ಭೂತ

ಕಾಡುತಿದೆ ಭೂತ
ಅನೇಕ ರೂಪಗಳಲ್ಲಿ
ಅನೇಕ ಪರಿಗಳಲ್ಲಿ

ಮನೆ ಬಾಗಿಲು ಕಿಟಕಿಗಳ
ಕೊನೆಗೆ ಕೋಣೆ, ಮೆಟ್ಟಲುಗಳ
ದಿಕ್ಕ ದೆಸೆಗಳ ನಿರ್ಧರಿಸುತ್ತದೆ

ಸಾಯುವ ಹುಟ್ಟುವ
ಕ್ಷಣ ಗಣನೆಗಳ ಗುಣುಗುಣಿಸಿ
ಪೂಜೆ ಬಲಿದಾನಗಳ ಮಾಡಿಸುತ್ತದೆ
ಗಂಡು ಹೆಣ್ಣು ಕೂಡಿಸಲು
ಓಡಿ ಹೋದ ದಿಕ್ಕು
ಮುಹೂರ್ತಗಳ ಗುರುತಿಸುತ್ತದೆ

ಕೆಲಸ ಮಾಡಲು ಕೆಲಸಕ್ಕೆ ಸೇರಲು
ಕೆಲಸ ಶುರು ಮಾಡಲು
ಎಲ್ಲ ಸಮಯಗಳಲ್ಲಿ
ಭೂತ ಆಳುತ್ತದೆ

ಹಲ್ಲಿಗಳ ಬೀಳಿಸುತ್ತದೆ
ಬೆಕ್ಕುಗಳ ಅಡ್ಡ ಬರಿಸುತ್ತದೆ
ಬಿಕ್ಕಳಿಕೆ ಆಕಳಿಕೆಗಳಲ್ಲೂ
ಧ್ವನಿ ಮಾಡುತ್ತದೆ

ಸೀನುಗಳ ಸಂಖ್ಯೆಗಳಿಗೆ ಅರ್ಥ ಕೊಡುತ್ತದೆ
ಕಣ್ಣು ಅದುರಿದರೂ ಬೆದರುತ್ತದೆ ಜೀವ
ಗುಡಿಗಳ ಕಟ್ಟಿಸುತ್ತದೆ ಮೂರ್ತಿಗಳ ಸ್ಥಾಪಿಸುತ್ತದೆ
ಮಂತ್ರ ತಂತ್ರ ಪುರಾಣಗಳ ಕಟ್ಟುತ್ತದೆ
ಷೋಡಶೋಪಚಾರಗಳ ನೇಮಿಸುತ್ತದೆ
ಮೌಢ್ಯದ ಬಂಡವಾಳ ವ್ಯಾಪಾರದ ಸರಕು

ಭಕ್ತರ ಸಾಲು ಸಾಲು
ಅಡ್ಡ ಬೀಳುತ್ತವೆ ತಲೆ ಬೋಳಿಸಿಕೊಳ್ಳುತ್ತವೆ
ದಿಂಡುರುಳಿ ದೇಹ ದಂಡಿಸುತ್ತವೆ
ಕಾಣದ ಕೈವಾಡಕ್ಕೆ ಶರಣಾಗುತ್ತವೆ

ಕಾವಿ ಗಡ್ಡ ನಾಮ ವರದ ಹಸ್ತಗಳ ಮುಂದೆ
ಸಾವಿರ ಸಾವಿರ ಸನ್ನಿಬಡಕ ತಲೆಗಳು
ಬಾಗಿ ನೆಲ ಮುಟ್ಟುತವೆ

ಅವರ ನೋಡಿ ಇವರು ಮತ್ತಿವರ ನೋಡಿ ಅವರು
ಎಲ್ಲರೂ ನೆಲಕಪ್ಪಚ್ಚಿ ಬಕ್ಕ ಬಾರಲು
ಬುದ್ದಿ ಜೀವಿಗಳು ಕೂಡಾ ಅರಲು ಬರಲು

ವರ್ತಮಾನದ ದೀಪ ಭವಿಷ್ಯದ ತಾಪ
ತಣ್ಣಗಾಗಿ ಭೂತದ ಪೆಡಂಭೂತ ತೆಕ್ಕೆಯೊಳಗೆ
ನಲುಗುತ್ತದೆ ಮುಲುಮುಲುಗಿ

*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...