Home / ಕವನ / ಕವಿತೆ / ಬಮಿಯಾನ್ ಬುದ್ಧ ಮತ್ತು ಪಾರಿವಾಳ

ಬಮಿಯಾನ್ ಬುದ್ಧ ಮತ್ತು ಪಾರಿವಾಳ

ಅತೃಪ್ತ ತಾಲಿಬಾನ್‌ಗಳ ನಡುವೆ
ಇಷ್ಟು ವರುಷಗಳು ಹೇಗಿದ್ದಿಯೋ ಬುದ್ಧ.
ಜಾತಿ ಮತಗಳನೆಲ್ಲ ಮರೆತು
ಮಾನವೀಯತೆಯೇ ಮುಖ್ಯ ಎಂದು
ತಿಳಿಹೇಳಿದ ನಿನ್ನೆದೆಗೆಽ ಗುಂಡುಗಳ ಸುರಿಮಳೆ!

ಮೂಲಭೂತವಾದಿಗಳ ಮಾತು
‘ಅವು ಕೇವಲ ಕಲ್ಲು ಮಾತ್ರ’ ಕೇಳಿಸಿರಬೇಕು.
ಧರ್ಮಾಂಧರ ನಾಡಿನಲಿ ಇನ್ನೂ ಮೌನವೇಕೆ ಬುದ್ಧಾ,
ವಿಕೃತಮನಸುಗಳನು ಕುಲುಮೆಗೆ ಹಾಕು
ಮೈಗೆ ಹೊಲಸುಹತ್ತಿದರೆ ತೊಳೆಯಬಹುದು
ಅದರೆ ಅವರ ಮನಸ್ಸಿಗೆಽ ಹತ್ತಿದೆಯಲ್ಲ ಬುದ್ಧ!?

ನಿನ್ನೆದೆ ಛಿದ್ರಗೊಳಿಸಿದ್ದು
ಅಮೇರಿಕದ ವಾಣಿಜ್ಯ ಸಂಕೀರ್ಣ ಬಿದ್ದದ್ದು-
ದಿವ್ಯ ಮೌನದೊಳಗೂ ಜನರಯಾತನೆಗಳೊಳಗೂ
ಕಾಣಿಸಿತು ಬುದ್ಧಾ ನಿನ್ನ ಕೋಪ ಶಾಪ.
ಅಪಘಾನ ಬೆಟ್ಟ ಕಂದರಗಳ ಎದೆ‌ಎದೆಗೆ
ಗುಂಡಿನಧಾಳಿಗಳ ಅಬ್ಬರ ಏರಿ ಸೂರಾಡಿದ್ದು.

ನೀನು ಜಗದಗಲ ಮುಗಿಲೆತ್ತರ
ಅನಂತ ಅದ್ಭುತಗಳ ದಿವ್ಯಚೇತನ
ಕ್ಷಮಿಸು ತಿಳಿಸು ಹಾರೈಸು
ಬುದ್ಧಿಹೀನ ಮಂದೆಯವುಗಳ
‘ಹಾರಲಿ ಪಾರಿವಾಳ ನಿನ್ನೆದೆಯಿಂದ ಅವರೆದೆಗೆ’
—-
ಹಿಂಸೆ ಮನುಷ್ಯನ ಕೆಲಸವಲ್ಲ ಅದು ರಾಕ್ಷಸೀ ಕೆಲಸ
-ಗೌತಮಬುದ್ದ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...