Home / ಲೇಖನ / ಇತರೆ / ಮೌನ ಮುರಿಯಲಿ

ಮೌನ ಮುರಿಯಲಿ

ಹಿಂದು ಮುಸ್ಲಿಮರ ಜಗಳ ನಿನ್ನೆ ಈವತ್ತಿನದಲ್ಲ, ಘಜ್ನಿ ಮಹಮದ್ ಕಾಲದಿಂದಲೂ ದಾಳಿ ನಡೆದಿದೆ. ವಿಗ್ರಹ ಭಜನೆ, ದೇವಾಲಯಗಳ ನಾಶ, ಅಂದಿನಿಂದ ಇಂದಿನವರೆಗೂ ನಡೆಯುತ್ತಾ ಬಂದಿದ್ದರೂ ಹಿಂದುಗಳು ಶಾಂತಿಮಂತ್ರ ಜಪಿಸುತ್ತಾ ಸೆಕ್ಯುಲರ್ ಪಾಠ ಬೋಧಿಸುತ್ತಾ ಸಹಬಾಳ್ವೆಗೆ ಒತ್ತು ನೀಡುತ್ತಾ ಆದಷ್ಟೂ ಶಾಂತಿಯುತವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ತಾಳ್ಮೆ ತೋರುತ್ತಿರುವುದು ಹೇಡಿತನದ ಲಕ್ಷಣವಲ್ಲ ಎಂಬುದನ್ನು ಮುಸ್ಲಿಂ ಬಾಂಧವರು ಅರಿಯುವ ಕಾಲವೀಗ ಬಂದಿದೆ. ಹಿಂದೂಗಳಲ್ಲಿ ತಾವು ಮಂದಿರ ಕಟ್ಟುವುದು ಬೇಡವೆಂದು ವಾದಮಾಡುವ ಬುದ್ಧಿಜೀವಿಳಿದ್ದಾರೆ, ಬರಹಗಾರರಿದ್ದಾರೆ, ಮೇಲಾಗಿ ಅನೇಕ ಮಠಾಧೀಶರು ಸಹ ರಾಮನ ಮಂದಿರ ನಿರ್ಮಾಣದಿಂದ ಸಮಾಜದ ಶಾಂತಿ ಕದಡುವುದಾದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗೋಣವೆಂದು ಹೇಳುತ್ತಿರುವುದಷ್ಟೇ ಅಲ್ಲ ಸರ್ಕಾರದ ಮೇಲೂ ಒತ್ತಡ ಹೇರುತ್ತಿದ್ದಾರೆ. ಹಿಂದೂಗಳ ಮೇಲೆ ಹಿಂಸೆ ದೌರ್ಜನ್ಯಗಳು ನಡೆದಾಗ ಶಾಂತಿ ಸಹನೆಯಿಂದ ವರ್ತಿಸುವ ಪ್ರಚೋದನಕಾರಿ ಹೇಳಿಕೆಗಳನ್ನು ನೀಡದೆ ಮೌನವಹಿಸುವ ಪರಿಪಾಠವನ್ನು ರೂಢಿಸಿಕೊಂಡಿದ್ದಾರೆ. ಇದರ ಅರ್ಥ ಇವರೆಲ್ಲ ಮುಸ್ಲಿಮರನ್ನು ಓಲೈಸುತ್ತಾರೆಂದಲ್ಲ. ದೇಶದಲ್ಲಿ ಪ್ರಕ್ಷುಬ್ದ ಮಾತಾವರಣ ಉಂಟಾಗಿ ಅಮಾಯಕರ ಕಗ್ಗೊಲೆಗಳು, ಆಸ್ತಿ-ಪಾಸ್ತಿಗಳಿಗೆ ಧಕ್ಕೆ ಉಂಟಾಗದಿರಲೆಂಬ ವಿವೇಚನೆಯೇ ಮೌನಕ್ಕೆ ಕಾರಣವಾಗಿದೆಯಷ್ಟೆ.

