ಚಂದಿರನಿಗೊಂದು ಲಾಲಿ ಹಾಡು

ತಿಳಿ ನೀಲಿಯಾಗಸದಿ
ಕರಿಮುಗಿಲ ಹಿಂಡು
‘ಜೋಕುಮಾರನೆ ಚಂದಿರ’ ಮರೆತೆಯಲ್ಲೋ
ಬೆಳ್ಳಂಬೆಳಕಿನ ನಗುವ

ಉಂಡು ಮಲಗುವ ಮಂಚ
ಅವ್ವನ ಹರಿದ ಸೀರೆಯ ಕೌದಿ
ನಿನ್ನ ಅಪ್ಪುಗೆಯಿರದೆ ಚಂದಿರ
ಮೌನ ತಾಳಿವೆಯಲ್ಲೋ ತಣ್ಣಗೆ

ಹೆಬ್ಬಾವಿನೊಲು ಹೊರಳುವ
ಹಾದಿಗೆ ಸಾಲು ದೀಪಗಳು
ಕತ್ತಲೆಯೊಂದಿಗೆ ಕುಸ್ತಿ ಗೆದ್ದವನಾರು?
ಚಂದಿರ ನಿನ್ನ ಬೆಳದಿಂಗಳು ಕಿಲುಬು ಕಾಸೋ

‘ಬಣ್ಣದ ಡಬ್ಬಿಗಳು’ ಕತೆ
ಹೇಳುವ ಗುಡಿಸಲಿನಲ್ಲಿ ಮಿಣುಕು
ನಕ್ಷತ್ರಗಳು ಇಣುಕಿ ನೋಡುವುದಿಲ್ಲ
ಬೆಳ್ಳಿಬೆಟ್ಟದ ಚಂದಿರ ಬೆಳ್ಳಗಾದೆಯಲ್ಲೋ

ಕನಸುಗಳಿಲ್ಲದ ಇರುಳ ಹೆಣ್ಣಿಗೆ
ಹಗಲ ನಾಚಿಸುವ ಬೆಳಕಿನ ಸಿಂಗಾರ
‘ಚಂದಿರ’ ಎಲ್ಲೋ ಕೇಳಿದ ಹೆಸರು
ಯಾರ ಮನೆಯ ಮಗನಿವನು?

ಕಂಕುಳ ಕಂದನಿಗೆ ಉಣ್ಣಿಸಬೇಕು
ತೂಕಡಿಸುವ ಕಣ್ಣಿಗೆ ಕತೆ ಹೇಳಬೇಕು
ಎಲ್ಲಿ ಹೋದೆಯೋ ಬೆಳಕಿನ ತುಂಡೇ,
ಮಹಡಿ ಮನೆಗಳ ನಡುವೆ ‘ಚಂದಮಾಮ’???
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನ ನಾನು ಪಡೆವುದೆಂದಿಗೆ?
Next post ಕಾಬೂಲಿವಾಲಾ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…