ಮುತ್ತು ರನ್ನದ ಕಿಡಿ ಉದುರೀತು

ಮುತ್ತು ರನ್ನದ ಕಿಡಿ ಉದುರೀತು
ಕಡು ವಿಷಯ ಹಿಂದಿನ ಪಾಪ ಬಂದು ಮಂದೆ ನಿಂತೀತು || ಪ ||

ಅಪ್ಪ ಅಣ್ಣಗಳೆಲ್ಲ ಕೇಳಿರಿ ತಪ್ಪಲಾರದು ಕರ್ಮದೋಷವು
ಒಪ್ಪುವಂಥಾ ಘಟವು ಬಿಟ್ಟು ಕ್ಷಣದಲಿ ಅಸು ಹಾರಿಹೋಯಿತು ||ಆ.ಪ.||

ದೇಶಕಧಿಕವಾದ ಹುಬ್ಬಳ್ಳಿ ಹುಚ್ಚಯ್ಯಸ್ವಾಮಿ
ಮಠದ ಪಟ್ಟದ ಚರಮೂರ್ತಿ ಅವರ ಕೀರ್ತಿ ಸಾರಿ ಸದ್ಭಕ್ತರಿಗೆ
ದುಃಖವು ಗಾರಗೊಂಡಿತು ಮನದ ಕೊನೆಯೊಳು
ಆರು ಮಾಡುವರೇನು ಇದಕೆ ಹುಟ್ಟಸಿದ ಶಿವ ತಾನೇ ಬಲ್ಲಾ || ೧ ||

ಏನು ಎಷ್ಟಿದರೊಳು ಎಷ್ಟು ದಿವಸ ಇದ್ದರೆ ಸಾವು ತಪ್ಪದು
ಮೃತ್ಯುಬುದ್ಧಿಯನ್ನು ಬಲ್ಲವರೊಳು ಕೇಳು
ಅಲ್ಲಮ ಮಹಾಪ್ರಭುವಿನ ಸಿರಿಯು ತುಂಬಿ
ಯೋಗಮಂದಿರದೊಳು ಬೆಳಗುವ ಕಳಿವುಳ್ಳ ಬಸವಾದಿ ಪ್ರಮಥರು || ೨ ||

ಕಾಶೀ ಗ್ರಾಮದ ಪುಣ್ಯ ತೀರಿತು ಬೈಲಾಯಿತು
ಬೈಲಿನೊಳಗೆ ಬೈಲು ಆಯಿತು ಕಡಿಗೆ ಆಯಿತು
ಒಡಿಯ ಶಿಶುನಾಳ ಈಶನಡಿಗೆ ಬಿಡದೆ ಭಜಿಸುವ ನಿಮ್ಮ ಧ್ಯಾನದಿ
ನುಡಿದ ಮಾತಿಗೆ ಕಸರು ಇದ್ದರೆ ತಿದ್ದಿ ಹೇಳಿರಿ ರಸಿಕರೆಲ್ಲಾ || ೩ ||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಳವಿಯ ಜಾತ್ರೆಗಿ ಹೋಗೋಣು ಬನ್ನಿರಮ್ಮಾ
Next post ಗುಗ್ಗುಳ ಹೊರಟಿತಮ್ಮಾ

ಸಣ್ಣ ಕತೆ

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys