ಸಹಿ

ಎಲ್ಲವೂ ವಿಸ್ಮಯ ಅದ್ಭುತಗಳೆಂದು
ಭೂತ ಕನ್ನಡಿಯಲಿ ತೋರಿದರೆ ಮತ್ತೆ
ಹುಟ್ಟು ಸಾವಿನ ಭಯವಿರುವುದಿಲ್ಲ.
ಭೋದಿ ವೃಕ್ಷದ ಕೆಳಗೆ ಅಂತ ಹೇಳಿದರೆ
ನಂಬದಿರಿ ನೀವು ಅವರನ್ನು.

ಹಸಿರು ಹುಲ್ಲಿನ ಹಾಡು ದನಕಾಯುವ
ಹುಡುಗನ ಕೊರಳಲಿ ಹಾಯ್ದು ಬಂದರೆ
ಮಳೆಯ ನೀರಲಿ ನಟ್ಟಿ ನೆಡುವ ಹೆಂಗಸರು
ಹಕ್ಕಿಯಂತೆ ಎದೆ ತೆರೆದು ಪದ ಹಾಡಿದರೆ
ಪ್ರವಹಿಸಿ ನಂಬಿ ನೀವು ಅವರನ್ನು.

ಬೆಳದಿಂಗಳ ರಾತ್ರಿ ಗವಾಕ್ಷಿಯಲಿ
ಕವಿ ಹಾಡಿದರೆ ಚಿಕ್ಕಿಗಳು ಮಿನುಗಿದರೆ
ಬೆಚ್ಚಿ ಬೀಳುವ ಗುಡುಗು ಸಿಡಿಲ ರಾತ್ರಿ
ಆಕಾಶದಲಿ ವಿಸ್ಮಯ ಉಂಟು ಅಂತ ಹೇಳಿದರೆ
ನಂಬದಿರಿ ನೀವು ಅವರನ್ನು.

ಬರಗಾಲದಲಿ ಪ್ರವಾಹದಲಿ
ಎಂತಹ ಅಡೆತಡೆಗಳು ಬಂದರೂ ಪ್ರಜೆ
ಆಳಕೆ ಇಳಿದು ರಮಿಸಿ ಉಣಬಡಿಸಿ
ಎಲ್ಲಿಂದಲೋ ಕರಿಕಂಬಳಿ ಕುಪ್ಪಸ ತಂದರೆ
ನಂಬಿರಿ ನೀವು ಎಂದಿಗೂ ಅವರನ್ನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರೆ ಕಳೆದಿದೆ ರಾತ್ರಿ
Next post ಬದುಕಿನ ಹಾಡು

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…