ಕಾಬೂಲಿವಾಲಾ

ಅಂದು –
ಉದ್ದನೆಯ ದಾಡಿ ತಲೆಗೆ ಸಡಿಲಾದ ಪೇಟಾ
ಕಂದುಬಣ್ಣದ ದೊಗಲೆ ಜುಬ್ಬಾ
ಹೆಗಲ ಮೇಲಿನ ಕೋಲಿನ ಅಂಚಿಗೆ
ತೂಗಾಡುವ ಬುಟ್ಟಿಗಳು
ಬದಾಮ್ ಪಿಸ್ತಾ ಕಲ್ಲುಸಕ್ಕರೆ ಒಂದೆಡೆ
ಮತ್ತೊಂದೆಡೆ ಉಪ್ಪುಪ್ಪಿನ ಕಡಲೇಬೀಜಗಳು
ನನಗಿನ್ನೂ ಚೆನ್ನಾಗಿ ನೆನಪಿದೆ
ಅತನೇ ಕಾಬೂಲಿವಾಲಾ ಎಂದು.
ಕಾಬೂಲು ಕಂದಹಾರ ಸುತ್ತಾಡಿ
ಹೆಂಡತಿ ಮಕ್ಕಳನು ಬಿಟ್ಟು
ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದಿದ್ದವನೂ ಎಂದು-
ಅದೇ ಅದೇ ನನ್ನ ಮದುವೆಯ ದಿನದಂದು
ಬೆಳೆದ ತನ್ನ ಮಗಳ ನೆನೆದು ಕಣ್ಣೀರು ತುಂಬಿ
ಕಾಬೂಲಿಗೆ ಮರಳಿದವನೂ ಎಂದು.

ಇಂದು –
ಕಾಬೂಲಿವಾಲಾ,
ಈಗ ಇದೆಲ್ಲಾ ಏನಾಗುತ್ತಿದೆ ನಿನ್ನ ನಾಡಿನಲ್ಲಿ
ಅಮೇರಿಕದ ವ್ಯಾಪಾರಿಮಳಿಗೆಯಡಿ
ಭಯೋತ್ಪಾದಕ ಪಾತಕಿಗಳಿಗೆ ಸಿಲುಕಿ ಸತ್ತ
ಸಾವಿರಾರು ಅತ್ಮಗಳ ಶಾಪ.
ಕಾಬೂಲು ಕಂದಹಾರಗಳ ತುಂಬೆಲ್ಲ ಗುಂಡುರಾಶಿಗಳ ಸುರಿಮಳೆ
ಭೂಮಿಯೂ ನಡುಗಿ ಭ್ರೂಣಗಳು ಪಾತಿಸುತ್ತಿರುವದು,
ಮುಖ ಪಾದ ಕಾಣಿಸಿದ್ದಕ್ಕೆ
ಹಾಡೇ ಹಗಲು ಹೆಂಗಸರನು ಕೊಂದು
ಧರ್ಮಾಂಧತೆಯಲಿ ಮೆರೆದ ತಾಲಿಬಾನ್ ತಲೆಹಿಡುಕರು
ಮುಗ್ಧತೆಯಲಿ ಕಕ್ಕಾಬಿಕ್ಕಿಯಾಗಿ ಬಿಕ್ಕುವ
ತೊಟ್ಟಿಕ್ಕುವ ಕಣ್ಣೀರು ಕಥೆಗಳು.

ಈಗ-
ಜಗಗೆಲ್ಲ ಬಯಸುವ ಕ್ರೂರಿಗಳನು ಹಿಮ್ಮೆಟ್ಟಿಸಲು
ನೀನು ಹೆಗಲಿಗೆ ಬಂದೂಕು ಏರಿಸಿದ್ದು ತಪ್ಪೇನಿಲ್ಲ,
ಸುಕ್ಕುಗಟ್ಟಿದ ನಿನ್ನ ಹಣೆಯ ಗೆರೆಗಳ ತುಂಬ ಬೆವರು
ಅದರೊಳಗೆ ಮೆತ್ತಿದ ಭೂಮಿಯ ದುರಂತ ಧೂಳು
ಸಾವು ನೋವಿನ ವ್ಯಥೆಯ ಹಾಡುಗಳಿಗೆ
ಕೊನೆ ಎಂದು? ಹೇಗೆ?

ಪ್ರೀತಿವಿಶ್ವಾಸತೆಗೆ ಏನೆಲ್ಲ ಗೆಲ್ಲುವ ಶಕ್ತಿ ಇದೆ
ಗಾಂಧಿ ಹೇಳಿದ್ದು, ಅಂದು ನೀನೂ ಹೇಳಿದ್ದೆ, ನೆನಪಿಸಿಕೋ-
ಕಲ್ಲು ಸಕ್ಕರೆ ಪ್ರೀತಿಯಿಂದ ಕೊಡುತ್ತಿದ್ದ ನಿನ್ನ ಕೈ
ಈಗ ಬಂದೂಕು ಹಿಡಿದದ್ದು
ತಪ್ಪೋ ಒಪ್ಪೋ ಒಂದಿಷ್ಟು ಯೋಚಿಸು
ಯಾರೋ ಮಾಡುವ ತಪ್ಪಿಗೆ
ಯಾರ್ಯಾರೋ ಅನುಭವಿಸುವ ತಳಮಳ.

“ಖಂಡಿಸಬೇಕಾಗಿದೆ ಯುದ್ಧ ಕೊಲೆ
ಬೆಳೆಸಿಕೊಳ್ಳಬೇಕಾಗಿದೆ ನಾಗರಿಕತೆ.
ಎಂದೇ ಟ್ಯಾಂಕರು ಬಂಕರು ಬಂದೂಕು
ಮಿಸೈಲ್ಸ್‌ಗಳ ಕ್ರೂರ ತಲೆಗಳ ತುಂಬೆಲ್ಲ
ಪ್ರೀತಿವಿಶ್ವಾಸಗಳ ಕಲ್ಲು ಸಕ್ಕರೆ ತುಂಬಿಸಿ
ಭಯೋತ್ಪಾದಕರಿಗೆ ಸವಾಲೊಡ್ಡಿದರೆ
ಶಾಂತಿ ನೆಲೆಸೀತು ನಮ್ಮ ನಿಮ್ಮೆಲ್ಲರ ನಾಡುಗಳಲಿ”
******
(ರವೀಂದ್ರನಾಥ್ ಟ್ಯಾಗೂರ ಅವರ ಕಥೆ “ಕಾಬೂಲಿವಾಲಾ” ನೆನಪಿಸಿಕೊಂಡು, ಈಗ ಕಾಬೂಲಿವಾಲಾ ಉತ್ತರ ಮೈತ್ರಿಕೂಟದಲ್ಲೊಬ್ಬ ಎಂದೇ ತಿಳಿದುಕೊಂಡು ಅವನೊಂದಿಗೆ ಒಂದೆರಡು ಮಾತುಗಳು)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದಿರನಿಗೊಂದು ಲಾಲಿ ಹಾಡು
Next post ದಿಕ್ಕು

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…