Home / ಕವನ / ಕವಿತೆ / ಹರೆ ಬಂದಿದೆ ನಮ್ಮೂರ ಕೆರೆಗೆ

ಹರೆ ಬಂದಿದೆ ನಮ್ಮೂರ ಕೆರೆಗೆ

ಹರೆ ಬಂದಿದೆ ನಮ್ಮೂರ ಕೆರೆಗೆ
ಸುತ್ತ ಮುತ್ತ ಬೆಟ್ಟದ
ಮಣ್ಣುತಿಂದು ನೀರು ಕುಡಿದು
ಕೊಬ್ಬಿದ್ದಕ್ಕೇನೋ
ಚಲ್ಲಾಟಕ್ಕೇನೋ ಸರಿ
ಮೊನ್ನೆ ಮೊನ್ನೆ ಒಂದು ಹುಡುಗನ್ನ
ಹಾರ ತಗೊಂಡು ನುಂಗಿ
ನೀರು ಕುಡಿದು
ಇಂಬಾಗಿ ಸುತ್ತ ಮುತ್ತಿನ
ಹಸಿರು ತಲೆದಿಂಬಿಗೆ ತಲೆಯಿಟ್ಟು
ತಿಳಿ ನೀಲಿ ಸೀರೆಹೊದ್ದು
ಸಾವಿರಾರು ಕೊಪ್ಪೆ ಮೀನು
ಹುಳ ಹುಪ್ಪಡಿಗಳ ಮಹಾತಾಯಿಯಾಗಿ
ಮಲಗಿದೆ.
ಮುದ್ದಿನ ಮಕ್ಕಳು
ಗಣಪತಿ, ಕಾಳಿಮಾತಾ ವಿಗ್ರಹಗಳು
ತಾಬೂತ್ ಮಂಟಪಗಳು
ಆಗಾಗ ಬಂದು ಎಬ್ಬಿಸುತ್ತವೆ.
ಹೊಟ್ಟೆ ಎದೆಯಾಳಕ್ಕೆಲ್ಲಾ
ಅವರನ್ನು ಹೂತುಕೊಂಡು
ಇನ್ನೂ ಇನ್ನೂ ಉಬ್ಬುಬ್ಬಿ
ಮುಸುಕೆಳೆಯುವಾಗ….
ನಮ್ಮೂರ ಕೆರೆಯ
ತುಂಬಿದ ಹರೆ ನೋಡಿ
ರಾಜಕೀಯದವುಗಳು ಚಡಪಡಿಸುತ್ತವೆ.
ಬೋಟಿಂಗ್ ವ್ಯವಸ್ಥೆಮಾಡಿ
ಕ್ಲಬ್ ಹೌಸ್ ಹೊಕ್ಕು ಗುಂಡು ಹಾಕಲು
ಮೈ ಕೊಳೆ ತೊಳೆದುಕೊಳ್ಳುವ ಲಾರಿಗಳು –
ಕೆರೆಯಲ್ಲೇ ಹೇತು
ಕುಂಡಿ ತೊಳೆದುಕೊಳ್ಳುವ
ಜೋಪಡಿ ಪಟ್ಟಿಸಾಲು ಜನಗಳು –
ಎಲ್ಲವೂ ಆಕ್ರಮಿಸಿ ಮುಗಿದೇ ಹೋಗಿತ್ತು.
ಎದೆಯೊಳಕ್ಕೆ ನೋವು ನಾಟಿತ್ತು
ಮೈಮರೆತ ಹರೆಯದ
ಕೆರೆ ಎಚ್ಚರಾದಾಗ
ನೋವು ಹತಾಶೆ ಶೋಷಣೆ

ಈಗ: ಈಗೀಗ ರೊಚ್ಚುಕಿಚ್ಚು
ಕೆರೆಗೆ.
ಅಂತೆಯೇ ಏನೋ
ಬಹಳ ದಿವಸದ ಮೇಲೆ
ಇಂದು ನೋಡಿದಾಗ
ತನ್ನ ತಾ ಸುಟ್ಟುಕೊಂಡು
ಆತ್ಮಹತ್ಯ ಮಾಡಿಕೊಂಡ ಪಳೆಯುಳಿಕೆಗಳ
ಬತ್ತಿದ ನೆಲ ನೋಡಿ
ಗಂಟಲು ತುಂಬಿ
ಕೈಮುಗಿದು ಈಗಷ್ಟೇ
ಮರಳುತ್ತಿದ್ದೇನೆ ಗುಂಡಿಗೆಯ
ರಕ್ತದೊತ್ತಡ ಪರೀಕ್ಷಿಸಿಕೊಳ್ಳಲು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...