Home / ಕವನ / ಕವಿತೆ / ಗಂಗೋತ್ರಿಯಲ್ಲಿ ರಾತ್ರಿ

ಗಂಗೋತ್ರಿಯಲ್ಲಿ ರಾತ್ರಿ

ಗಂಗೋತ್ರಿಯಲ್ಲಿ ರಾತ್ರಿ
ರೋಡುಗಳೇಕೆ ನಡೆಯುವುದಿಲ್ಲ
ಕಟ್ಟಡಗಳೇಕೆ ತೆರೆಯುವುದಿಲ್ಲ
ಮರಗಳು ನಿಂತದ್ದೇಕೆ
ಮಣ್ಣು ಮಲಗಿದ್ದೇಕೆ
ಸಮಯ ಯಾಕೆ ತುಂಡಾಗಿದೆ ಹೀಗೆ
ಯಾಕೆ ಲೈಟು ಕಂಬಗಳಿಂದ ಬೆಳಕು ಸ್ಖಲಿಸಿ
ವ್ಯವಾಗುತ್ತಿದೆ

ನನಗೆ ಗೊತ್ತಿರುವ ಸಮುದ್ರದಂಡೆಗೆ
ಎಷ್ಟು ದೂರ ಇಲ್ಲಿಂದ
ಎಲ್ಲಿ ಮೊಗವೀರರ ದೋಣಿಗಳು
ದೋಣಿಗಳಾಗಿರದೆ ತಿಮಿಂಗಿಲಗಳಾಗುತ್ತವೆ
ನಿದ್ರಾವಸ್ಥೆ ಸುಮ್ಮನೆ ಜಡವಾಗದೆ
ಕೈಕಾಲು ತೊಡೆಗಳ ಸಂಬಂಧದಲ್ಲಿ
ವೀರ್ಯಗೊಳ್ಳುತ್ತದೆ
ಉಪ್ಪು ನೀರಿನ ನಿಲ್ಲದ ತೆರೆಗಳಲ್ಲಿ
ಶ್ವಾಸ ಸ್ವೀಕರಿಸುತ್ತದೆ ಬಿಡುತ್ತದೆ

ಅಂಥ ರಾತ್ರಿ ಇದಲ್ಲ
ಗಂಗೋತ್ರಿಯಲ್ಲಿ ರಾತ್ರಿ
ಕುಕ್ಕನಹಳ್ಳಿನ ಹೆಪ್ಪಿನಂತೆ ಥಂಡಿ
ಬರೇ ಆಕಾಶ ನೆಲಕ್ಕೆ ಕವುಚಿ
ಒಂದರೊಳಗೊಂದು ಜಾರಿ
ಉಂಟಾದ ಗೋಲ

ಕ್ರಮೇಣ ಕುಗ್ಗುತ್ತಿದೆ-ಸ್ಫೋಟಿಸುವುದಿಲ್ಲ
ಇದರ ಮೈಯಾಚೆಗೆ ಏನೂ ಕಾಣಿಸುತ್ತಿಲ್ಲ
ಆಚೆ ಕಣಿವೆ ಬಯಲುಗಳ ಓರೆಕೋರೆಗಳಲ್ಲಿ
ಕತ್ತಲೊ ಮಬ್ಬೊ ಹಗಲಿದ್ದರೂ ಇದ್ದೀತು
ಅಂಥ ಅವ್ಯಕ್ತ ವಲಯಗಳಲ್ಲಿ ಯಾವ ಜನ ಯಾವ ಭಾಷೆ
ಇಲ್ಲಿ ಮಗ್ಗಲು ಬದಲಿಸಿದಾಗ ಅಲ್ಲಿ ಏನಾಗುತ್ತದೆ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...