ಚಂದ್ರೋದಯ

ಪೂರ್‍ವ ವಧುವಿನ ಮನೆಗೆ ಕೊಳ್ಳೆ ಹೊಡೆದರೂ ಸುರರು!
ಸಾಂದ್ರನಂದನವನದಿ ಕಾಳ್ಗಿಚ್ಚು ಕತ್ತಲೆಯ-
ನಣಕವಾಡುತಲಿತ್ತೊ ! ಆದಿಪ್ರಭೆ ಬತ್ತಲೆಯ
ಬೆಡಗಿನಲಿ ಕಂಡಿತ್ತೋ ! ಮದುವೆಯಲ್ಲಿ ಕಿನ್ನರರು
ಹಿಡಿದಿರುವ ಹಿರಿಹಿಲಾಲುಗಳ ಬೆಳಕಿನ ವಸರು
ನಭದಲಿಂತೆಸೆದಿತ್ತೊ ! ಸುರಹೊನ್ನಿಗಳ ತಲೆಯ
ತರಿದೊಟ್ಟಿ ಕೂಡಿಸಿದ ಹೊನ್ನ ರಸದೋಕುಳಿಯ-
ನೆರಚಿದಂತಾಗಿತ್ತೊ, – ಚಂದ್ರೋದಯದ ಒಸರು !

ಕಳ್ಳು ಕುಡಿದ ಪ್ರಮತ್ತ ಪ್ರಮದೆಯರ ಮುಖಮುದ್ರೆ-
ಯನು ತಳೆದು ಮೆಲ್ಲನುದಯಿಸಿ ಬಂದ ಚಂದ್ರಮನು!
ತನ್ನ ಬರವನೆ ಕಾಯ್ವ ಕಣ್ಣು – ಕನ್ನೈದಿಲೆಯ
ಸಾಸಿರವ ಕಂಡು ಕನಸನು ತೊರೆದು ಸುಖನಿದ್ರೆ-
ಯನು ಮರೆದು, ಓಲಗಿಸಲೆಂದು ಬಂದಿರುವರನು
ಓಲಾಡಿಸಿದ ಕಾಂತನಾಗಿ ಪಾಲಿಸುತಿಳೆಯ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುದ್ದು ಕಂದನ ವಚನಗಳು : ನಾಲ್ಕು
Next post ಕಾಡುತಾವ ನೆನಪುಗಳು – ೧

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys