Home / ಬಾಲ ಚಿಲುಮೆ / ಕವಿತೆ / ಬಂದಾನೋ ದೇವರೇ

ಬಂದಾನೋ ದೇವರೇ

ಬಂದಾನೊ ದೇವರೇ ಬಂದಾನೋ-ಬಂದಾನೋ
ಬಂದಾನೊ ಸ್ವಾಮಿ ಬಂದಾನೋ-ಬಂದಾನೋ

ಉಡುಪಿಯ ಕೃಷ್ಣನೆ ಬಂದಾನೋ – ಬಂದಾನೋ
ಕೈಯಲ್ಲಿ ಕಡೆಗೋಲ ಹಿಡಿದ್ಯಾನೋ – ಹಿಡಿದ್ಯಾನೋ
ಸೊಂಟಕೆ ಉಡಿದಾರ ತೊಟ್ಯಾನೋ – ತೊಟ್ಯಾನೋ
ಕಾಲಿಗೆ ಕಿರುಗೆಜ್ಜೆ ಕಟ್ಯಾನೋ – ಕಟ್ಯಾನೋ
ಥಕಧಿಮಿ ಥಕಧಿಮಿ ಕುಣಿದಾನೋ – ಕುಣಿದಾನೋ
ತಧಿಕಿಟ ಥಕಧಿಮಿ ಕುಣಿದಾನೋ – ಕುಣಿದಾನೋ
ಭಕ್ತಿಗೆ ಒಲಿದು ಬಂದಾನೋ – ಬಂದಾನೋ
ಭಕ್ತನ ತಾತ ಅಂದಾನೋ – ಅಂದಾನೋ
ತಾತನ ತೋಳಲ್ಲಿ ಆಡ್ಯಾನೋ – ಆಡ್ಯಾನೋ
ನಾನಿನ್ನ ಶಿಷ್ಯ ಅಂದಾನೋ – ಅಂದಾನೋ
ಹಾಡು ಹೇಳು ತಾತ ಅಂದಾನೋ – ಅಂದಾನೋ
ಶ್ಲೋಕ ಹೇಳು ಅಂತ ಕೇಳ್ಯಾನೋ – ಕೇಳ್ಯಾನೋ
ಕಥೆ ಹೇಳು ಅಂತ ಕಾಡ್ಯಾನೋ – ಕಾಡ್ಯಾನೋ
ಕವಿತೆ ಹೇಳು ಅಂತ ಬೇಡ್ಯಾನೋ – ಬೇಡ್ಯಾನೋ
ಎಲ್ಲವ ಅಲ್ಲಲ್ಲೆ ಕಲಿತಾನೋ – ಕಲಿತಾನೋ
ತಾತಂಗೆ ಅಚ್ಚರಿ ತರಿಸ್ಯಾನೋ – ತರಿಸ್ಯಾನೋ
ನಾಡಲ್ಲೇ ಮೇಧಾವಿ ಆದಾನೋ – ಆದಾನೋ
ಮೊಮ್ಮಗುಗೂ ಮಿಗಿಲಿಲ್ಲ ಅನಿಸ್ಯಾನೋ – ಅನಿಸ್ಯಾನೋ
ಸೂರ್ಯಂಗೆ ತೂಕಡಿಗೆ ಬಂದಾವೋ – ಬಂದಾವೊ
ಇಲ್ಲಿಗೆ ಹಾಡು ಮುಗಿದಾವೋ – ಮುಗಿದಾವೋ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...