ನೆತ್ತರಲ್ಲಿ ನೆಂದ ಹೂವು

ನನ್ನ ಈ ನಾಡಿನಲ್ಲಿ
ಭವ್ಯ ನಾಮ ಬೀಡಿನಲ್ಲಿ
ಬೇಗೆಯೇ ಬೆಟ್ಟವಾಗಿ
ಉತ್ತರಕ್ಕೆ ಕಾವಲು.
ಬೆವರೆಲ್ಲ ನದಿಗಳಾಗಿ
ಮೂರು ದಿಕ್ಕು ಕಡಲು.

ಅತ್ತ ಬೆಟ್ಟ ಇತ್ತ ನೀರು
ನಡುವೆ ನಗಲು ಎದ್ದವು-
ಮೂಳೆಗಳೇ ಮರಗಳಾಗಿ
ಆಸೆ ಹಸಿರು ಎಲೆಗಳು.
ಕನಸು ಬಿರಿವ ಹೂವು-
ಕಾಯಿ ನೆಲದ ಕಣ್ಗಳು.

ನನ್ನ ಈ ನಾಡಿನಲ್ಲಿ
ಮೇಲೆ ಮಹಲು ಮೋಡದಲ್ಲಿ
ಸೂರ್‍ಯ ಸಿಟ್ಟು ಸಹನೆ ಮೀರಿ
ತೆರೆಯ ಹರಿದು ಬಂದಿತು,
ಬೆಳಕ ಸೆರೆಯ ಬಿತ್ತಿ ಇಲ್ಲಿ
ಕತ್ತಿ ಹಿಡಿದು ನಿಂತಿತು.

ಸೆರೆಯ ಸಂಚು ಸರಳಿನಲ್ಲಿ
ಖಡ್ಗದಾಳಿ ಉರುಳಿನಲ್ಲಿ
ನಗಲು ಎದ್ದ ನೆಲದ ಮರ
ನರಳಿ ಬಿದ್ದವು
ತತ್ತರಿಸಿದ ಹೂವು ಉದುರಿ
ನೆತ್ತರಲ್ಲಿ ನೆಂದವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವಾಲಯ ಸಂಸ್ಕೃತಿಯ ಬಹುಮುಖಿ ಆಯಾಮಗಳು
Next post ಯಾರು ನಿನಗೆ ಸಮಯದಿ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…