ಸಾಧನೆಯ ಹಾದಿಯಲಿ

ಸಾಧನೆಯ ಹಾದಿಯಲಿ

Mettiluಪ್ರಿಯ ಸಖಿ,

ಗುರುಗಳ ಬಳಿ ಶಿಷ್ಯನೊಬ್ಬ ಬಂದು ತನ್ನ ನೋವನ್ನು ತೋಡಿಕೊಳ್ಳುತ್ತಾ ತನ್ನ ಹೊಸ ಕೆಲಸವನ್ನು ನೋಡಿ ಜನರೆಲ್ಲರೂ ಆಡಿಕೊಂಡು ನಗ್ತಾ ಇದ್ದಾರೆ. ಇದರಿಂದ ತನಗೆ ತುಂಬಾ ಬೇಸರವಾಗಿದೆ. ಹಾಗಾಗಿ ಇನ್ನು ಮುಂದೆ ಈ ಕೆಲಸ ಮುಂದುವರೆಸುವುದಿಲ್ಲ ಎಂದು ಹೇಳಿದ.

ಇದನ್ನು ಕೇಳಿದ ಗುರುಗಳು ನೋಡು ಮಗು, ಯಾವುದೇ ಹೊಸ ಕೆಲಸದಲ್ಲಿ ಗುರಿಯನ್ನು ಸೇರಬೇಕಾದರೆ ಆ ಸಾಧನೆಯ ಹಾದಿಯಲ್ಲಿ ನಾಲ್ಕು ಹಂತಗಳನ್ನು ದಾಟಿ ಬರಬೇಕಾಗುತ್ತದೆ. ಮೊದಲನೆ ಹಂತದಲ್ಲಿ ಜನ ನಿನ್ನ ಹೊಸ ಕೆಲಸವನ್ನು ನೋಡಿ ನಗುತ್ತಾರೆ. ಮುಂದುವರೆದರೆ, ಎರಡನೆಯ ಹಂತದಲ್ಲಿ ವ್ಯಂಗ್ಯ, ಕೊಂಕು ಮಾತುಗಳಿಂದ ನಿನ್ನ ಚುಚ್ಚುತ್ತಾರೆ. ಇದಕ್ಕೂ ನೀನು ಹೆದರದೇ ಮುಂದುವರೆದರೆ ಮೂರನೆಯ ಹಂತದಲ್ಲಿ ಜನ ಇವನೇನೋ ಮಾಡ್ತಾ ಇದ್ದಾನಲ್ಲ ತಾಳು ನೋಡೋಣ ಅಂತ ಮೌನವಾಗಿ ನಿಂತು ನೋಡ್ತಾರೆ. ಕೊನೆಯ ನಿನ್ನ ಗೆಲುವಿನ ಹಂತ. ಇಲ್ಲಿ ಜನ ನೀನು ಮಾಡಿರೋ ಕೆಲಸ ಸತ್ವಪೂರ್ಣವಾದುದೋ ಅಲ್ಲವೋ ಪರೀಕ್ಷಿಸಿ, ಇದು ನಿನ್ನ ನಿಜವಾದ ಸಾಧನೆ ಅಂತ ನಿನ್ನನ್ನು ಮೆಚ್ಚಿಕೊಳ್ಳುತ್ತಾರೆ. ಈ ನಾಲ್ಕೂ ಹಂತಗಳು ಒಬ್ಬ ಸಾಧಕನಿಗೆ ಸತ್ವ ಪರೀಕ್ಷೆ ಇದ್ದ ಹಾಗೆ. ಕೆಲವರು ಮೊದಲ ಹಂತದಲ್ಲೇ ಜನರ ನಗುವನ್ನು ತಿರಸ್ಕಾರವನ್ನು ಕಂಡು ಹೆದರಿ ಕೆಲಸವನ್ನು ಅರ್ಧದಲ್ಲೇ ಬಿಟ್ಟು ಓಡಿ ಹೋಗ್ತಾರೆ.  ಉಳಿದ ಕೆಲವರು ಮೂರನೇ ಹಂತಕ್ಕೆ ಬಂದು ಜನರ ಮೌನವನ್ನು ಅರ್ಥ ಮಾಡಿಕೊಳ್ಳಲಾಗದೇ ಗೊಂದಲಕ್ಕೊಳಗಾಗಿ ಹೆದರಿ ಕೆಲಸವನ್ನು ಅರ್ಧದಲ್ಲಿ ನಿಲ್ಲಿಸ್ತಾರೆ. ಇನ್ನುಳಿದ ಕೆಲವೇ ಕೆಲವರು ಮಾತ್ರ ಈ ಮೂರೂ ಹಂತಗಳನ್ನು ಧೈರ್ಯದಿಂದ ದಾಟಿ ನಾಲ್ಕನೆಯ ಹಂತವನ್ನು ತಲುಪಿ ತಮ್ಮ ಕೆಲಸವನ್ನು ಸಮಾಜದ ಪರಿಕ್ಷೆಗೆ ಒಳಪಡಿಸುತ್ತಾರೆ ಮತ್ತು ಅದೇ ಜನರಿಂದಲೇ ಭೇಷ್‌ ಎನಿಸಿಕೊಳ್ತಾರೆ.

