ಭೂತ

ಕಾಡುತಿದೆ ಭೂತ
ಅನೇಕ ರೂಪಗಳಲ್ಲಿ
ಅನೇಕ ಪರಿಗಳಲ್ಲಿ

ಮನೆ ಬಾಗಿಲು ಕಿಟಕಿಗಳ
ಕೊನೆಗೆ ಕೋಣೆ, ಮೆಟ್ಟಲುಗಳ
ದಿಕ್ಕ ದೆಸೆಗಳ ನಿರ್ಧರಿಸುತ್ತದೆ

ಸಾಯುವ ಹುಟ್ಟುವ
ಕ್ಷಣ ಗಣನೆಗಳ ಗುಣುಗುಣಿಸಿ
ಪೂಜೆ ಬಲಿದಾನಗಳ ಮಾಡಿಸುತ್ತದೆ
ಗಂಡು ಹೆಣ್ಣು ಕೂಡಿಸಲು
ಓಡಿ ಹೋದ ದಿಕ್ಕು
ಮುಹೂರ್ತಗಳ ಗುರುತಿಸುತ್ತದೆ

ಕೆಲಸ ಮಾಡಲು ಕೆಲಸಕ್ಕೆ ಸೇರಲು
ಕೆಲಸ ಶುರು ಮಾಡಲು
ಎಲ್ಲ ಸಮಯಗಳಲ್ಲಿ
ಭೂತ ಆಳುತ್ತದೆ

ಹಲ್ಲಿಗಳ ಬೀಳಿಸುತ್ತದೆ
ಬೆಕ್ಕುಗಳ ಅಡ್ಡ ಬರಿಸುತ್ತದೆ
ಬಿಕ್ಕಳಿಕೆ ಆಕಳಿಕೆಗಳಲ್ಲೂ
ಧ್ವನಿ ಮಾಡುತ್ತದೆ

ಸೀನುಗಳ ಸಂಖ್ಯೆಗಳಿಗೆ ಅರ್ಥ ಕೊಡುತ್ತದೆ
ಕಣ್ಣು ಅದುರಿದರೂ ಬೆದರುತ್ತದೆ ಜೀವ
ಗುಡಿಗಳ ಕಟ್ಟಿಸುತ್ತದೆ ಮೂರ್ತಿಗಳ ಸ್ಥಾಪಿಸುತ್ತದೆ
ಮಂತ್ರ ತಂತ್ರ ಪುರಾಣಗಳ ಕಟ್ಟುತ್ತದೆ
ಷೋಡಶೋಪಚಾರಗಳ ನೇಮಿಸುತ್ತದೆ
ಮೌಢ್ಯದ ಬಂಡವಾಳ ವ್ಯಾಪಾರದ ಸರಕು

ಭಕ್ತರ ಸಾಲು ಸಾಲು
ಅಡ್ಡ ಬೀಳುತ್ತವೆ ತಲೆ ಬೋಳಿಸಿಕೊಳ್ಳುತ್ತವೆ
ದಿಂಡುರುಳಿ ದೇಹ ದಂಡಿಸುತ್ತವೆ
ಕಾಣದ ಕೈವಾಡಕ್ಕೆ ಶರಣಾಗುತ್ತವೆ

ಕಾವಿ ಗಡ್ಡ ನಾಮ ವರದ ಹಸ್ತಗಳ ಮುಂದೆ
ಸಾವಿರ ಸಾವಿರ ಸನ್ನಿಬಡಕ ತಲೆಗಳು
ಬಾಗಿ ನೆಲ ಮುಟ್ಟುತವೆ

ಅವರ ನೋಡಿ ಇವರು ಮತ್ತಿವರ ನೋಡಿ ಅವರು
ಎಲ್ಲರೂ ನೆಲಕಪ್ಪಚ್ಚಿ ಬಕ್ಕ ಬಾರಲು
ಬುದ್ದಿ ಜೀವಿಗಳು ಕೂಡಾ ಅರಲು ಬರಲು

ವರ್ತಮಾನದ ದೀಪ ಭವಿಷ್ಯದ ತಾಪ
ತಣ್ಣಗಾಗಿ ಭೂತದ ಪೆಡಂಭೂತ ತೆಕ್ಕೆಯೊಳಗೆ
ನಲುಗುತ್ತದೆ ಮುಲುಮುಲುಗಿ

*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...