ಗುರ್ ಅಂತೀನಿ ಹುಲಿಯಲ್ಲ
ಜೋರಾಗ್ ಓಡ್ತೀನ್ ಮೊಲವಲ್ಲ.
ದುಡ್ಡಿದ್ರೆ ನಾ ಸಿಗ್ತೀನಿ
ಔಟ್ಹೌಸಲ್ಲೆ ಇರ್ತೀನಿ
ನಿನಗೋ ಎರಡೇ ಕಣ್ಣುಗಳು
ನನಗೋ ಎರಡಿವೆ ಬೆನ್ನಲ್ಲೂ
ರೆಪ್ಪೆಯೆ ಇಲ್ಲದ ಕಣ್ಣುಗಳು
ಸ್ವಿಚ್ಚನು ಒತ್ತಲು ಹೊಳೆಯುವುವು
ಪ್ರಾಣಿಯ ಹಾಗೇ ಕಾಲುಗಳು
ಆದ್ರೂ ಇಲ್ಲ ಬಾಲ,
ನಾ ಯಾರೂಂತ ಗೊತ್ತಾಯ್ತ?
ನೋಡ್ತೀನ್ ಹೇಳೇ ಶೀಲಾ
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.