ಸಹಿ

ಎಲ್ಲವೂ ವಿಸ್ಮಯ ಅದ್ಭುತಗಳೆಂದು
ಭೂತ ಕನ್ನಡಿಯಲಿ ತೋರಿದರೆ ಮತ್ತೆ
ಹುಟ್ಟು ಸಾವಿನ ಭಯವಿರುವುದಿಲ್ಲ.
ಭೋದಿ ವೃಕ್ಷದ ಕೆಳಗೆ ಅಂತ ಹೇಳಿದರೆ
ನಂಬದಿರಿ ನೀವು ಅವರನ್ನು.

ಹಸಿರು ಹುಲ್ಲಿನ ಹಾಡು ದನಕಾಯುವ
ಹುಡುಗನ ಕೊರಳಲಿ ಹಾಯ್ದು ಬಂದರೆ
ಮಳೆಯ ನೀರಲಿ ನಟ್ಟಿ ನೆಡುವ ಹೆಂಗಸರು
ಹಕ್ಕಿಯಂತೆ ಎದೆ ತೆರೆದು ಪದ ಹಾಡಿದರೆ
ಪ್ರವಹಿಸಿ ನಂಬಿ ನೀವು ಅವರನ್ನು.

ಬೆಳದಿಂಗಳ ರಾತ್ರಿ ಗವಾಕ್ಷಿಯಲಿ
ಕವಿ ಹಾಡಿದರೆ ಚಿಕ್ಕಿಗಳು ಮಿನುಗಿದರೆ
ಬೆಚ್ಚಿ ಬೀಳುವ ಗುಡುಗು ಸಿಡಿಲ ರಾತ್ರಿ
ಆಕಾಶದಲಿ ವಿಸ್ಮಯ ಉಂಟು ಅಂತ ಹೇಳಿದರೆ
ನಂಬದಿರಿ ನೀವು ಅವರನ್ನು.

ಬರಗಾಲದಲಿ ಪ್ರವಾಹದಲಿ
ಎಂತಹ ಅಡೆತಡೆಗಳು ಬಂದರೂ ಪ್ರಜೆ
ಆಳಕೆ ಇಳಿದು ರಮಿಸಿ ಉಣಬಡಿಸಿ
ಎಲ್ಲಿಂದಲೋ ಕರಿಕಂಬಳಿ ಕುಪ್ಪಸ ತಂದರೆ
ನಂಬಿರಿ ನೀವು ಎಂದಿಗೂ ಅವರನ್ನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರೆ ಕಳೆದಿದೆ ರಾತ್ರಿ
Next post ಬದುಕಿನ ಹಾಡು

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

cheap jordans|wholesale air max|wholesale jordans|wholesale jewelry|wholesale jerseys