ಅಜ್ಜಿ ಅಜ್ಜೀ

ಅಜ್ಜೀ ಅಜ್ಜೀ ಯಾವಾಗ್ಲೂ ನಾನ್
ನಿನ್ ಜೊತೇನೇ ಇರ್‍ತೀನಿ
ನಿನ್ಹಾಗೇನೇ ನಾನೂನೂ
ಏಕಾದಶೀ ಮಾಡ್ತೀನಿ.

ನಿನ್ಹಾಗೇನೇ ಬೆಳಿಗ್ಗೆ ಪಾವು
ಉಪ್ಪಿಟ್ ಮಾತ್ರ ತಿಂತೀನಿ
ಹಾಲನ್ ಕುಡಿದು ಕಣ್ಮುಚ್ಚಿ
ಮಿಣಿ ಮಿಣಿ ಜಪ ಮಾಡ್ತೀನಿ
ದೇವರ ಪ್ರಸಾದ ಅಂತ ನಾಲ್ಕೇ
ರಸಬಾಳೇ ಹಣ್ ತಿಂತೀನಿ;
ಒಂದೇ ಲೋಟ ಪಂಚಾಮೃತಾನ
ತೀರ್ಥ ಅಲ್ವೆ, ಕುಡಿತೀನಿ

ಸಂಜೇ ಹೊತ್ತಿಗೆ ಎರಡೇ ಎರಡು
ಮೋಸುಂಬೀ ಹಣ್ ಸಾಕಜ್ಜೀ
ಒಂದೇ ಸೇಬು, ಒಂದೇ ಕಿತ್ಲೆ
ಕಾಫೀ ಗೀಫೀ ಬೇಡಜ್ಜೀ!
ರಾತ್ರಿ ಒಂದಿಷ್ಟ್ ಮೊಸರವಲಕ್ಕಿ
ಒಂದೇ ಲೋಟ ಪಾಯ್ಸಾನ
ರಾಮಾ ಅಂತ ಮುಗಿಸಿ ತೆಪ್ಪಗೆ
ಮಲಗ್ಬಿಡೋಣ, ಏನಜ್ಜೀ?

ಇದ್ದೇ ಇದೆ ಪ್ರತೀ ದಿನಾನೂ
ಹೊಟ್ಟೆ ತುಂಬ ಉಣ್ಣೋದು
ಹದಿನೈದ್ ದಿನಕ್ಕೆ ಒಂದ್ಸಲವಾದ್ರೂ
ಉಪಾಸ ಮಾಡೋದೊಳ್ಳೇದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೮೯
Next post ಅನೂಹ್ಯ…….

ಸಣ್ಣ ಕತೆ

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys