ಸರ್ವಜ್ಞ

ಮಾಸಿದ ಜನತೆಯ ತೊಳೆಯುತ್ತ ಸನ್ಮಾರ್ಗ
ತೋರಲು ಬರುವಂಥ ಬೆಳಕು ಸಂತರು
ಬಾಳನು ಬೆಳಗುವ ಬೆಳಕು

ಬಸವ ಬುದ್ಧರಂತೆ ರಾಮಕೃಷ್ಣರಂತೆ
ಸರ್ವಜ್ಞನೀ ಹುಟ್ಟಿ ಬಂದೆ ಮಲಗಿದ್ದ
ನಾಡವರನೆಬ್ಬಿಸ ಬಂದೆ

ತುಂಡುಗಂಬಳಿ ಹೊದ್ದು ಕರದಿ ಕಪ್ಪರ ಹಿಡಿದು
ವೀರಕೇಸರಿಯಂತೆ ತಿರುಗಿ ಲೋಕದ
ಡೊಂಕುಗಳ ತಿದ್ದುತ ಮರುಗಿ

ಜನಪದ ಚಕ್ರವರ್ತಿಯೆ ನಿನ್ನ ಬಾಯಲಿ
ಅನುಭವ ಹಾಡಾಗಿ ಬಂತು ತ್ರಿಪದಿಯ
ಸತ್ವದ ತುದಿಯೇರಿ ನಿಂತು

ಭ್ರಷ್ಟರ ನಾಚಿಸಿ ನೀಚರ ಹೇಸಿಸಿ
ಶಿಷ್ಟರ ಮಾಡಲು ದುಡಿದೇ ಜನರನು
ಹೆಜ್ಜೆ ಹೆಜ್ಜೆಗೆ ತಿದ್ದಿ ನಡೆದೆ

ಕನ್ನಡ ಕಣ್ಮಣಿ ಕನ್ನಡ ಶಕ್ತಿಯ
ಚೆನ್ನಾಗಿ ವಿಶ್ವಕ್ಕೆ ತೋರಿ ಸಾರಿದೆ
ಮಾನವರೊಂದೆಂದು ತೋರಿ

ಹಿಂದಿಲ್ಲ ಮುಂದಿಲ್ಲ ಗೊಂದಲವಾಗಿದೆ
ಇಂದಿನ ಪರಿಸರ ತಂದೆ ಸರ್ವಜ್ಞ
ನೀ ಬರಬಾರದೆ ಇಂದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರುಳಸಿದ್ಧ ಮತ್ತು ಸಿರಿಗೆರೆ ಬೃಹನ್ಮಠ – ಒಂದು ವಿವೇಚನೆ
Next post ಲಿಂಗಮ್ಮನ ವಚನಗಳು – ೪೯

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…