Home / ಕವನ / ಕವಿತೆ / ಹತಭಾಗಿನಿ

ಹತಭಾಗಿನಿ

ಪಡ್ಡೆ ಕರುವಂತೆ
ಎಗ್ಗಿಲ್ಲದೆ ತಿಂದು, ತಿರುಗಿ ಕೊಂಡಿದ್ದೆನೆಗೆ
ಮದುವೆಯೆಂಬ ಮೂಗುದಾಣ ಬಿಗಿದು
ಸಂಸಾರ ದಾರಂಭಕ್ಕಿಳಿಸಿದರು.

ಮುಂದರಿಯದ ನನಗೆ
ಮದುವೆ ಯಾತನೆ ಯಾಯಿತು
ಗಿಳಿಬಾಳು ಕರಗಿ ಹೋಯಿತು
ಮೈ ಮನಸೆಲ್ಲಾ ಜರ್ಜರಿತವಾಯಿತು.

ಪರಿಸರ
ರೂಪಾಂತರ ಹೊಂದಿತು-
ಸಲಿಗೆ ಸತ್ತು, ಸೊಲ್ಲು ಹಿಂಗಿ
ಪರಕೀಯತೆ ಕಾಡಿ
ಬಾಳು ಅಣಕವಾಗಿ ಹೋಯಿತು.

ಆದರೆ, ಪೋಷಣೆ ಹಾಳಾಗಿ ಹೋಗಲಿ
ಮನಸ್ಸು ಪೂರ್ವಕವಾಗಿ ಅಳಲೂ ಬಿಡದೀ ಜನ
ಜೀವನವ ಕಾಡು ಮಾಡಿದರು.

ನೀನೇನೆ ಮಾಡು, ಹೇಗೆ ಮಾಡು
ಹುಡುಕುವರು ಹುಳುಕು
ಬಾಯಿ ಬಿಟ್ಟರೆ ಸಾಕು ಮೂದಲಿಕೆ, ಏಟು
ಯಾರಿಗೂ ಬೇಡ ಈ ಪಡಿಪಾಟು
ನನ್ನ ಶತ್ರುವಿಗೂ ಕೂಡ.

“ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ
ಕಷ್ಟ ಕೊಟ್ಟರೂ ಅವರೇ ಸುಖಕೊಟ್ಟರೂ ಅವರೇ”
ಎಂಬ ಹಿರಿಯರು

ಸಾಕಿ ಹಗೆ ತೀರಿಸಿ ಕೊಂಡರು

ಸಹಿಸಿ, ಸಹಿಸಿ ಸಾಕಾಗಿ
ಸುಮ್ಮನಿದ್ದ ಹಾಗೆಲ್ಲಾ ಇವರು ಹಾಗೇನೆ ಅಂದೆ!
ಬಜಾರಿ ಎನ್ನುವರು, ಬೀದಿಗಿಳಿಯುವರು

ಎರಡೂ ಕಾಣದ ಜನ
ಯಾರದಾದರೂ ಸಿಕ್ಕೀತಾ ಅಂತ ಕಾಯೋಜನ
ನಮ್ಮ ಹಾಗೇ ಅಲ್ಲವೆ ಎಲ್ಲರೂ ಅನ್ನದೆ
ಚೆಂದ ಚೆಂದವಾಗಿ ಆಡಿಕೊಳ್ಳ ತೊಡಗುವರು
ಗಾಯಕ್ಕೆ ಉಪ್ಪು ಸವರುವರು

ರೋಸಿಹೋಗಿ
ಎದೆ ಗಟ್ಟಿ ಮಾಡಿಕೊಂಡು
ಈ ಬಾಳು ಸಾಕು ಬಳ ಕೊಂಡಿದ್ದು ಸಾಕೆಂದು
ಯಾವುದಾದರೊಂದು ಗಿಡ ಗಂಟೆಗೆ ತೆಲೆ ಕೊಟ್ಟರೆ
‘ಬಾಳಲಾರದವಳ ಸುದ್ದಿ ಏನು ಬಿಡಿರಿ’ ಎನ್ನುವರು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...