ಬಮಿಯಾನ್ ಬುದ್ಧ ಮತ್ತು ಪಾರಿವಾಳ

ಅತೃಪ್ತ ತಾಲಿಬಾನ್‌ಗಳ ನಡುವೆ
ಇಷ್ಟು ವರುಷಗಳು ಹೇಗಿದ್ದಿಯೋ ಬುದ್ಧ.
ಜಾತಿ ಮತಗಳನೆಲ್ಲ ಮರೆತು
ಮಾನವೀಯತೆಯೇ ಮುಖ್ಯ ಎಂದು
ತಿಳಿಹೇಳಿದ ನಿನ್ನೆದೆಗೆಽ ಗುಂಡುಗಳ ಸುರಿಮಳೆ!

ಮೂಲಭೂತವಾದಿಗಳ ಮಾತು
‘ಅವು ಕೇವಲ ಕಲ್ಲು ಮಾತ್ರ’ ಕೇಳಿಸಿರಬೇಕು.
ಧರ್ಮಾಂಧರ ನಾಡಿನಲಿ ಇನ್ನೂ ಮೌನವೇಕೆ ಬುದ್ಧಾ,
ವಿಕೃತಮನಸುಗಳನು ಕುಲುಮೆಗೆ ಹಾಕು
ಮೈಗೆ ಹೊಲಸುಹತ್ತಿದರೆ ತೊಳೆಯಬಹುದು
ಅದರೆ ಅವರ ಮನಸ್ಸಿಗೆಽ ಹತ್ತಿದೆಯಲ್ಲ ಬುದ್ಧ!?

ನಿನ್ನೆದೆ ಛಿದ್ರಗೊಳಿಸಿದ್ದು
ಅಮೇರಿಕದ ವಾಣಿಜ್ಯ ಸಂಕೀರ್ಣ ಬಿದ್ದದ್ದು-
ದಿವ್ಯ ಮೌನದೊಳಗೂ ಜನರಯಾತನೆಗಳೊಳಗೂ
ಕಾಣಿಸಿತು ಬುದ್ಧಾ ನಿನ್ನ ಕೋಪ ಶಾಪ.
ಅಪಘಾನ ಬೆಟ್ಟ ಕಂದರಗಳ ಎದೆ‌ಎದೆಗೆ
ಗುಂಡಿನಧಾಳಿಗಳ ಅಬ್ಬರ ಏರಿ ಸೂರಾಡಿದ್ದು.

ನೀನು ಜಗದಗಲ ಮುಗಿಲೆತ್ತರ
ಅನಂತ ಅದ್ಭುತಗಳ ದಿವ್ಯಚೇತನ
ಕ್ಷಮಿಸು ತಿಳಿಸು ಹಾರೈಸು
ಬುದ್ಧಿಹೀನ ಮಂದೆಯವುಗಳ
‘ಹಾರಲಿ ಪಾರಿವಾಳ ನಿನ್ನೆದೆಯಿಂದ ಅವರೆದೆಗೆ’
—-
ಹಿಂಸೆ ಮನುಷ್ಯನ ಕೆಲಸವಲ್ಲ ಅದು ರಾಕ್ಷಸೀ ಕೆಲಸ
-ಗೌತಮಬುದ್ದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಮರದ ಕಥೆ
Next post ಬದುಕು

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…