ಕಾಡುಬೆಳದಿಂಗಳು

ಅಂತರಾಳ ಬೇರುಗಳ ಭಾವಸ್ಪರ್ಶಕೆ
ಸಹ್ಯಾದ್ರಿಯ ತುಂಬೆಲ್ಲ ಹಸಿರು.
ಎಣ್ಣೆ ಹಚ್ಚಿ ಎರೆದ ಮಿರುಗು
ಗತ್ತಿನ ಮಾತು ವಯ್ಯಾರ
ಗಗನ ಚುಂಬಿಸುವ ಹಂಬಲ.

ನೂರು ಸಾವಿರ ಮಾತುಗಳ
ಒಳಗೊಳಗಿನ ಚಡಪಡಿಕೆಗೆ ಮೌನ
ಆದರೂ ಎಷ್ಟೊಂದು ಸ್ಪಷ್ಟ
ಕಡಲ ನೆರೆತೊರೆ ಏರುಬ್ಬರ
ಎಷ್ಟೊಂದು ತಿಳಿ ಒರತೆಯನೀರು
ಪಚ್ಚೆ ಹಸಿರು ಹೊಳೆವ ಕಣ್ಣಿನ
ಈ ಸಹ್ಯಾದ್ರಿ ಕುಸುಮ ಮಾಲೆ.

ಮಾಗಿ ಚಳಿ ಮಂಜು ಮುಸುಕು
ಬಿರುಸಿನ ಓಡಾಟದ ಕೆಲಸದ ಹುಡುಗಿ
ಸಹ್ಯಾದ್ರಿ
ಚಳಿ ಮಳೆ ಬಿಸಿಲೆಲ್ಲ ಬಲುದೂರ
ಮುಖ ತುಂಬ ಮುಗ್ದ ನಗು
ಕನಸುಕಣ್ಣಿನ ಹುಡುಗಿಗೆ
ಸೂರ್ಯ ಬರುತ್ತಾನೋ ಇಲ್ಲೋ!

ಕತ್ತಲಲಿ ಕರಗದ ಮನಸಿಗೆ
ಒಂದಿಷ್ಟು ನೆಮ್ಮದಿ ಏಕಾಂತ,
ತನ್ನೊಳಗಿನ ಪಿಸುಮಾತುಗಳಿಗೆ
ತಾನೇ ಕೆನೆಬೆಳಕಾಗಿ ಉಸಿರಾಗಿ-
ಸಹ್ಯಾದ್ರಿ ತುಂಬೆಲ್ಲ ತಂಪು ಬೆಳದಿಂಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಾಪ್ರಸ್ಥಾನವನ್ನು ಇನ್ನೊಮ್ಮೆ ಓದಿದಾಗ
Next post ಅನುಕರಣೆ

ಸಣ್ಣ ಕತೆ

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…