ಆದ್ದರಿಂದಲೇ ನಿಜವಾದ ಸಾಧಕನಿಗೆ ತಾಳ್ಮೆ ಅತಿ ಮುಖ್ಯ. ತಾನು ಯಾವ ಹಂತದಲ್ಲೂ ಅಧೈರ್ಯದಿಂದ ಓಡಿ ಹೋಗದಂತಾ ಮನಸ್ಥೈರ್ಯ, ಸ೦ಯಮವನ್ನು ಸಾಧಕ ಮೊದಲು ರೂಢಿಸಿಕೊಳ್ಳಬೇಕು. ಜನರ ಮಾತುಗಳಿಗೆ ಕಿವಿಯನ್ನು ಕಿವುಡಾಗಿಸಿಕೊಳ್ಳಬೇಕು. ಅರ್ಜುನನ ಕಣ್ಣಿಗೆ ಪಕ್ಷಿಯ ಕಣ್ಣು ಮಾತ್ರ ಕ೦ಡಂತೆ, ಸಾಧಕನಿಗೆ ತನ್ನ ಗುರಿ ಮಾತ್ರ ಮುಖ್ಯವಾದುದು. ಹಾಗೇ ಆ ಗುರಿಯನ್ನು ತಲುಪಲು ಇಲ್ಲಿ ಯಾವುದೂ ಸುಲಭ ಮಾರ್ಗಗಳಿಲ್ಲ. ಅದನ್ನು ಕಠಿಣ ಪರಿಶ್ರಮದಿಂದಷ್ಟೇ ಸಾಧಿಸಬೇಕು, ಎ೦ಬುದನ್ನು ಸಾಧಕ ಎ೦ದೂ ಮರೆಯಬಾರದು ಎಂದರು.

ಇವನ್ನು ಕೇಳಿದ ಶಿಷ್ಯನಿಗೆ ಜ್ಞಾನೋದಯವಾಯ್ತು. ಇನ್ನು ತನ್ನ ಸಾಧನೆಯ ಹಾದಿಯಲ್ಲಿ ಯಾವುದೇ ಅಡ್ಡಿ, ಆತಂಕಗಳು ಬಂದರೂ ತಾನು ಹೆದರುವುದಿಲ್ಲವೆ೦ದು ಆತ ಪ್ರತಿಜ್ಞೆ ಮಾಡಿದ. ಮತ್ತು ತನ್ನ ಸಾಧನೆಯಲ್ಲಿ ಗೆದ್ದ.

ಸಖಿ, ಕಥೆ ಇಷ್ಪವಾಯ್ತೋ ಇಲ್ಲವೋ ತಿಳಿಸುತ್ತೀಯಲ್ಲವೇ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಧಿ ಬರಹ
Next post ನಾಯಿ ಪಾಲು

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

cheap jordans|wholesale air max|wholesale jordans|wholesale jewelry|wholesale jerseys