ನಮ್ಮಲ್ಲಿ ದೇವರೇ ಇಲ್ಲವೆಂದು ವಾದಿಸುವವರು, ದೇವಸ್ಥಾನ, ಮಠ, ಮಂದಿರಗಳಿಗೆ ಹೋಗದ ಲಕ್ಷಾಂತರ ಜನರಿದ್ದಾರೆ. ಬಸವಣ್ಣ, ಬುದ್ದರಂತಹ ವಿವೇಕಿಗಳು ದೇವಸ್ಥಾನ ಮಠ ಮಂದಿರಗಳನ್ನು ಟೀಕಿಸಿದ್ದಾರೆ. ದೇವರು ಹೊರಗೆಲ್ಲೂ ಇಲ್ಲಾ ನಮ್ಮೊಳಗೆಯೇ ಇದ್ದಾನೆಂದು ಸಾರಿದ್ದಾರೆ. ಸಹಸ್ರಾರು ಜಾತಿಗಳಿದ್ದರೂ ಹಿಂದೂಗಳು ಮೊದಲು ತಾವು ಭಾರತೀಯರು ಎಂಬುದನ್ನು ಮರೆತವರಲ್ಲ, ಧರ್ಮದ ಹೆಸರಿನಲ್ಲಿ ದೇಶವನಾಳುವ, ದೇಶಕ್ಕೆ ಕಿಚ್ಚು ಹಚ್ಚುವ ಜನರನ್ನು ಹೀನಾಯವಾಗಿ ಕಂಡು ಅಂತಹವರಿಗೆ ಚುನಾವಣೆಗಳಲ್ಲಿ ತಕ್ಕ ಪಾಠವನ್ನು ಕಲಿಸುತಾರೆಂಬುದಕ್ಕೆ ಮೊನ್ನೆ ನಡೆದ ಚುನಾವಣೆಗಳೇ ಸಾಕ್ಷಿ. ನಮ್ಮಲ್ಲಿ ಮುಸ್ಲಿಮರನ್ನು, ಕ್ರೈಸ್ತರನ್ನೂ ಮೊದಲಿನಿಂದಲೂ ಸೋದರ ಭಾವದಿಂದ ಅನುಕಂಪದಿಂದ ನೋಡಲಾಗುತ್ತಿದೆ. ಇವರೆಲ್ಲಾ ಒಂದು ಕಾಲದಲ್ಲಿ ಹಿಂದೂಗಳೇ ಆಗಿದ್ದವರಲ್ಲವೆ ಎಂದವರ ಪರವಾಗಿ ಭಾವನಾತ್ಮಕವಾಗಿ ಸ್ಪಂದಿಸುವ ಸಹೃದಯಿಗಳಿದ್ದಾರೆ.

ಇಂತಹದ್ದೇ ಮನೋಭಾವ, ಪ್ರೀತಾದರ, ಸಹೋದರ ಭಾವ, ತ್ಯಾಗಶೀಲತೆ, ಪರಿಶುದ್ಧ ಆಲೋಚನೆ ಸೆಕ್ಯುಲರ್ ದೇಶದಲ್ಲಿ ವಾಸಿಸುತ್ತಿರುವ ಮುಸ್ಲಿಮರಿಗೂ ಅನ್ವಯಿಸುತ್ತದಲ್ಲವೆ. ಕಾಶ್ಮೀರದಲ್ಲಿ ದಿನನಿತ್ಯ ಹಿಂದೂಗಳ ಮಾರಣ ಹೋಮವಾಗುತ್ತಿದೆ. ಮುಸ್ಲಿಂ ಭಯೋತ್ಪಾದಕರಿಂದ ವಿಧ್ವಂಸಕ ಕೃತ್ಯಗಳು ಸಂಭವಿಸಲಿ, ಹಿಂದೂಗಳ ಸಹಸ್ರ ಸಹಸ್ರ ಹೆಣಗಳು ಬೀಳಲಿ, ಮನೆ ಮಠಗಳು ಮಣ್ಣುಗೂಡಲಿ, ಒಂದಿನಿತೂ ಬಾಯಿ ಬಿಡದ, ಪ್ರತಿಭಟಿಸುವ ಮಾನವೀಯತೆ ತೋರದ ಸೆಕ್ಯುಲರ್ ಹಿಂದೂ ವಾದಿಗಳಂತೆಯೇ ಮುಸ್ಲಿಮರೂ ವರ್ತಿಸುತ್ತಿರುವುದರಿಂದಲೇ ಈವತ್ತು ವಿ.ಹೆಚ್.ಪಿ.ಗಳು, ಭಜರಂಗ ದಳದಂತಹ ಉಗ್ರರು ಹೆಚ್ಚಿಕೊಳ್ಳಲು, ಜನತೆಯ ಅನುಕಂಪ, ಬೆಂಬಲ ವೃದ್ಧಿಸಿಕೊಳ್ಳಲು ಕಾರಣವಾಗಿದೆ. ಇದು ಅಪಾಯದ ಸೂಚನೆ.

ಮುಸ್ಲಿಮರಲ್ಲೂ ಮಹತ್ವದ ರಾಜಕಾರಣಿಗಳಿದ್ದಾರೆ. ದೇಶಭಕ್ತರು, ರಾಷ್ಟ್ರಮಟ್ಟದ ಕವಿ ಕಲಾವಿದರು, ಧರ್ಮಾಧಿಕಾರಿಗಳಾದ ಇಮಾಮರು, ಮೌಲ್ವಿಗಳು, ಮುಲ್ಲಾಗಳು, ಖಾಜಿಗಳು ಇದ್ದಾರೆ. ಆದರೇನು ಮುಸಲ್ಮಾನರ ಮೇಲೆ ಹಿಂಸೆಗಳಾದಾಗ ಮಾತ್ರವೇ ಬಯಲಿಗಿಳಿದು ಸುದ್ದಿ ಮಾಧ್ಯಮಗಳಲ್ಲಿ ಪೋಜ್ ಕೊಡುತ್ತಾರೆ. ‘ದೇಶದ ತುಂಬಾ ಮಸೀದಿಗಳಿವೆ. ಅನೇಕ ಮಸೀದಿಗಳು ಹಾಳಾಗಿ ಬಿದ್ದಿವೆ. ಅವೇ ಸಾಕು. ಅಯೋಧ್ಯೆಯಲ್ಲಿನ ಮಸೀದಿ ನಮಗೆ ಬೇಡ. ಅಲ್ಲಿ ಮಂದಿರ ನಿರ್ಮಾಣವೂ ಬೇಡ. ಧರ್ಮಾಸ್ಪತ್ರೆ, ವಿದ್ಯಾಶಾಲೆಗಳ ನಿರ್ಮಾಣವಾಗಲಿ ಎಂದು ಯಾರಾದರೊಬ್ಬರು ಪ್ರಾಂಜಲ ಮನಸ್ಸಿನಿಂದ ಹೇಳುವುದಾಗಿ ಪತ್ರಿಕಾ ಹೇಳಿಕೆ ನೀಡಿ ಜನಾದರಣೆಗಳಿಸುವ ಯತ್ನ ಮಾಡಿದಾಗಲಿ ಈವರೆಗೆ ಕಾಣಲಿಲ್ಲ! ಇಂತಹ ಮಾತುಗಳು ಮುಸ್ಲಿಮರಿಂದ ಬರಲಿ, ಗಲಭೆ, ಗದ್ದಲ, ಸಾವು ನೋವುಗಳು ತಾವಾಗಿ ಬೇಸತ್ತು ಹೋಗುತ್ತವೆ. ಶಬನಾ ಅಜ್ಮಿ, ದಿಲೀಪ್‌ಕುಮಾರ್‌ರಂತಹ ಬುದ್ಧಿಮಾನ್‌ಗಳು ದಿಲ್ಲಿ ಇಮಾಮ್‌ಗಳು ವಿವೇಚಿಸಿ ಇ೦ತಹ ತೀರ್ಮಾನಕ್ಕೆ ಬರಬಾರದೇಕೆ? ಆಗ ಮಂದಿರ ಕಟ್ಟಲೇಬೇಕೆಂಬ ಹಠವಾದಿ ಹಿಂದೂಗಳೂ ಅಲ್ಪಸಂಖ್ಯಾತರಾಗಿಬಿಡುತ್ತಾರೆ. ಅವರು ಯಾವುದೇ ಪಕ್ಷ, ಪಂಗಡ, ಜಾತಿ, ಮಠಾಧಿಪತಿಗಳಾಗಿರಲಿ ಅಂತಹ ಸಿನಿಕರನ್ನು ನಿಜವಾದ ಹಿಂದುಗಳು ಬೆಂಬಲಿಸುವಂತಹ ಮತಾಂಧರಲ್ಲ. ದಯೆಯೇ ಧರ್ಮದ ಮೂಲವಯ್ಯಾ, ಅಹಿಂಸಾ ಪರಮೋ ಧರ್ಮ ಎಂದು ನಂಬಿದ ಪುಣ್ಯ ಜೀವಿಗಳು ಹುಟ್ಟಿದ ನೆಲ ಇದು. ಇಂತಹ ತತ್ವವನ್ನು ನಂಬಿದ ಜಾತ್ಯಾತೀತ ಜಾಣರೂ ನಮ್ಮಲ್ಲಿ ಬಹು ಸಂಖ್ಯಾತರಿದ್ದಾರೆ.

ಇದೀಗ ಮುಸಲ್ಮಾನ್ ಬುದ್ಧಿಜೀವಿಗಳು, ಲೇಖಕರು, ಕವಿಗಳು ಮೌನ ಮುರಿಯುವ ಔದಾರ್ಯ ತೋರಬೇಕಿದೆ. ತ್ಯಾಗಕ್ಕೆ ಸಿದ್ದರಾಗಬೇಕಿದೆ. ನಾವೆಲ್ಲ ಒಂದೇ ಎಂಬ ನಂಬಿಕೆ ಉಂಟು ಮಾಡಬೇಕಿದೆ. ಮೌನ ಎಲ್ಲಾ ಕಾಲಕ್ಕೂ ಬಂಗಾರವಾಗದಲ್ಲವೆ.

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...