ಕಾರ್ಪೊರೇಶನ್ ಸರ್ಕಲ್ಲಿನ ರಸ್ತೆಗಳು

ಆ ಸರ್ಕಲ್ಲೇ ಹಾಗೆ ಭಯಪಡಬೇಡಿ,
ಸುತ್ತ ಮುತ್ತಲಿನ ದೊಡ್ಡ ದೊಡ್ಡ ಇಮಾರತಿಯ
ಕೆಳಗೆಲ್ಲ ಒಳಗೆಲ್ಲ ಹೊರಗೆಲ್ಲ
ಸುತ್ತೆಲ್ಲ ಕಾಯುತ್ತಿರುತ್ತಾರೆ ಬೇಟೆಗಾರರು.

ಹಸಿರು ಲೈಟು ಕಣ್ಣುಹೊಡೆದದ್ದೇ ಸಾಕು
ಅದೇನು ತರಾತುರಿ
ಬೇಟೆ ಎಲ್ಲಿ ತಪ್ಪೀತೇನೋ ಎನ್ನುವ ಓಟ,
ಅಬ್ಬಾ! ಸುತ್ತೆಲ್ಲ ಬಣ್ಣ ಬಣ್ಣದ ಕಾರುಗಳ
ವೀರ ಭಂಟರು ಬೇಟೆಗಾರರು ಬರುತ್ತಿದ್ದಾರೆ.

ವಿಧಾನಸೌಧದೆಡೆಗೆ ನುಗ್ಗಿ
ಲೂಟಿ ಮಾಡುವ ರಾಜಕೀಯದವರು-
ಮ್ಯಾಜೆಸ್ಟಿಕ್ ಹೊಕ್ಕು
ಪರ್ಸ್ ಸರ ಹಾರಿಸುವ ಲಘಂಗರು-
ಎಮ್.ಜಿ ರೋಡಿಗೆ ಧಾವಿಸಿ
೫೦%ದ ಸೇಲ್ ಬೋರ್ಡ್ ಹಾಕಿ
ಹಳೇ ಸ್ಟಾಕ್ ಮಾರುವ ಮೋಸಗಾರರು-
ಜೆ. ಸಿ ರೋಡ್, ಕೆ. ಅರ್ ಮಾರ್ಕೆಟ್ಟಿನ
ಡುಪ್ಲಿಕೇಟ್ ಸಾಮಾನಿನ ಖದೀಮರು-
ಸರ್ಕಲ್ಲಿನ ಸುತ್ತ ಧಾವಿಸಿ ಓಡುತ್ತಿದ್ದಾರೆ.

ಇಡೀದಿನ ಬೇಟೆಯಾಡಿ ಗಹಗಹಿಸುವ ಇವರು-
ಡುಪ್ಲಿಕೇಟ್ ಮೋಡಕಾ ತುಂಬಿಕೊಂಡ ಹೋದ ಅವರು-
ಪರ್ಸ ಕಳೆದುಕೊಂಡು
ಮನೆ ಸೇರಲೂ ಕಾಸಿಲ್ಲದೆ ಆಟೋಹಿಡಿದು
ಚಿಲ್ಲರೆ ಹೊಂದಿಸಿ ಉಸಿರುಬಿಟ್ಟಿದ್ದೇನು.
ಇಲ್ಲಿ ಮೋಸ ಹೊಂದಿ ಕಣ್ಣೀರು ಸುರಿಸುವ
ಜಗಳ ಹೊತ್ತಿಕೊಳ್ಳುವ ಸಂಜೆಯ ಸಮಯ.
ಅಲ್ಲಿ ನಡುರಾತ್ರಿಯವರೆಗೂ
ಗುಂಡು ಹಾಕಿ ಕೇಕೆಹೊಡೆಯುವ ಸಂಭ್ರಮ

ಗೊತ್ತಿರಲಿ ನಿಮಗೆ,
ಉದ್ದುದ್ದಾಗಿ, ಅಡ್ಡಡ್ಡಾಗಿ ಡೊಂಕಾಗಿ
ಇಂಬಾಗಿ ಕಾಣಿಸಿಕೊಳ್ಳುವ ರಸ್ತೆಗಳ
ಸುತ್ತ ಮುತ್ತಲಿನ ದೊಡ್ಡ ದೊಡ್ಡ
ಇಮಾರತಿಯ ಕೆಳಗೆಲ್ಲ ಒಳಗೆಲ್ಲ
ಹೊರಗೆಲ್ಲ ಸುತ್ತೆಲ್ಲ ಕಾಯುತ್ತಿರುತ್ತಾರೆ
ಬೇಟೆಗಾರರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಂಗೋತ್ರಿಯಲ್ಲಿ ರಾತ್ರಿ
Next post ದಾರ : ಭಾರ

ಸಣ್ಣ ಕತೆ

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys