Home / ಕವನ / ಕವಿತೆ / ಶಾಂಡಿಲೀಯರ್

ಶಾಂಡಿಲೀಯರ್

ನಡುರಾತ್ರಿಗೆ ಇನ್ನೇನು ಸ್ವಲ್ಪೇ ಸಮಯ –
ಮೇಜುವಾನಿಯ ಸಿಹಿ ಕಹಿಯಾಗಿ
ದೀಪ ಗುಚ್ಛಗಳೆಲ್ಲ ಚಿಲ್ಲಾಪಿಲಿಗಿಯಾಗುತ್ತವೆಂದು
ಯಾರಿಗೂ ಗೊತ್ತಿರಲಿಲ್ಲ.

ಮುಗುಳು ನಗುತ ನಿಸರ್ಗದಲಿ
ಅದ್ದಿ ಬಿಡುವ ನೇಪಾಳ
ಎಷ್ಟೊಂದು ಸಂತಸ ಸಡಗರ ಅರಮನೆಯೊಳಗೆ
ದೊರೆ ಬೀರೇಂದ್ರ ರಾಣಿ ಐಶ್ವರ್ಯ
ಯುವರಾಜ ದೀಪೇಂದ್ರ
ಎಂತೆಂತಹ ರತ್ನಗಳು
ಕಾಠ್ಮಂಡು ಒಡ್ಡೋಲಗಕೆ

ರಾಜಗಾಂಭೀರ್ಯದ ಹುಡುಗಿ ತರುವ ಆಸೆ
ರಾಜಮಾತೆಗೆ,
ಪ್ರೀತಿಸಿದ ಹುಡುಗಿ ಬೇಕೇ ಬೇಕು
ಮೀಸೆ ಮೂಡಿದೆ ಮದೋನ್ಮತ್ತ
ಯುವರಾಜನಿಗೆ.
ಮಾತಿಗೆ ಮಾತು ವರಸೆ ಬೆಂಕಿ.

ವಿಧಿಯೋ ವಿಚಿತ್ರ,
ಪ್ರೇಮದೈಸಿರಿಗೆ ಕಳಚಿಕೊಳ್ಳದ ಸಂಕೋಲೆ,
ಮಾತು ಚರ್ಚೆಗಳಿಗೆಲ್ಲ ಆವೇಶ
ಗುಂಡಿಗೆಯ ರಕ್ತದ ದುಡುಕುತನಕೆ
ಕಿಚ್ಚುಹೊತ್ತಿ ಸುಡುವ ಕೆನ್ನಾಲಿಗೆ.

ಕಾಲನ ಅವೇಶದ ಮುಂದೆ
ಮತಿಹೀನ ಯುವಕ
ರಾಜಗಾಂಭೀರ್ಯ ಧಿಕ್ಕರಿಸಿದ್ದು
ಯಮನ ಅಟ್ಟಹಾಸಕೆ ಕುಮ್ಮಕ್ಕು
ಕಗ್ಗತ್ತಲೆಯ ಕೆಸರಲಿ ಸಿಕ್ಕ ಕಾಲಕ್ಕೆ
ಚಲಿಸದ ಜಡತ್ವ.

ದವಡೆಮೀರಿದ ಕೋಪಾಗ್ನಿಯಲಿ
ಯುವರಾಜ ಕೈಗೆತ್ತಿದ ಬಂದೂಕು
ನುಗ್ಗಿ ನುಗ್ಗಿ ಬಂದ ಗುಂಡಿನಮಳೆಗೆ
ಒಂದೊಂದೇ ಕಳಚಿದವು
ಕಿರೀಟ ರತ್ನಗಳು,
ನೆತ್ತರ ಮಡುವಿನಲಿ ಮುಳುಗಿ
ಕಗ್ಗತ್ತಲ ಕಣಿವೆಯಲಿ ಹೆಣವಾದವು

ನೇಪಾಳದ ಅಂಗಳದ ತುಂಬೆಲ್ಲ
ರಕ್ತದೋಕುಳಿ ಕಿರುಚಾಟ ಹಾಲಾಹಲ
ಅರಮನೆಯ ದೀಪಗಳೆಲ್ಲ ಒಡೆದು ನುಚ್ಚುನೂರು
ಸುತ್ತೆಲ್ಲ ಕಪ್ಪು ಕತ್ತಲೆ!

(ದೇವಯಾನಿ ರಾಣಾಳ ಪ್ರೇಮಪಾಶಕ್ಕೆ ಸಿಲುಕಿದ ನೇಪಾಳದ ಯುವರಾಜ ಅವಿವೇಕಿಯಾಗಿ ಗುಂಡು ಹಾರಿಸಿ ಎಲ್ಲರನ್ನೂ ಕೊಂದು ತಾನೂ ಸತ್ತುಹೋದ)
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...