ಅಂದುಕೊಂಡಷ್ಟು…..

ಕೊನೆಗೂ ಮರುಭೂಮಿ ದಾಟಿ ಬ೦ದದ್ದಾಯಿತು-
ಎಂದುಕೊಂಡದ್ದು ಎಷ್ಟರಮಟ್ಟಿಗೆ ನೆಮ್ಮದಿ.
ಮಳೆಯೊಳಗೆ ತೇಲಿಬಿಡುವ ಕನಸುಕಂಡು
ಹಸಿರುನಾಡಿನಲ್ಲಿದ್ದದ್ದೇನೋ ನಿಜ.

ರಸ್ತೆ ತುಂಬ ಹೊಗೆ ಗಂಟುಮುಖ
ಗಬ್ಬುವಿಚಾರಗಳ ಮೂಟೆ ಎಲ್ಲೆಲ್ಲೂ
ದೊಡ್ಡವರ ದಡ್ಡತನ ಸಣ್ಣತನಗಳ ಕೂಪ
ವಿಶಾಲತೆ ಕಾಣದ ಪೊಳ್ಳಗಳ ದಿಮಾಕು-
ಪ್ರೀತಿ ವಿಶ್ವಾಸಕೆ ಕೃತಕ ಕಟುಕನಾಟಕ.

ನಿಗಿ ನಿಗಿ ಸೂರ್ಯ ಲಂಚಪಡೆದು
ತೆಪ್ಪಗೆ ಬಿದ್ದುಕೊಂಡಿರಬೇಕಿಲ್ಲಿ,
ಎಷ್ಟೊಂದು ಕ್ರಿಮಿಕೀಟಕಗಳ ಉದ್ಭವ
ಎಷ್ಟೊಂದು ಗೊಜಲು ಕನಸುಗಳಿಗೆ
ಹೊಡೆದಾಟ ರಾಜಕೀಯದ ಹೇಸಿಗೆ.
ಹೊರಬಿದ್ದು ಹೆಜ್ಜೆ ಊರಲೂ ಹೆದರಬೇಕಾದ
ನಮ್ಮ ಸ್ವತಂತ್ರ ದೇಶ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚೇಳೂ ಏಡಿಯೂ
Next post ಬೇಡಿಕೆ

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys