ಉದ್ಧಾರ

ಯಾವ ಬೋಧೆಯಿಂದಿವನು ಬೋಧಿ ಸತ್ವನಾದಾನು?
ಯಾವ ಓದಿನಿಂದಿವನು ವಾದಾತೀತನಾದಾನು?
ಯಾವ ಚಿಲುಮೆಯಿಂದ ಇವನ ಕೊರಡು ಚಿಗುರೀತು?
ಯಾವ ಒಲುಮೆಯಿಂದ ಇವನಿಗೆ ಬಲ ಬಂದೀತು?
ಯಾವ ದಾರಿದೀಪದಿಂದ ಇವನ ಕಗ್ಗಾಡು ಬೆಳಗೀತು?
ಯಾವ ಸಾಧನೆಯಿಂದ ಇವನ ಬಾಧಕ ಭಂಗವಾದೀತು?
ಯಾವ ದುಡಿತದಿಂದ ಇವನ ದುಗುಡ ದೂರಾದೀತು?
ಯಾವ ಏಕಾಂತದಲ್ಲಿ ಇವನ ಮಂಗ ಸಂಗ ಕಳೆದೀತು?
ಯಾವ ಎಳೆಯಿಂದ ಇವನ ಹಗ್ಗ ಬಿಗಿಯಾದೀತು?
ಯಾವ ಕಳೆಯಿಂದ ಇವನ ಮರ ಅಮರವಾದೀತು?
ಯಾವ ಬೆಳೆಯಿಂದ ಇವನ ಮನೆ ತುಂಬೀತು?
ಯಾವ ಕರ್ಮದಿಂದ ಇವನ ಧರ್ಮ ರೂಪು ತೋರೀತು?
ಯಾವ ಮರ್ಮದಿಂದ ಇವನ ಮಾನ ಉಳಿದೀತು?
ಯಾವ ಗುರುವಿನಿಂದ ಇವನ ಗೌರವ ಮೆರೆದೀತು?
ಯಾವ ಕೈಯಿಂದ ಇವನ ಕಾಲು ನಡೆದಾವು?
ಯಾವ ಬೆಂಕಿಯಲ್ಲಿ ಇವನ ಕಾವು ಕುದಿದು ಪಕ್ವವಾದೀತು?
ಯಾವ ಬೇವಿಂದ ಇವನ ಬದುಕು ಸಮರಸವಾದೀತು?
ಯಾವ ವಿಷದಿಂದ ಇವನ ವಿಷಯ ತೀರೀತು?
ಯಾವ ಚಿಕ್ಕೆಯಿಂದ ಇವನ ಚೊಕ್ಕತನ ಮಿನುಗೀತು?
ಯಾವ ಬಿಕ್ಕೆಯಿಂದ ಇವನ ಜೋಳಿಗೆ ತುಂಬೀತು?
ಯಾವ ಹಂಗಿನಿಂದ ಇವನ ಹಗರಣ ಹಗುರಾದೀತು?
ಯಾವ ಪರೀಕ್ಷೆಯಲ್ಲಿ ಇವನ ಪರುಷ ದೊರೆತೀತು?
ಯಾವ ಹೊತ್ತಿಗೆಯಲ್ಲಿ ಇವನ ಗೊತ್ತುಗುರಿ ಸಿಕ್ಕೀತು?
ಯಾವ ಹೂವಿಂದ ಇವನ ಹೃದಯವರಳೀತು?
ಯಾವ ಭಾವದಿಂದ ಇವನ ಬೇರು ಬಲಿತೀತು?
ಯಾವ ಸೂಜಿಯಿಂದ ಇವನ ಗುಳ್ಳೆ ಒಡೆದೀತು?
ಯಾವ ಸಂದಿನಿಂದ ಇವನ ಬಂಧಿತ ಸತ್ವ ಚಿಮ್ಮೀತು?
ಯಾವ ಅನ್ನ ನೀರಿನಿಂದ ಇವನ ಒಡಲುರಿಯಾರೀತು?
ಯಾವ ಚುಚ್ಚಿನಿಂದ ಇವನ ರೊಚ್ಚು ಉರಿದೆದ್ದೀತು?
ಯಾವ ಶಸ್ತ್ರದಿಂದ ಇವನ ಸಂಶಯ ಛಿನ್ನವಾದೀತು?
ಯಾವ ಶಾಸ್ತ್ರದಿಂದ ಇವನ ಸ್ತರವು ವಿಸ್ತಾರವಾದೀತು?

ಇವನೊಳಗು ಮೊಳೆತು ಮೊಳಗದೆ
ತಿಳಿದು ತೊಳಗದೆ
ಗುಟ್ಟು ಗಟ್ಟಿಗೊಳ್ಳದೆ
ಇವನ ಯಾರುದ್ಧರಿಸಬೇಕು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೌನ ಮುರಿಯಲಿ
Next post ಲಿಂಗಮ್ಮನ ವಚನಗಳು – ೭೮

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys