ಕಾಡುಬೆಳದಿಂಗಳು

ಅಂತರಾಳ ಬೇರುಗಳ ಭಾವಸ್ಪರ್ಶಕೆ
ಸಹ್ಯಾದ್ರಿಯ ತುಂಬೆಲ್ಲ ಹಸಿರು.
ಎಣ್ಣೆ ಹಚ್ಚಿ ಎರೆದ ಮಿರುಗು
ಗತ್ತಿನ ಮಾತು ವಯ್ಯಾರ
ಗಗನ ಚುಂಬಿಸುವ ಹಂಬಲ.

ನೂರು ಸಾವಿರ ಮಾತುಗಳ
ಒಳಗೊಳಗಿನ ಚಡಪಡಿಕೆಗೆ ಮೌನ
ಆದರೂ ಎಷ್ಟೊಂದು ಸ್ಪಷ್ಟ
ಕಡಲ ನೆರೆತೊರೆ ಏರುಬ್ಬರ
ಎಷ್ಟೊಂದು ತಿಳಿ ಒರತೆಯನೀರು
ಪಚ್ಚೆ ಹಸಿರು ಹೊಳೆವ ಕಣ್ಣಿನ
ಈ ಸಹ್ಯಾದ್ರಿ ಕುಸುಮ ಮಾಲೆ.

ಮಾಗಿ ಚಳಿ ಮಂಜು ಮುಸುಕು
ಬಿರುಸಿನ ಓಡಾಟದ ಕೆಲಸದ ಹುಡುಗಿ
ಸಹ್ಯಾದ್ರಿ
ಚಳಿ ಮಳೆ ಬಿಸಿಲೆಲ್ಲ ಬಲುದೂರ
ಮುಖ ತುಂಬ ಮುಗ್ದ ನಗು
ಕನಸುಕಣ್ಣಿನ ಹುಡುಗಿಗೆ
ಸೂರ್ಯ ಬರುತ್ತಾನೋ ಇಲ್ಲೋ!

ಕತ್ತಲಲಿ ಕರಗದ ಮನಸಿಗೆ
ಒಂದಿಷ್ಟು ನೆಮ್ಮದಿ ಏಕಾಂತ,
ತನ್ನೊಳಗಿನ ಪಿಸುಮಾತುಗಳಿಗೆ
ತಾನೇ ಕೆನೆಬೆಳಕಾಗಿ ಉಸಿರಾಗಿ-
ಸಹ್ಯಾದ್ರಿ ತುಂಬೆಲ್ಲ ತಂಪು ಬೆಳದಿಂಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಾಪ್ರಸ್ಥಾನವನ್ನು ಇನ್ನೊಮ್ಮೆ ಓದಿದಾಗ
Next post ಅನುಕರಣೆ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

cheap jordans|wholesale air max|wholesale jordans|wholesale jewelry|wholesale jerseys