ಸರ್ವಜ್ಞ

ಮಾಸಿದ ಜನತೆಯ ತೊಳೆಯುತ್ತ ಸನ್ಮಾರ್ಗ
ತೋರಲು ಬರುವಂಥ ಬೆಳಕು ಸಂತರು
ಬಾಳನು ಬೆಳಗುವ ಬೆಳಕು

ಬಸವ ಬುದ್ಧರಂತೆ ರಾಮಕೃಷ್ಣರಂತೆ
ಸರ್ವಜ್ಞನೀ ಹುಟ್ಟಿ ಬಂದೆ ಮಲಗಿದ್ದ
ನಾಡವರನೆಬ್ಬಿಸ ಬಂದೆ

ತುಂಡುಗಂಬಳಿ ಹೊದ್ದು ಕರದಿ ಕಪ್ಪರ ಹಿಡಿದು
ವೀರಕೇಸರಿಯಂತೆ ತಿರುಗಿ ಲೋಕದ
ಡೊಂಕುಗಳ ತಿದ್ದುತ ಮರುಗಿ

ಜನಪದ ಚಕ್ರವರ್ತಿಯೆ ನಿನ್ನ ಬಾಯಲಿ
ಅನುಭವ ಹಾಡಾಗಿ ಬಂತು ತ್ರಿಪದಿಯ
ಸತ್ವದ ತುದಿಯೇರಿ ನಿಂತು

ಭ್ರಷ್ಟರ ನಾಚಿಸಿ ನೀಚರ ಹೇಸಿಸಿ
ಶಿಷ್ಟರ ಮಾಡಲು ದುಡಿದೇ ಜನರನು
ಹೆಜ್ಜೆ ಹೆಜ್ಜೆಗೆ ತಿದ್ದಿ ನಡೆದೆ

ಕನ್ನಡ ಕಣ್ಮಣಿ ಕನ್ನಡ ಶಕ್ತಿಯ
ಚೆನ್ನಾಗಿ ವಿಶ್ವಕ್ಕೆ ತೋರಿ ಸಾರಿದೆ
ಮಾನವರೊಂದೆಂದು ತೋರಿ

ಹಿಂದಿಲ್ಲ ಮುಂದಿಲ್ಲ ಗೊಂದಲವಾಗಿದೆ
ಇಂದಿನ ಪರಿಸರ ತಂದೆ ಸರ್ವಜ್ಞ
ನೀ ಬರಬಾರದೆ ಇಂದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರುಳಸಿದ್ಧ ಮತ್ತು ಸಿರಿಗೆರೆ ಬೃಹನ್ಮಠ – ಒಂದು ವಿವೇಚನೆ
Next post ಲಿಂಗಮ್ಮನ ವಚನಗಳು – ೪೯

ಸಣ್ಣ ಕತೆ

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys