Home / ಕವನ / ಕವಿತೆ / ಹರೆ ಬಂದಿದೆ ನಮ್ಮೂರ ಕೆರೆಗೆ

ಹರೆ ಬಂದಿದೆ ನಮ್ಮೂರ ಕೆರೆಗೆ

ಹರೆ ಬಂದಿದೆ ನಮ್ಮೂರ ಕೆರೆಗೆ
ಸುತ್ತ ಮುತ್ತ ಬೆಟ್ಟದ
ಮಣ್ಣುತಿಂದು ನೀರು ಕುಡಿದು
ಕೊಬ್ಬಿದ್ದಕ್ಕೇನೋ
ಚಲ್ಲಾಟಕ್ಕೇನೋ ಸರಿ
ಮೊನ್ನೆ ಮೊನ್ನೆ ಒಂದು ಹುಡುಗನ್ನ
ಹಾರ ತಗೊಂಡು ನುಂಗಿ
ನೀರು ಕುಡಿದು
ಇಂಬಾಗಿ ಸುತ್ತ ಮುತ್ತಿನ
ಹಸಿರು ತಲೆದಿಂಬಿಗೆ ತಲೆಯಿಟ್ಟು
ತಿಳಿ ನೀಲಿ ಸೀರೆಹೊದ್ದು
ಸಾವಿರಾರು ಕೊಪ್ಪೆ ಮೀನು
ಹುಳ ಹುಪ್ಪಡಿಗಳ ಮಹಾತಾಯಿಯಾಗಿ
ಮಲಗಿದೆ.
ಮುದ್ದಿನ ಮಕ್ಕಳು
ಗಣಪತಿ, ಕಾಳಿಮಾತಾ ವಿಗ್ರಹಗಳು
ತಾಬೂತ್ ಮಂಟಪಗಳು
ಆಗಾಗ ಬಂದು ಎಬ್ಬಿಸುತ್ತವೆ.
ಹೊಟ್ಟೆ ಎದೆಯಾಳಕ್ಕೆಲ್ಲಾ
ಅವರನ್ನು ಹೂತುಕೊಂಡು
ಇನ್ನೂ ಇನ್ನೂ ಉಬ್ಬುಬ್ಬಿ
ಮುಸುಕೆಳೆಯುವಾಗ….
ನಮ್ಮೂರ ಕೆರೆಯ
ತುಂಬಿದ ಹರೆ ನೋಡಿ
ರಾಜಕೀಯದವುಗಳು ಚಡಪಡಿಸುತ್ತವೆ.
ಬೋಟಿಂಗ್ ವ್ಯವಸ್ಥೆಮಾಡಿ
ಕ್ಲಬ್ ಹೌಸ್ ಹೊಕ್ಕು ಗುಂಡು ಹಾಕಲು
ಮೈ ಕೊಳೆ ತೊಳೆದುಕೊಳ್ಳುವ ಲಾರಿಗಳು –
ಕೆರೆಯಲ್ಲೇ ಹೇತು
ಕುಂಡಿ ತೊಳೆದುಕೊಳ್ಳುವ
ಜೋಪಡಿ ಪಟ್ಟಿಸಾಲು ಜನಗಳು –
ಎಲ್ಲವೂ ಆಕ್ರಮಿಸಿ ಮುಗಿದೇ ಹೋಗಿತ್ತು.
ಎದೆಯೊಳಕ್ಕೆ ನೋವು ನಾಟಿತ್ತು
ಮೈಮರೆತ ಹರೆಯದ
ಕೆರೆ ಎಚ್ಚರಾದಾಗ
ನೋವು ಹತಾಶೆ ಶೋಷಣೆ

ಈಗ: ಈಗೀಗ ರೊಚ್ಚುಕಿಚ್ಚು
ಕೆರೆಗೆ.
ಅಂತೆಯೇ ಏನೋ
ಬಹಳ ದಿವಸದ ಮೇಲೆ
ಇಂದು ನೋಡಿದಾಗ
ತನ್ನ ತಾ ಸುಟ್ಟುಕೊಂಡು
ಆತ್ಮಹತ್ಯ ಮಾಡಿಕೊಂಡ ಪಳೆಯುಳಿಕೆಗಳ
ಬತ್ತಿದ ನೆಲ ನೋಡಿ
ಗಂಟಲು ತುಂಬಿ
ಕೈಮುಗಿದು ಈಗಷ್ಟೇ
ಮರಳುತ್ತಿದ್ದೇನೆ ಗುಂಡಿಗೆಯ
ರಕ್ತದೊತ್ತಡ ಪರೀಕ್ಷಿಸಿಕೊಳ್ಳಲು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...