ಗುಗ್ಗುಳ ಹೊರಟಿತಮ್ಮಾ

ಗುಗ್ಗುಳ ಹೊರಟಿತಮ್ಮಾ ಈ ಊರೊಳು
ಗುಗ್ಗುಳ ಹೊರಟಿತಮ್ಮಾ || ಪ||

ಗುಗ್ಗುಳ ಹೊರಟಿತು
ವೆಗ್ಗಳಾಯಿತು ಮ್ಯಾಳಾ
ಸ್ವರ್ಗದೊಳಿರುವ ಶ್ರೀ ರುದ್ರನರಿಯದಾಗಿ ||ಅ.ಪ.||

ಭೂತ ಪಂಚಕ ರೂಪದಾ ಪುರಂತರು
ಆತುಕೊಂಡಿರುತಿಹರು
ನೂತನವಾಯಿತು ಏ ತರುಣಿ ಕೇಳೆ
ಧಾತ ಶಿವನ ತನುಜಾತನರಿಯದಾಗಿ ||೧||

ದಕ್ಷನ ವಧಮಾಡಿದೆ ಷಣ್ಮುಖದೇವಾ
ಸಾಕ್ಷಾತನನು ಕೂಡಿದೆ
ಈ ಕ್ಷಿತಿಯೊಳು ಬೂದ್ಯಾಳ ಗ್ರಾಮದೊಳು ತಾ
ಸಾಕ್ಷತ ಬಸವನಾಲಯದಂಗಳದೊಳು ||೨||

ಇಳೆಯೋಳ್ ಅಧಿಕವಾಯಿತು ಶಿಶು-
ನಾಳಧೀಶನ ಮನವೆನಿತು
ತಿಳಿದು ನೋಡೆ ಇಂದು ಲಲನಾಮಣಿಯೆ ಕೇಳೆ
ಹೊಳಿವ ಕುಂಭದ ರೂಪಾ ಬೆಳಕಿನ ಉರಿಯಂತೆ ||೩||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುತ್ತು ರನ್ನದ ಕಿಡಿ ಉದುರೀತು
Next post ವಾರಿಜಾಕ್ಷಿ ವನಪಿನೊಯ್ಯಾರೆ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…