ಮುದ್ದು ಕಂದನ ವಚನಗಳು : ನಾಲ್ಕು

ಬದುಕು
ನಟ್ಟು ಕಡಿಯುವ ಶರಣ ಒಡ್ಡು ಕಟ್ಟುವ ಶರಣ
ರೊಟ್ಟಿ ತಟ್ಟುವ ಕೈಯೆ ತಾಯಿ ಶರಣ
ಬದುಕು ಹೆಂಗೊ ಹಾಂಗ ಬದುಕಿ ನಿಂದವ ಶರಣ
ಶೂರನೇ ಶಿವಶರಣ ಮುದ್ದುಕಂದ

ಶರಣ
ಮೂರ್‍ಹೊತ್ತು ಮಡಿಸ್ನಾನ ಉಪವಾಸ ವನವಾಸ
ಯಾವ ಆಯಾಸಕ್ಕು ಶರಣನಿಲ್ಲ
ಉಂಡು ನಕ್ಕವ ಶರಣ ಉಟ್ಟು ನಕ್ಕವ ಶರಣ
ಜನತತ್ತ್ವ ಶರಣತ್ವ ಮುದ್ದುಕಂದ

ಸಿನಿಮಾ
ಪ್ರೇಮವೆಂಬುದು ಮಾನ ಮೌನ ಮಂದಿರ ಗಾನ
ಸಿನಿಮಾದ ಶೈಲಿಯಲಿ ಜಾರಬೇಡ
ನಿನ್ನ ಸಿನಿಮಾದೊಳಗ ನೀನೊಬ್ಬ ಡೈರೆಕ್ಟರ
ನೀನಾಗು ಯಾಕ್ಟರ ಮುದ್ದುಕಂದ.

ಙಾನ
ತೆಂಗಿನಾ ಎಳನೀರು ಮುಗಿಲ ಲೋಕದ ಖೀರು
ನೀ ಕುಡಿದು ನೋಡೊಮ್ಮೆ ಪುಟ್ಟ ಕಂದ
ತೆಂಗಿನಾಚೆಯ ತೆಂಗು ಜ್ಞಾನವೃಕ್ಷದ ಗುಂಗು
ಕುಡಿಯ ಬಲ್ಲೆಯ ಕಂದ ಮುದ್ದುಕಂದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತುಂಟಾಟದ ಕವಿ ಎಚ್‌.ಎಸ್‌.ಬಿಳಿಗಿರಿ
Next post ಚಂದ್ರೋದಯ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…