Home / ಲೇಖನ / ಇತರೆ / ಸಾಧನೆಯ ಹಾದಿಯಲಿ

ಸಾಧನೆಯ ಹಾದಿಯಲಿ

Mettiluಪ್ರಿಯ ಸಖಿ,

ಗುರುಗಳ ಬಳಿ ಶಿಷ್ಯನೊಬ್ಬ ಬಂದು ತನ್ನ ನೋವನ್ನು ತೋಡಿಕೊಳ್ಳುತ್ತಾ ತನ್ನ ಹೊಸ ಕೆಲಸವನ್ನು ನೋಡಿ ಜನರೆಲ್ಲರೂ ಆಡಿಕೊಂಡು ನಗ್ತಾ ಇದ್ದಾರೆ. ಇದರಿಂದ ತನಗೆ ತುಂಬಾ ಬೇಸರವಾಗಿದೆ. ಹಾಗಾಗಿ ಇನ್ನು ಮುಂದೆ ಈ ಕೆಲಸ ಮುಂದುವರೆಸುವುದಿಲ್ಲ ಎಂದು ಹೇಳಿದ.

ಇದನ್ನು ಕೇಳಿದ ಗುರುಗಳು ನೋಡು ಮಗು, ಯಾವುದೇ ಹೊಸ ಕೆಲಸದಲ್ಲಿ ಗುರಿಯನ್ನು ಸೇರಬೇಕಾದರೆ ಆ ಸಾಧನೆಯ ಹಾದಿಯಲ್ಲಿ ನಾಲ್ಕು ಹಂತಗಳನ್ನು ದಾಟಿ ಬರಬೇಕಾಗುತ್ತದೆ. ಮೊದಲನೆ ಹಂತದಲ್ಲಿ ಜನ ನಿನ್ನ ಹೊಸ ಕೆಲಸವನ್ನು ನೋಡಿ ನಗುತ್ತಾರೆ. ಮುಂದುವರೆದರೆ, ಎರಡನೆಯ ಹಂತದಲ್ಲಿ ವ್ಯಂಗ್ಯ, ಕೊಂಕು ಮಾತುಗಳಿಂದ ನಿನ್ನ ಚುಚ್ಚುತ್ತಾರೆ. ಇದಕ್ಕೂ ನೀನು ಹೆದರದೇ ಮುಂದುವರೆದರೆ ಮೂರನೆಯ ಹಂತದಲ್ಲಿ ಜನ ಇವನೇನೋ ಮಾಡ್ತಾ ಇದ್ದಾನಲ್ಲ ತಾಳು ನೋಡೋಣ ಅಂತ ಮೌನವಾಗಿ ನಿಂತು ನೋಡ್ತಾರೆ. ಕೊನೆಯ ನಿನ್ನ ಗೆಲುವಿನ ಹಂತ. ಇಲ್ಲಿ ಜನ ನೀನು ಮಾಡಿರೋ ಕೆಲಸ ಸತ್ವಪೂರ್ಣವಾದುದೋ ಅಲ್ಲವೋ ಪರೀಕ್ಷಿಸಿ, ಇದು ನಿನ್ನ ನಿಜವಾದ ಸಾಧನೆ ಅಂತ ನಿನ್ನನ್ನು ಮೆಚ್ಚಿಕೊಳ್ಳುತ್ತಾರೆ. ಈ ನಾಲ್ಕೂ ಹಂತಗಳು ಒಬ್ಬ ಸಾಧಕನಿಗೆ ಸತ್ವ ಪರೀಕ್ಷೆ ಇದ್ದ ಹಾಗೆ. ಕೆಲವರು ಮೊದಲ ಹಂತದಲ್ಲೇ ಜನರ ನಗುವನ್ನು ತಿರಸ್ಕಾರವನ್ನು ಕಂಡು ಹೆದರಿ ಕೆಲಸವನ್ನು ಅರ್ಧದಲ್ಲೇ ಬಿಟ್ಟು ಓಡಿ ಹೋಗ್ತಾರೆ.  ಉಳಿದ ಕೆಲವರು ಮೂರನೇ ಹಂತಕ್ಕೆ ಬಂದು ಜನರ ಮೌನವನ್ನು ಅರ್ಥ ಮಾಡಿಕೊಳ್ಳಲಾಗದೇ ಗೊಂದಲಕ್ಕೊಳಗಾಗಿ ಹೆದರಿ ಕೆಲಸವನ್ನು ಅರ್ಧದಲ್ಲಿ ನಿಲ್ಲಿಸ್ತಾರೆ. ಇನ್ನುಳಿದ ಕೆಲವೇ ಕೆಲವರು ಮಾತ್ರ ಈ ಮೂರೂ ಹಂತಗಳನ್ನು ಧೈರ್ಯದಿಂದ ದಾಟಿ ನಾಲ್ಕನೆಯ ಹಂತವನ್ನು ತಲುಪಿ ತಮ್ಮ ಕೆಲಸವನ್ನು ಸಮಾಜದ ಪರಿಕ್ಷೆಗೆ ಒಳಪಡಿಸುತ್ತಾರೆ ಮತ್ತು ಅದೇ ಜನರಿಂದಲೇ ಭೇಷ್‌ ಎನಿಸಿಕೊಳ್ತಾರೆ.

ಆದ್ದರಿಂದಲೇ ನಿಜವಾದ ಸಾಧಕನಿಗೆ ತಾಳ್ಮೆ ಅತಿ ಮುಖ್ಯ. ತಾನು ಯಾವ ಹಂತದಲ್ಲೂ ಅಧೈರ್ಯದಿಂದ ಓಡಿ ಹೋಗದಂತಾ ಮನಸ್ಥೈರ್ಯ, ಸ೦ಯಮವನ್ನು ಸಾಧಕ ಮೊದಲು ರೂಢಿಸಿಕೊಳ್ಳಬೇಕು. ಜನರ ಮಾತುಗಳಿಗೆ ಕಿವಿಯನ್ನು ಕಿವುಡಾಗಿಸಿಕೊಳ್ಳಬೇಕು. ಅರ್ಜುನನ ಕಣ್ಣಿಗೆ ಪಕ್ಷಿಯ ಕಣ್ಣು ಮಾತ್ರ ಕ೦ಡಂತೆ, ಸಾಧಕನಿಗೆ ತನ್ನ ಗುರಿ ಮಾತ್ರ ಮುಖ್ಯವಾದುದು. ಹಾಗೇ ಆ ಗುರಿಯನ್ನು ತಲುಪಲು ಇಲ್ಲಿ ಯಾವುದೂ ಸುಲಭ ಮಾರ್ಗಗಳಿಲ್ಲ. ಅದನ್ನು ಕಠಿಣ ಪರಿಶ್ರಮದಿಂದಷ್ಟೇ ಸಾಧಿಸಬೇಕು, ಎ೦ಬುದನ್ನು ಸಾಧಕ ಎ೦ದೂ ಮರೆಯಬಾರದು ಎಂದರು.

ಇವನ್ನು ಕೇಳಿದ ಶಿಷ್ಯನಿಗೆ ಜ್ಞಾನೋದಯವಾಯ್ತು. ಇನ್ನು ತನ್ನ ಸಾಧನೆಯ ಹಾದಿಯಲ್ಲಿ ಯಾವುದೇ ಅಡ್ಡಿ, ಆತಂಕಗಳು ಬಂದರೂ ತಾನು ಹೆದರುವುದಿಲ್ಲವೆ೦ದು ಆತ ಪ್ರತಿಜ್ಞೆ ಮಾಡಿದ. ಮತ್ತು ತನ್ನ ಸಾಧನೆಯಲ್ಲಿ ಗೆದ್ದ.

ಸಖಿ, ಕಥೆ ಇಷ್ಪವಾಯ್ತೋ ಇಲ್ಲವೋ ತಿಳಿಸುತ್ತೀಯಲ್ಲವೇ ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...