Home / ಕವನ / ಕವಿತೆ / ಯಾರು ನಿನಗೆ ಸಮಯದಿ

ಯಾರು ನಿನಗೆ ಸಮಯದಿ

ಯಾರು ನಿನಗೆ ಸಮಯದಿ
ಸಹಾಯ ಮಾಡುವರೋ
ಅವರ ಸ್ನೇಹ ಮಾಡಿಕೊ|
ಯಾರು ನಿನ್ನ ಹಿತವ ಕೋರುವರೋ
ಅವರನೇ ಬಂಧು ಎಂದುಕೊ|
ಎಲ್ಲೇ ಇರಲಿ ಹೇಗೇ ಇರಲಿ
ಒಳ್ಳೆಯತನವ ಬೆಳೆಸಿಕೊ||

ನಿನ್ನ ಬಾಲ್ಯ ಗೆಳೆಯ ನಿನಗೆ
ಸಮಯದಿ ಸಿಗದಿರಬಹುದು|
ನಿನ್ನ ಆತ್ಮೀಯ ಬಂಧುಗಳು
ತಟ್ಟನೆ ಕಷ್ಟಕಾಗದಿರಲೂ ಬಹುದು|
ಸಮಯಗೊದಗಿದವರೇ ನಿನ್ನ ಸ್ನೇಹಿತರು
ಹತ್ತಿರವಿದ್ದವರೇ ನಿನ್ನ ಬಂಧುಗಳೆಂದುಕೊ||

ನೀನೂ ನಿನ್ನ ಸ್ನೇಹಿತನಿಗೆ
ಸಮಯಕಾಗದಿರಬಹುದು!
ಎಂದಮಾತ್ರಕೆ ನೀ ಅವನ
ಆಪ್ತವಿತ್ರನಲ್ಲವೇನು?|
ಅಷ್ಟೂ ದಿನದ ನಿನ್ನ ಸ್ನೇಹವನು
ಮರೆಯಲು ಸಾಧ್ಯವೇನು?
ಬಂಧುಗಳು ಸದಾ ಜೊತೆಗೆ
ಇಲ್ಲದಲೇ‌ಇರಬಹುದು
ಅಂದಮಾತ್ರಕೆ ಬಂಧುಗಳೇ
ಅಲ್ಲವೇನು?||

ಯಾರದೆಷ್ಟು ಪುಣ್ಯ ಇರುವುದೋ
ಅಷ್ಟೇ ಭಾಗ್ಯ ಸಿಗುವುದು|
ಯಾರಲಿ ನಿನ್ನ ಋಣವಿರುವುದೋ
ಅದುವೇ ಮಾತ್ರ ನಿನಗೆ ಲಭಿಸುವುದು|
ಸಂಬಂಧಗಳ ಬಂಧ ಅತೀ ಸೂಕ್ಷ್ಮ
ಒರೆಗಚ್ಚುವುದು ಅನುಮಾನಿಸುವುದು ತರವೇ|
ಗಾಜಿನಮನೆಯಲ್ಲಿದ್ದುಕೊಂಡು
ಬೇರೆಯವರ ಗಾಜಿನಮನೆಗೆ
ಕಲ್ಲು ತೂರುವುದು ನ್ಯಾಯವೇ?||
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...