ಒಂದು ಮರದ ಕಥೆ

ಅಜ್ಜ ನೆಟ್ಟ ಬೇವಿನ ಮರ
ಥೇಟ್ ಅಮ್ಮ ಅಪ್ಪ
ರಂತೆ ಮೈ ತುಂಬಾ
ನವಿಲುಗರಿಯ ನವಿರು ಪ್ರೀತಿ

ಕಳೆದವಲ್ಲ ವರ್ಷ ಹಲವು
ಹರ್ಷ ಜಿಗಿತ ಹಾಗೆ ನಲಿವು

ಮಳೆಯ ಹನಿ ಇಳೆಗೆ
ಅಮ್ಮ ಕೊಟ್ಟ ಮುತ್ತು
ಜಾರುವುದು ಸೆರಗ ಅಂಚಿನಿಂದ

ಚಳಿಗಾಲದಿ ಚಳಿ ಸುಳಿಯದು
ಇರಲು ಅಪ್ಪನಂತೆ ಮರವು
ಹಸಿರು ಕಂಬಳಿಯ ಬಲವು

ಬಿಸಿಲು ಬಂದರೆ ರಣರಣ
ಊರತುಂಬಾ ಬೆಂಕಿ ಭಣಭಣ
ಉರಿವ ಸೂರ್ಯನಿಲ್ಲಿ ಚಂದಿರ
ಮರವು ಹೂವಿನ ಹಂದರ

ಕೊಂಬೆ ರೆಂಬೆಗಳ ತುಂಬಾ
ಕಾಗೆ ಗುಬ್ಬಿಗಳ ಗೂಡು
ವಂಸತಕ್ಕೊಮ್ಮೆ ಕೋಗಿಲೆಯ ಹಾಡು

ಮನೆ ಮಂದಿ ಹರಟಿದ್ದು
ಮಕ್ಕಳು ಮರಕೋತಿಯಾಡಿದ್ದು
ನಮ್ಮೊಂದಿಗೆ ಮರವೂ ನಕ್ಕದ್ದು
ಯಾವ ಬ್ಯಾಂಕಿನ ಲೆಕ್ಕದಲ್ಲಿ?

ಒಂದು ಸುಡು ಬಿಸಿಲ ಮಧ್ಯಾಹ್ನ
ಕೇಕೆ ಹಾಕಿತು ಕೊಡಲಿ
ರಕ್ಕೆ ಬಡಿಯಿತು ಹಕ್ಕಿ
ಮರವು ಚೀರಿತು ಉರುಳುತ…

ಈಗ
ಅಪ್ಪ ಒಂದು ನೆನಪು
ಅಮ್ಮ ಒಂದು ಬಿಕ್ಕಳಿಕೆ
ಅಂಗಳವೊಂದು ಸ್ಮಶಾನ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ?
Next post ಬಮಿಯಾನ್ ಬುದ್ಧ ಮತ್ತು ಪಾರಿವಾಳ

ಸಣ್ಣ ಕತೆ

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…