ಪರೆಗಳು

ಪರೆಯು ಪರೆಯು ತಾ ಹರಿಯುತಿಹುದು ಪರವಾದ ನೋಟದೀಟಿ
ತೆರೆಯು ತೆರೆಯು ತಾವೋಡುತಿಹವು ಹರವಾಗೆ ಕಡಲದೋಟಿ

ಹೆಜ್ಜೆ ಹೆಜ್ಜೆ ಸಜ್ಜಾಗುತಿಹವು ಬೆಳೆ ಬೆಳೆವ ಒಜ್ಜೆ ಹೊರಲು
ಚರ್ಮ ಮರ್ಮದೊಳಕಡೆಗೆ ತೂರಿ ತುತ್ತೂರಿಯೇನೊ ಬರಲು

ಪೆಟ್ಟು ಪೆಟ್ಟು ಬಡಿದಾಗ ಹಾವ ಭಾವದಲಿ ಭಾವಮೂರ್ತಿ
ಕೆಟ್ಟು ಸುಟ್ಟು ಕಸವಳಿದು ಗಟ್ಟಿ ಗಟ್ಯಾಗಿ ಲೋಹ ಕೀರ್ತಿ

ನೆನೆದು ನೆನೆದು ನೀರುಂಡು ಕಲ್ಲು ತಾ ವಜ್ರಕಾಯವಾಗಿ
ಬೆಂದು ನೂಂದು ಪರಿಪಕ್ವವಾಗಿ ಭೋಜನವು ಭೋಜ್ಯವಾಗಿ

ಕಳಚುತಿಹುದು ಒಂದೊಂದೆ ಬಟ್ಟೆ ಬಯಲಾಗಿ ಮೈಯ ಮರ್ಮ
ಕಣ್ಣ ಪರದೆ ಪರೆ ಹರಿದು ಬರಿದು ತಿಳಿದೃಶ್ಯ ಹೃದಯ ಕರ್ಮ

ಮೌಲ್ಯ ಮೌಲ್ಯ ಹಳವಾಗಿ ಹೋಗಿ ಹೊಸ ಅರ್ಥ ತೆರೆಯುತಿಹವು
ಪುಟವು ಪುಟವು ಹಿಂದಾಗಿ ಜೀವಕಾವ್ಯಕ್ಕೆ ಹೊಸದು ತಿರುವು

ಮೈಲು ಕಲ್ಲುಗಳು ದಾಟಿ ದಾಟಿ ಹೊಸ ಮಜಲು ತೋರುತಿಹವು
ಹಗಲು ಇರುಳು ಕಣ್ಮುಚ್ಚಿ ತೆರೆದು ಭೂಮವ್ವ ನೋಟ ಮಹವು

ಹರಿವ ನದಿಗೆ ಹರಿದಂತೆ ಹಳ್ಳ ಕೊಳ್ಳಗಳು ಸೇರುತಿಹವು
ಬೆಳೆವ ಮರಕೆ ಹಲವಾರು ರೆಂಬೆ ಕೊಂಬೆಗಳು ಅರಳುತಿಹವು

ಮಸೆತಗಳಲಿ ಮಸಗಾಡಿ ಕತ್ತಿ ಚೂಪಾಗಿ ಹೊಳೆಯುತಿಹುದು
ಹೊಸೆತಗಳಲಿ ನೂರಾರು ನಾರು ಮಿಣಿಹಗ್ಗ ಹೊಸೆಯುತಿಹುದು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೃಷ್ಠಿಗೆ ಗಡಿಗಳಿವೆಯೇ ?
Next post ಲಿಂಗಮ್ಮನ ವಚನಗಳು – ೫೨

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…