ಹತಭಾಗಿನಿ

ಪಡ್ಡೆ ಕರುವಂತೆ
ಎಗ್ಗಿಲ್ಲದೆ ತಿಂದು, ತಿರುಗಿ ಕೊಂಡಿದ್ದೆನೆಗೆ
ಮದುವೆಯೆಂಬ ಮೂಗುದಾಣ ಬಿಗಿದು
ಸಂಸಾರ ದಾರಂಭಕ್ಕಿಳಿಸಿದರು.

ಮುಂದರಿಯದ ನನಗೆ
ಮದುವೆ ಯಾತನೆ ಯಾಯಿತು
ಗಿಳಿಬಾಳು ಕರಗಿ ಹೋಯಿತು
ಮೈ ಮನಸೆಲ್ಲಾ ಜರ್ಜರಿತವಾಯಿತು.

ಪರಿಸರ
ರೂಪಾಂತರ ಹೊಂದಿತು-
ಸಲಿಗೆ ಸತ್ತು, ಸೊಲ್ಲು ಹಿಂಗಿ
ಪರಕೀಯತೆ ಕಾಡಿ
ಬಾಳು ಅಣಕವಾಗಿ ಹೋಯಿತು.

ಆದರೆ, ಪೋಷಣೆ ಹಾಳಾಗಿ ಹೋಗಲಿ
ಮನಸ್ಸು ಪೂರ್ವಕವಾಗಿ ಅಳಲೂ ಬಿಡದೀ ಜನ
ಜೀವನವ ಕಾಡು ಮಾಡಿದರು.

ನೀನೇನೆ ಮಾಡು, ಹೇಗೆ ಮಾಡು
ಹುಡುಕುವರು ಹುಳುಕು
ಬಾಯಿ ಬಿಟ್ಟರೆ ಸಾಕು ಮೂದಲಿಕೆ, ಏಟು
ಯಾರಿಗೂ ಬೇಡ ಈ ಪಡಿಪಾಟು
ನನ್ನ ಶತ್ರುವಿಗೂ ಕೂಡ.

“ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ
ಕಷ್ಟ ಕೊಟ್ಟರೂ ಅವರೇ ಸುಖಕೊಟ್ಟರೂ ಅವರೇ”
ಎಂಬ ಹಿರಿಯರು

ಸಾಕಿ ಹಗೆ ತೀರಿಸಿ ಕೊಂಡರು

ಸಹಿಸಿ, ಸಹಿಸಿ ಸಾಕಾಗಿ
ಸುಮ್ಮನಿದ್ದ ಹಾಗೆಲ್ಲಾ ಇವರು ಹಾಗೇನೆ ಅಂದೆ!
ಬಜಾರಿ ಎನ್ನುವರು, ಬೀದಿಗಿಳಿಯುವರು

ಎರಡೂ ಕಾಣದ ಜನ
ಯಾರದಾದರೂ ಸಿಕ್ಕೀತಾ ಅಂತ ಕಾಯೋಜನ
ನಮ್ಮ ಹಾಗೇ ಅಲ್ಲವೆ ಎಲ್ಲರೂ ಅನ್ನದೆ
ಚೆಂದ ಚೆಂದವಾಗಿ ಆಡಿಕೊಳ್ಳ ತೊಡಗುವರು
ಗಾಯಕ್ಕೆ ಉಪ್ಪು ಸವರುವರು

ರೋಸಿಹೋಗಿ
ಎದೆ ಗಟ್ಟಿ ಮಾಡಿಕೊಂಡು
ಈ ಬಾಳು ಸಾಕು ಬಳ ಕೊಂಡಿದ್ದು ಸಾಕೆಂದು
ಯಾವುದಾದರೊಂದು ಗಿಡ ಗಂಟೆಗೆ ತೆಲೆ ಕೊಟ್ಟರೆ
‘ಬಾಳಲಾರದವಳ ಸುದ್ದಿ ಏನು ಬಿಡಿರಿ’ ಎನ್ನುವರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮದುವೆಯ ಆಟವೆ ತಿಳಿಯದ ಮಗುವಿಗೆ
Next post ಆಧಾರ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…