Home / ಕವನ / ಕವಿತೆ / ಹತ್ತಿಬಿಡಿಸಲಿಕ್ಕೆ ಹೋಗೋಣು ಬಾರೆ

ಹತ್ತಿಬಿಡಿಸಲಿಕ್ಕೆ ಹೋಗೋಣು ಬಾರೆ

ಬಾಲೆ ವಿಲಾಯತಿ ಹತ್ತಿ ಬಿಡಿಸಲಿಕ್ಕೆ
ಆಲಸ್ಯಮಾಡದೆ ಹೋಗುಣ ಬಾರೆ || ಪ ||

ಏಳು ಹೊಲಗಳ ನಡುವೆ ಹಳ್ಳದ ಮೇಲಿರುವ
ಹಳೆ ಹುಳಕ ಹಕ್ಕಲ ಬಾಳ ಬೆಳಕದಿ ಹತ್ತಿದೊಳೆಗಳು
ಗಾಳಿ ಮಳೆಗೆ ಉದುರುತಿಹವು
ಪೇಳುವೆ ಸುತ್ತಲು ಸಣ್ಣ
ಮಳಲಿನೊಳು ಸೀಮಿಕಲ್ಲು ನಟ್ಟಿರ್ಪುದು
ನಿಳಯದ ಕರಕಿ ಹುಲ್ಲು ಕಪಟ ಭೂಮಿ
ತಿಳಿಯ ಮಣ್ಣು ಕರ್ಲಿನಲಿ ಕೆಲವರೆಲ್ಲರು ಮಮ್ಮಾಯಿ
ಕಾಳು ಬಿತ್ತಿ ಹೊನ್ಗಗಳ ಘಳಿಸಿ ಗರ್ವದಿ || ೧ ||

ಊರ ಜನರೊಳೆವರಲ್ಲ
ಒಬ್ಬರೊಬ್ಬರ ಹೊಲಕೆ ಹೋಗದಿರೆ ಎಲ್ಲೆಲ್ಲಿ
ನೋಡಿದರು ಹೆಚ್ಚಿನ ಧಡೆಗಲ್ಲು
ಮೂವತ್ತು ಸೇರಿನ ದಂಡಿಗಿ ಇವರು ತೂಗುವರೋ ಬ್ಯಾರೆ
ಭಾರಿ ಭಾರಿ ಜಡಿ ಜಡಿಯ ತೂಕದ
ಮೂರುವರಿ ದುಡ್ಡುಗಳು ಕೊಡುತಿಹರು
ಆರಗೊಡವಿನ್ನೇನು ನಮಗೆ
ನಾರಿಮಣಿ ನಮ್ಮ ಹೊಲಕೆ ನಡಿಯೇ || ೨ ||

ಸೃಷ್ಟಿಯೊಳು ನಾವೀರ್ವರು ಹುಟ್ಟಿ ಬೆಳೆಯುವರು
ಕಟ್ಟಳತೆ ಇಲ್ಲದ ಭವದ ಕೂಳಿನೊಳು
ಮುಟ್ಟು ಮೈಲಿಗೆಯ ಜಲಹತ್ತಿ
ಬಿಟ್ಟಿದ್ದರೆ ಫಲ ಬೆಳಸಬಾರದ ರೀತಿ
ಎಷ್ಟು ಹೇಳಬೇಕರಿ ಪಾಪದ
ಮಟ್ಟಿಯಲ್ಲಿ ಹಣ ಕಟ್ಟಿಕೊಂಬರು
ಬಿಟ್ಟು ಬಾ ಶಿಶುನಾಳಧೀಶನ
ಬಟ್ಟಬೈಲಿಯ ಹೊಲಕ ನಡಿಯೇ || ೩ ||
*****

 

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...