ಗಂಗೋತ್ರಿಯಲ್ಲಿ ರಾತ್ರಿ

ಗಂಗೋತ್ರಿಯಲ್ಲಿ ರಾತ್ರಿ
ರೋಡುಗಳೇಕೆ ನಡೆಯುವುದಿಲ್ಲ
ಕಟ್ಟಡಗಳೇಕೆ ತೆರೆಯುವುದಿಲ್ಲ
ಮರಗಳು ನಿಂತದ್ದೇಕೆ
ಮಣ್ಣು ಮಲಗಿದ್ದೇಕೆ
ಸಮಯ ಯಾಕೆ ತುಂಡಾಗಿದೆ ಹೀಗೆ
ಯಾಕೆ ಲೈಟು ಕಂಬಗಳಿಂದ ಬೆಳಕು ಸ್ಖಲಿಸಿ
ವ್ಯವಾಗುತ್ತಿದೆ

ನನಗೆ ಗೊತ್ತಿರುವ ಸಮುದ್ರದಂಡೆಗೆ
ಎಷ್ಟು ದೂರ ಇಲ್ಲಿಂದ
ಎಲ್ಲಿ ಮೊಗವೀರರ ದೋಣಿಗಳು
ದೋಣಿಗಳಾಗಿರದೆ ತಿಮಿಂಗಿಲಗಳಾಗುತ್ತವೆ
ನಿದ್ರಾವಸ್ಥೆ ಸುಮ್ಮನೆ ಜಡವಾಗದೆ
ಕೈಕಾಲು ತೊಡೆಗಳ ಸಂಬಂಧದಲ್ಲಿ
ವೀರ್ಯಗೊಳ್ಳುತ್ತದೆ
ಉಪ್ಪು ನೀರಿನ ನಿಲ್ಲದ ತೆರೆಗಳಲ್ಲಿ
ಶ್ವಾಸ ಸ್ವೀಕರಿಸುತ್ತದೆ ಬಿಡುತ್ತದೆ

ಅಂಥ ರಾತ್ರಿ ಇದಲ್ಲ
ಗಂಗೋತ್ರಿಯಲ್ಲಿ ರಾತ್ರಿ
ಕುಕ್ಕನಹಳ್ಳಿನ ಹೆಪ್ಪಿನಂತೆ ಥಂಡಿ
ಬರೇ ಆಕಾಶ ನೆಲಕ್ಕೆ ಕವುಚಿ
ಒಂದರೊಳಗೊಂದು ಜಾರಿ
ಉಂಟಾದ ಗೋಲ

ಕ್ರಮೇಣ ಕುಗ್ಗುತ್ತಿದೆ-ಸ್ಫೋಟಿಸುವುದಿಲ್ಲ
ಇದರ ಮೈಯಾಚೆಗೆ ಏನೂ ಕಾಣಿಸುತ್ತಿಲ್ಲ
ಆಚೆ ಕಣಿವೆ ಬಯಲುಗಳ ಓರೆಕೋರೆಗಳಲ್ಲಿ
ಕತ್ತಲೊ ಮಬ್ಬೊ ಹಗಲಿದ್ದರೂ ಇದ್ದೀತು
ಅಂಥ ಅವ್ಯಕ್ತ ವಲಯಗಳಲ್ಲಿ ಯಾವ ಜನ ಯಾವ ಭಾಷೆ
ಇಲ್ಲಿ ಮಗ್ಗಲು ಬದಲಿಸಿದಾಗ ಅಲ್ಲಿ ಏನಾಗುತ್ತದೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ ಒದ್ದಾಡ್ತಿಯಾ
Next post ಕಾರ್ಪೊರೇಶನ್ ಸರ್ಕಲ್ಲಿನ ರಸ್ತೆಗಳು

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…