ಯಾರು ನಿನಗೆ ಸಮಯದಿ

ಯಾರು ನಿನಗೆ ಸಮಯದಿ
ಸಹಾಯ ಮಾಡುವರೋ
ಅವರ ಸ್ನೇಹ ಮಾಡಿಕೊ|
ಯಾರು ನಿನ್ನ ಹಿತವ ಕೋರುವರೋ
ಅವರನೇ ಬಂಧು ಎಂದುಕೊ|
ಎಲ್ಲೇ ಇರಲಿ ಹೇಗೇ ಇರಲಿ
ಒಳ್ಳೆಯತನವ ಬೆಳೆಸಿಕೊ||

ನಿನ್ನ ಬಾಲ್ಯ ಗೆಳೆಯ ನಿನಗೆ
ಸಮಯದಿ ಸಿಗದಿರಬಹುದು|
ನಿನ್ನ ಆತ್ಮೀಯ ಬಂಧುಗಳು
ತಟ್ಟನೆ ಕಷ್ಟಕಾಗದಿರಲೂ ಬಹುದು|
ಸಮಯಗೊದಗಿದವರೇ ನಿನ್ನ ಸ್ನೇಹಿತರು
ಹತ್ತಿರವಿದ್ದವರೇ ನಿನ್ನ ಬಂಧುಗಳೆಂದುಕೊ||

ನೀನೂ ನಿನ್ನ ಸ್ನೇಹಿತನಿಗೆ
ಸಮಯಕಾಗದಿರಬಹುದು!
ಎಂದಮಾತ್ರಕೆ ನೀ ಅವನ
ಆಪ್ತವಿತ್ರನಲ್ಲವೇನು?|
ಅಷ್ಟೂ ದಿನದ ನಿನ್ನ ಸ್ನೇಹವನು
ಮರೆಯಲು ಸಾಧ್ಯವೇನು?
ಬಂಧುಗಳು ಸದಾ ಜೊತೆಗೆ
ಇಲ್ಲದಲೇ‌ಇರಬಹುದು
ಅಂದಮಾತ್ರಕೆ ಬಂಧುಗಳೇ
ಅಲ್ಲವೇನು?||

ಯಾರದೆಷ್ಟು ಪುಣ್ಯ ಇರುವುದೋ
ಅಷ್ಟೇ ಭಾಗ್ಯ ಸಿಗುವುದು|
ಯಾರಲಿ ನಿನ್ನ ಋಣವಿರುವುದೋ
ಅದುವೇ ಮಾತ್ರ ನಿನಗೆ ಲಭಿಸುವುದು|
ಸಂಬಂಧಗಳ ಬಂಧ ಅತೀ ಸೂಕ್ಷ್ಮ
ಒರೆಗಚ್ಚುವುದು ಅನುಮಾನಿಸುವುದು ತರವೇ|
ಗಾಜಿನಮನೆಯಲ್ಲಿದ್ದುಕೊಂಡು
ಬೇರೆಯವರ ಗಾಜಿನಮನೆಗೆ
ಕಲ್ಲು ತೂರುವುದು ನ್ಯಾಯವೇ?||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆತ್ತರಲ್ಲಿ ನೆಂದ ಹೂವು
Next post ಕೊರಗುತಿರುವೆದೆಗೆ ಬರೆ

ಸಣ್ಣ ಕತೆ

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…