ನಂಬಿದವರ ಎಂದೆಂದೂ ಕಾಯುವ ಗೋವಿಂದ

ನಂಬಿದವರ ಎಂದೆಂದೂ ಕಾಯುವ ಗೋವಿಂದ
ಬಿಡಿಸು ದಾಸಿ ಮೀರೆಯ ಲೋಕದ ಸುಳಿಯಿಂದ.

ನಾಮದೇವ ಗೃಹದ ಮುಂದೆ ಚಪ್ಪರವನು ಕಟ್ಟಿದೆ
ಧನ್ನಾಭಕ್ತನ ಹೊಲದಲಿ ಬೆವರ ಸುರಿಸಿ ಬಿತ್ತಿದೆ,
ಕರಮಾಬಾಯಿ ನೀಡಿದ ಖಿಚಡಿಯೆಲ್ಲ ತಿಂದೆ
ಭಕ್ತ ಕಬೀರನ ಮನೆಯ ಎತ್ತು ಹೊಡೆದು ತಂದೆ?

ಸವಿಯಿತ್ತೇ, ರುಚಿನೋಡಿ ಶಬರಿ ಆಯ್ದ ಬೋರೆ
ಹಿತವಿತ್ತೇ ಸುದಾಮನ ತಂಡುಲದ ಸೇವೆ,
ಕುಬ್ಜೆ ಕೊಟ್ಟ ಹೂವು ಗಂಧ ಪ್ರಿಯವಾಯಿತೆ ಹೇಗೆ
ಆ ಭಕ್ತಿಗೆ ನೇರವಾಯ್ತೆ ವಕ್ರ ದೇಹ ಮೋರೆ?

ಎಷ್ಟು ಕರೆಯಬೇಕೊ ನಿನ್ನ, ಕೇಳಿಸದೇ ಕಿವುಡ?
ಎಷ್ಟು ಹಾಡಿ ಕುಣಿದರೂ ಕಾಣಿಸದೇ ಕುರುಡ?
ಇಷ್ಟು ಕ್ರೂರಮನವು ಏಕೆ ಹೇಳೋ ಗಿರಿಧರನೆ?
ಈ ಮೀರಾ ಮೇಲೆ ತೋರೊ ಒಂದೇ ಹನಿ ಕರುಣೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಗ್ಗಟ್ಟು
Next post ಮಂಥನ – ೧೦

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

cheap jordans|wholesale air max|wholesale jordans|wholesale jewelry|wholesale jerseys