಿದ ಭೂಮಿಯ ದುರಂತ ಧೂಳು
ಸಾವು ನೋವಿನ ವ್ಯಥೆಯ ಹಾಡುಗಳಿಗೆ
ಕೊನೆ ಎಂದು? ಹೇಗೆ?

ಪ್ರೀತಿವಿಶ್ವಾಸತೆಗೆ ಏನೆಲ್ಲ ಗೆಲ್ಲುವ ಶಕ್ತಿ ಇದೆ
ಗಾಂಧಿ ಹೇಳಿದ್ದು, ಅಂದು ನೀನೂ ಹೇಳಿದ್ದೆ, ನೆನಪಿಸಿಕೋ-
ಕಲ್ಲು ಸಕ್ಕರೆ ಪ್ರೀತಿಯಿಂದ ಕೊಡುತ್ತಿದ್ದ ನಿನ್ನ ಕೈ
ಈಗ ಬಂದೂಕು ಹಿಡಿದದ್ದು
ತಪ್ಪೋ ಒಪ್ಪೋ ಒಂದಿಷ್ಟು ಯೋಚಿಸು
ಯಾರೋ ಮಾಡುವ ತಪ್ಪಿಗೆ
ಯಾರ್ಯಾರೋ ಅನುಭವಿಸುವ ತಳಮಳ.

“ಖಂಡಿಸಬೇಕಾಗಿದೆ ಯುದ್ಧ ಕೊಲೆ
ಬೆಳೆಸಿಕೊಳ್ಳಬೇಕಾಗಿದೆ ನಾಗರಿಕತೆ.
ಎಂದೇ ಟ್ಯಾಂಕರು ಬಂಕರು ಬಂದೂಕು
ಮಿಸೈಲ್ಸ್‌ಗಳ ಕ್ರೂರ ತಲೆಗಳ ತುಂಬೆಲ್ಲ
ಪ್ರೀತಿವಿಶ್ವಾಸಗಳ ಕಲ್ಲು ಸಕ್ಕರೆ ತುಂಬಿಸಿ
ಭಯೋತ್ಪಾದಕರಿಗೆ ಸವಾಲೊಡ್ಡಿದರೆ
ಶಾಂತಿ ನೆಲೆಸೀತು ನಮ್ಮ ನಿಮ್ಮೆಲ್ಲರ ನಾಡುಗಳಲಿ”
******
(ರವೀಂದ್ರನಾಥ್ ಟ್ಯಾಗೂರ ಅವರ ಕಥೆ “ಕಾಬೂಲಿವಾಲಾ” ನೆನಪಿಸಿಕೊಂಡು, ಈಗ ಕಾಬೂಲಿವಾಲಾ ಉತ್ತರ ಮೈತ್ರಿಕೂಟದಲ್ಲೊಬ್ಬ ಎಂದೇ ತಿಳಿದುಕೊಂಡು ಅವನೊಂದಿಗೆ ಒಂದೆರಡು ಮಾತುಗಳು)
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...