ವಾಸ್ತವ

ಮರುಳು ಮಾಡುವ ಹೆಜ್ಜೆಗಳು
ಎದೆಯಲ್ಲಿ ಹುದುಗಿಕೊಳ್ಳದೆ ತೇಲುತ್ತವೆ
ಭ್ರಮೆಬೇಡ ಪ್ರಮಾಣಪತ್ರ ಬೇಕೆ
ಗೊತ್ತು ಗುರಿ ಇಲ್ಲದ ಹೊತ್ತಿಗೆ
ಬೆಂಕಿ ಹಚ್ಚುತ ನುಸುಳುವಾಕೆ ನಕ್ಕಳು.

ಕೋಳಿಕೂಗಿನ ಶಬ್ದ ಗಂಟೆ ಎಲ್ಲ ನಿಶ್ಶಬ್ಧ
ಒಳಗೊಳಗೇ ಕೊರೆವ ಚಳಿ ನಂಬಿದ್ದಕ್ಕೆ
ಗಕ್ಕನೆ ಸೂರ್ಯನ ಬೆಳಕು ಚಕ್ಕನೆ
ಮನದೊಳಗೆ ಹೊಳಪು ಬಿಸಿಯುಸಿರು
ಮಂಜಿನೊಳಗೊಂದೊಂದೇ ಮೃದುಹೆಜ್ಜೆ
ಹೂವಿನೊಳಗೊಂದೊಂದು ಪಿಸುಮಾತು
ಮನದಂಗಳ ನೂಕಿ
ಮಂದಾರಕ್ಕೇರಿಸುವಾಕೆ ನಕ್ಕಳು-

ಮರುಮರು ಪ್ರಶ್ನೆಗಳಿಗೆ ಮಿಂಚಿನುತ್ತರವಿಲ್ಲ
ಮೋಡದೊಡಲ ಹೊಯ್ದಾಟ ಗುದ್ದಾಟ
ಅನುಕಂಪವಿಲ್ಲದ ಕದನ
ಅರೆಗಳಿಗೆಗೊಮ್ಮೆಮ್ಮೆ ಬೆಕ್ಕುಹೆಜ್ಜೆ
ತಿಳಿನೀರುಕೊಳಕೆ ಹರಳೆಸೆಯುತ
ಅಲೆ ಅಲೆಯಾಗಿ ಹರಡಿಹಬ್ಬಿ
ಆಳ ಪ್ರಪಾತದಾಳಕ್ಕೆ ಸೆಳೆವಾಕೆ ನಕ್ಕಳು

ಸುತ್ತಿಲ್ಲ ಮುತ್ತಿಲ್ಲ ಆಳ ಎತ್ತರಕಿಲ್ಲ
ಸಾಕ್ಷಿಗೆ ಸೃಷ್ಟಿಕರ್ತನ ದಿಬ್ಬಣ
ಒಳಗೊಳಗೆ ನಲುಗಿಸಿ ನಗುತ
ಬೆಚ್ಚಗಿನೆದೆಗೆ ಕನಸುಕೊಡುವ ಚಿತ್ರ
ಸ್ಪರ್ಷಕ್ಕೆ ಹಾತೊರೆಯುವ ವಾಸ್ತವ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಬ್ಬರು
Next post ಏನು ಮಾಡಬೇಕು

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…