ಅಂದುಕೊಂಡಷ್ಟು…..

ಕೊನೆಗೂ ಮರುಭೂಮಿ ದಾಟಿ ಬ೦ದದ್ದಾಯಿತು-
ಎಂದುಕೊಂಡದ್ದು ಎಷ್ಟರಮಟ್ಟಿಗೆ ನೆಮ್ಮದಿ.
ಮಳೆಯೊಳಗೆ ತೇಲಿಬಿಡುವ ಕನಸುಕಂಡು
ಹಸಿರುನಾಡಿನಲ್ಲಿದ್ದದ್ದೇನೋ ನಿಜ.

ರಸ್ತೆ ತುಂಬ ಹೊಗೆ ಗಂಟುಮುಖ
ಗಬ್ಬುವಿಚಾರಗಳ ಮೂಟೆ ಎಲ್ಲೆಲ್ಲೂ
ದೊಡ್ಡವರ ದಡ್ಡತನ ಸಣ್ಣತನಗಳ ಕೂಪ
ವಿಶಾಲತೆ ಕಾಣದ ಪೊಳ್ಳಗಳ ದಿಮಾಕು-
ಪ್ರೀತಿ ವಿಶ್ವಾಸಕೆ ಕೃತಕ ಕಟುಕನಾಟಕ.

ನಿಗಿ ನಿಗಿ ಸೂರ್ಯ ಲಂಚಪಡೆದು
ತೆಪ್ಪಗೆ ಬಿದ್ದುಕೊಂಡಿರಬೇಕಿಲ್ಲಿ,
ಎಷ್ಟೊಂದು ಕ್ರಿಮಿಕೀಟಕಗಳ ಉದ್ಭವ
ಎಷ್ಟೊಂದು ಗೊಜಲು ಕನಸುಗಳಿಗೆ
ಹೊಡೆದಾಟ ರಾಜಕೀಯದ ಹೇಸಿಗೆ.
ಹೊರಬಿದ್ದು ಹೆಜ್ಜೆ ಊರಲೂ ಹೆದರಬೇಕಾದ
ನಮ್ಮ ಸ್ವತಂತ್ರ ದೇಶ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚೇಳೂ ಏಡಿಯೂ
Next post ಬೇಡಿಕೆ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…