Home / ಕವನ / ಕವಿತೆ / ಕಾರ್ಪೊರೇಶನ್ ಸರ್ಕಲ್ಲಿನ ರಸ್ತೆಗಳು

ಕಾರ್ಪೊರೇಶನ್ ಸರ್ಕಲ್ಲಿನ ರಸ್ತೆಗಳು

ಆ ಸರ್ಕಲ್ಲೇ ಹಾಗೆ ಭಯಪಡಬೇಡಿ,
ಸುತ್ತ ಮುತ್ತಲಿನ ದೊಡ್ಡ ದೊಡ್ಡ ಇಮಾರತಿಯ
ಕೆಳಗೆಲ್ಲ ಒಳಗೆಲ್ಲ ಹೊರಗೆಲ್ಲ
ಸುತ್ತೆಲ್ಲ ಕಾಯುತ್ತಿರುತ್ತಾರೆ ಬೇಟೆಗಾರರು.

ಹಸಿರು ಲೈಟು ಕಣ್ಣುಹೊಡೆದದ್ದೇ ಸಾಕು
ಅದೇನು ತರಾತುರಿ
ಬೇಟೆ ಎಲ್ಲಿ ತಪ್ಪೀತೇನೋ ಎನ್ನುವ ಓಟ,
ಅಬ್ಬಾ! ಸುತ್ತೆಲ್ಲ ಬಣ್ಣ ಬಣ್ಣದ ಕಾರುಗಳ
ವೀರ ಭಂಟರು ಬೇಟೆಗಾರರು ಬರುತ್ತಿದ್ದಾರೆ.

ವಿಧಾನಸೌಧದೆಡೆಗೆ ನುಗ್ಗಿ
ಲೂಟಿ ಮಾಡುವ ರಾಜಕೀಯದವರು-
ಮ್ಯಾಜೆಸ್ಟಿಕ್ ಹೊಕ್ಕು
ಪರ್ಸ್ ಸರ ಹಾರಿಸುವ ಲಘಂಗರು-
ಎಮ್.ಜಿ ರೋಡಿಗೆ ಧಾವಿಸಿ
೫೦%ದ ಸೇಲ್ ಬೋರ್ಡ್ ಹಾಕಿ
ಹಳೇ ಸ್ಟಾಕ್ ಮಾರುವ ಮೋಸಗಾರರು-
ಜೆ. ಸಿ ರೋಡ್, ಕೆ. ಅರ್ ಮಾರ್ಕೆಟ್ಟಿನ
ಡುಪ್ಲಿಕೇಟ್ ಸಾಮಾನಿನ ಖದೀಮರು-
ಸರ್ಕಲ್ಲಿನ ಸುತ್ತ ಧಾವಿಸಿ ಓಡುತ್ತಿದ್ದಾರೆ.

ಇಡೀದಿನ ಬೇಟೆಯಾಡಿ ಗಹಗಹಿಸುವ ಇವರು-
ಡುಪ್ಲಿಕೇಟ್ ಮೋಡಕಾ ತುಂಬಿಕೊಂಡ ಹೋದ ಅವರು-
ಪರ್ಸ ಕಳೆದುಕೊಂಡು
ಮನೆ ಸೇರಲೂ ಕಾಸಿಲ್ಲದೆ ಆಟೋಹಿಡಿದು
ಚಿಲ್ಲರೆ ಹೊಂದಿಸಿ ಉಸಿರುಬಿಟ್ಟಿದ್ದೇನು.
ಇಲ್ಲಿ ಮೋಸ ಹೊಂದಿ ಕಣ್ಣೀರು ಸುರಿಸುವ
ಜಗಳ ಹೊತ್ತಿಕೊಳ್ಳುವ ಸಂಜೆಯ ಸಮಯ.
ಅಲ್ಲಿ ನಡುರಾತ್ರಿಯವರೆಗೂ
ಗುಂಡು ಹಾಕಿ ಕೇಕೆಹೊಡೆಯುವ ಸಂಭ್ರಮ

ಗೊತ್ತಿರಲಿ ನಿಮಗೆ,
ಉದ್ದುದ್ದಾಗಿ, ಅಡ್ಡಡ್ಡಾಗಿ ಡೊಂಕಾಗಿ
ಇಂಬಾಗಿ ಕಾಣಿಸಿಕೊಳ್ಳುವ ರಸ್ತೆಗಳ
ಸುತ್ತ ಮುತ್ತಲಿನ ದೊಡ್ಡ ದೊಡ್ಡ
ಇಮಾರತಿಯ ಕೆಳಗೆಲ್ಲ ಒಳಗೆಲ್ಲ
ಹೊರಗೆಲ್ಲ ಸುತ್ತೆಲ್ಲ ಕಾಯುತ್ತಿರುತ್ತಾರೆ
ಬೇಟೆಗಾರರು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...