Home / ಕವನ / ಕವಿತೆ / ವಾಸ್ತವ

ವಾಸ್ತವ

ಮರುಳು ಮಾಡುವ ಹೆಜ್ಜೆಗಳು
ಎದೆಯಲ್ಲಿ ಹುದುಗಿಕೊಳ್ಳದೆ ತೇಲುತ್ತವೆ
ಭ್ರಮೆಬೇಡ ಪ್ರಮಾಣಪತ್ರ ಬೇಕೆ
ಗೊತ್ತು ಗುರಿ ಇಲ್ಲದ ಹೊತ್ತಿಗೆ
ಬೆಂಕಿ ಹಚ್ಚುತ ನುಸುಳುವಾಕೆ ನಕ್ಕಳು.

ಕೋಳಿಕೂಗಿನ ಶಬ್ದ ಗಂಟೆ ಎಲ್ಲ ನಿಶ್ಶಬ್ಧ
ಒಳಗೊಳಗೇ ಕೊರೆವ ಚಳಿ ನಂಬಿದ್ದಕ್ಕೆ
ಗಕ್ಕನೆ ಸೂರ್ಯನ ಬೆಳಕು ಚಕ್ಕನೆ
ಮನದೊಳಗೆ ಹೊಳಪು ಬಿಸಿಯುಸಿರು
ಮಂಜಿನೊಳಗೊಂದೊಂದೇ ಮೃದುಹೆಜ್ಜೆ
ಹೂವಿನೊಳಗೊಂದೊಂದು ಪಿಸುಮಾತು
ಮನದಂಗಳ ನೂಕಿ
ಮಂದಾರಕ್ಕೇರಿಸುವಾಕೆ ನಕ್ಕಳು-

ಮರುಮರು ಪ್ರಶ್ನೆಗಳಿಗೆ ಮಿಂಚಿನುತ್ತರವಿಲ್ಲ
ಮೋಡದೊಡಲ ಹೊಯ್ದಾಟ ಗುದ್ದಾಟ
ಅನುಕಂಪವಿಲ್ಲದ ಕದನ
ಅರೆಗಳಿಗೆಗೊಮ್ಮೆಮ್ಮೆ ಬೆಕ್ಕುಹೆಜ್ಜೆ
ತಿಳಿನೀರುಕೊಳಕೆ ಹರಳೆಸೆಯುತ
ಅಲೆ ಅಲೆಯಾಗಿ ಹರಡಿಹಬ್ಬಿ
ಆಳ ಪ್ರಪಾತದಾಳಕ್ಕೆ ಸೆಳೆವಾಕೆ ನಕ್ಕಳು

ಸುತ್ತಿಲ್ಲ ಮುತ್ತಿಲ್ಲ ಆಳ ಎತ್ತರಕಿಲ್ಲ
ಸಾಕ್ಷಿಗೆ ಸೃಷ್ಟಿಕರ್ತನ ದಿಬ್ಬಣ
ಒಳಗೊಳಗೆ ನಲುಗಿಸಿ ನಗುತ
ಬೆಚ್ಚಗಿನೆದೆಗೆ ಕನಸುಕೊಡುವ ಚಿತ್ರ
ಸ್ಪರ್ಷಕ್ಕೆ ಹಾತೊರೆಯುವ ವಾಸ್ತವ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...