ನೋವಿನ ಬೆಳಕು

ನನ್ನ ನುಂಗುತಿಹ ನೋವುಗಳೇ
ಬಾಳ ತುಂಬುತಿಹ ಬೇವುಗಳೇ
ಕಾಳ ರಾತ್ರಿಯಲಿ ಕಾಡಾಗದಿರಿ
ಬಾಳ ಬೀದಿಯಲಿ ಹಾವಾಗದಿರಿ

ಮೋಡದ ಮುಸುಕ ಮೆಲ್ಲನೆ ಸರಿಸಿ
ನಗುವ ಚಂದ್ರ ಬೇಕು
ಕಾಡುವ ಕತ್ತಲ ಕತ್ತನು ತರಿದು
ನೆಗೆವ ಸೂರ್ಯ ಬೇಕು.

ನೋವನು ಬಿತ್ತಿ ಬೇವು ಬೆಳೆದರೂ
ಬೆಲ್ಲ ಅರಳಬೇಕು
ಕೊಂಬೆಕೊಂಬೆಯಲಿ ಕರುಳು ಕಂಗೊಳಿಸಿ
ಬೆಳಕ ನುಡಿಯಬೇಕು.

ನಡೆಯಲಾಗದ ನುಡಿಯಲಾಗದ
ಜಡನೋವು ನನಗೆ ಬೇಡ
ಕೊಳೆತು ನಾರುತ ಕೀವು ಸುರಿಸುವ
ಹಳೆಬೇವು ನನಗೆ ಬೇಡ.

ಚಲಿಸುವ ನೋವಿಗೆ ಕಲಕುವ ಬೇವಿಗೆ
ತೆರದ ಬಾಗಿಲಿನ ಬದುಕು
ನೋವುಗತ್ತಲಿನ ನವಮಾಸದ ನಂತರ
ಹುಟ್ಟಬೇಕು ಬೆಳಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಂಡಾಯ ಸಾಹಿತ್ಯ : ಅಂದು-ಇಂದು
Next post ಸುನಾಮಿ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys