ಶಾಂಡಿಲೀಯರ್

ನಡುರಾತ್ರಿಗೆ ಇನ್ನೇನು ಸ್ವಲ್ಪೇ ಸಮಯ –
ಮೇಜುವಾನಿಯ ಸಿಹಿ ಕಹಿಯಾಗಿ
ದೀಪ ಗುಚ್ಛಗಳೆಲ್ಲ ಚಿಲ್ಲಾಪಿಲಿಗಿಯಾಗುತ್ತವೆಂದು
ಯಾರಿಗೂ ಗೊತ್ತಿರಲಿಲ್ಲ.

ಮುಗುಳು ನಗುತ ನಿಸರ್ಗದಲಿ
ಅದ್ದಿ ಬಿಡುವ ನೇಪಾಳ
ಎಷ್ಟೊಂದು ಸಂತಸ ಸಡಗರ ಅರಮನೆಯೊಳಗೆ
ದೊರೆ ಬೀರೇಂದ್ರ ರಾಣಿ ಐಶ್ವರ್ಯ
ಯುವರಾಜ ದೀಪೇಂದ್ರ
ಎಂತೆಂತಹ ರತ್ನಗಳು
ಕಾಠ್ಮಂಡು ಒಡ್ಡೋಲಗಕೆ

ರಾಜಗಾಂಭೀರ್ಯದ ಹುಡುಗಿ ತರುವ ಆಸೆ
ರಾಜಮಾತೆಗೆ,
ಪ್ರೀತಿಸಿದ ಹುಡುಗಿ ಬೇಕೇ ಬೇಕು
ಮೀಸೆ ಮೂಡಿದೆ ಮದೋನ್ಮತ್ತ
ಯುವರಾಜನಿಗೆ.
ಮಾತಿಗೆ ಮಾತು ವರಸೆ ಬೆಂಕಿ.

ವಿಧಿಯೋ ವಿಚಿತ್ರ,
ಪ್ರೇಮದೈಸಿರಿಗೆ ಕಳಚಿಕೊಳ್ಳದ ಸಂಕೋಲೆ,
ಮಾತು ಚರ್ಚೆಗಳಿಗೆಲ್ಲ ಆವೇಶ
ಗುಂಡಿಗೆಯ ರಕ್ತದ ದುಡುಕುತನಕೆ
ಕಿಚ್ಚುಹೊತ್ತಿ ಸುಡುವ ಕೆನ್ನಾಲಿಗೆ.

ಕಾಲನ ಅವೇಶದ ಮುಂದೆ
ಮತಿಹೀನ ಯುವಕ
ರಾಜಗಾಂಭೀರ್ಯ ಧಿಕ್ಕರಿಸಿದ್ದು
ಯಮನ ಅಟ್ಟಹಾಸಕೆ ಕುಮ್ಮಕ್ಕು
ಕಗ್ಗತ್ತಲೆಯ ಕೆಸರಲಿ ಸಿಕ್ಕ ಕಾಲಕ್ಕೆ
ಚಲಿಸದ ಜಡತ್ವ.

ದವಡೆಮೀರಿದ ಕೋಪಾಗ್ನಿಯಲಿ
ಯುವರಾಜ ಕೈಗೆತ್ತಿದ ಬಂದೂಕು
ನುಗ್ಗಿ ನುಗ್ಗಿ ಬಂದ ಗುಂಡಿನಮಳೆಗೆ
ಒಂದೊಂದೇ ಕಳಚಿದವು
ಕಿರೀಟ ರತ್ನಗಳು,
ನೆತ್ತರ ಮಡುವಿನಲಿ ಮುಳುಗಿ
ಕಗ್ಗತ್ತಲ ಕಣಿವೆಯಲಿ ಹೆಣವಾದವು

ನೇಪಾಳದ ಅಂಗಳದ ತುಂಬೆಲ್ಲ
ರಕ್ತದೋಕುಳಿ ಕಿರುಚಾಟ ಹಾಲಾಹಲ
ಅರಮನೆಯ ದೀಪಗಳೆಲ್ಲ ಒಡೆದು ನುಚ್ಚುನೂರು
ಸುತ್ತೆಲ್ಲ ಕಪ್ಪು ಕತ್ತಲೆ!

(ದೇವಯಾನಿ ರಾಣಾಳ ಪ್ರೇಮಪಾಶಕ್ಕೆ ಸಿಲುಕಿದ ನೇಪಾಳದ ಯುವರಾಜ ಅವಿವೇಕಿಯಾಗಿ ಗುಂಡು ಹಾರಿಸಿ ಎಲ್ಲರನ್ನೂ ಕೊಂದು ತಾನೂ ಸತ್ತುಹೋದ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೯೭
Next post ನರಭಕ್ಷಕಿ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys