ಭೂತ

ಕಾಡುತಿದೆ ಭೂತ
ಅನೇಕ ರೂಪಗಳಲ್ಲಿ
ಅನೇಕ ಪರಿಗಳಲ್ಲಿ

ಮನೆ ಬಾಗಿಲು ಕಿಟಕಿಗಳ
ಕೊನೆಗೆ ಕೋಣೆ, ಮೆಟ್ಟಲುಗಳ
ದಿಕ್ಕ ದೆಸೆಗಳ ನಿರ್ಧರಿಸುತ್ತದೆ

ಸಾಯುವ ಹುಟ್ಟುವ
ಕ್ಷಣ ಗಣನೆಗಳ ಗುಣುಗುಣಿಸಿ
ಪೂಜೆ ಬಲಿದಾನಗಳ ಮಾಡಿಸುತ್ತದೆ
ಗಂಡು ಹೆಣ್ಣು ಕೂಡಿಸಲು
ಓಡಿ ಹೋದ ದಿಕ್ಕು
ಮುಹೂರ್ತಗಳ ಗುರುತಿಸುತ್ತದೆ

ಕೆಲಸ ಮಾಡಲು ಕೆಲಸಕ್ಕೆ ಸೇರಲು
ಕೆಲಸ ಶುರು ಮಾಡಲು
ಎಲ್ಲ ಸಮಯಗಳಲ್ಲಿ
ಭೂತ ಆಳುತ್ತದೆ

ಹಲ್ಲಿಗಳ ಬೀಳಿಸುತ್ತದೆ
ಬೆಕ್ಕುಗಳ ಅಡ್ಡ ಬರಿಸುತ್ತದೆ
ಬಿಕ್ಕಳಿಕೆ ಆಕಳಿಕೆಗಳಲ್ಲೂ
ಧ್ವನಿ ಮಾಡುತ್ತದೆ

ಸೀನುಗಳ ಸಂಖ್ಯೆಗಳಿಗೆ ಅರ್ಥ ಕೊಡುತ್ತದೆ
ಕಣ್ಣು ಅದುರಿದರೂ ಬೆದರುತ್ತದೆ ಜೀವ
ಗುಡಿಗಳ ಕಟ್ಟಿಸುತ್ತದೆ ಮೂರ್ತಿಗಳ ಸ್ಥಾಪಿಸುತ್ತದೆ
ಮಂತ್ರ ತಂತ್ರ ಪುರಾಣಗಳ ಕಟ್ಟುತ್ತದೆ
ಷೋಡಶೋಪಚಾರಗಳ ನೇಮಿಸುತ್ತದೆ
ಮೌಢ್ಯದ ಬಂಡವಾಳ ವ್ಯಾಪಾರದ ಸರಕು

ಭಕ್ತರ ಸಾಲು ಸಾಲು
ಅಡ್ಡ ಬೀಳುತ್ತವೆ ತಲೆ ಬೋಳಿಸಿಕೊಳ್ಳುತ್ತವೆ
ದಿಂಡುರುಳಿ ದೇಹ ದಂಡಿಸುತ್ತವೆ
ಕಾಣದ ಕೈವಾಡಕ್ಕೆ ಶರಣಾಗುತ್ತವೆ

ಕಾವಿ ಗಡ್ಡ ನಾಮ ವರದ ಹಸ್ತಗಳ ಮುಂದೆ
ಸಾವಿರ ಸಾವಿರ ಸನ್ನಿಬಡಕ ತಲೆಗಳು
ಬಾಗಿ ನೆಲ ಮುಟ್ಟುತವೆ

ಅವರ ನೋಡಿ ಇವರು ಮತ್ತಿವರ ನೋಡಿ ಅವರು
ಎಲ್ಲರೂ ನೆಲಕಪ್ಪಚ್ಚಿ ಬಕ್ಕ ಬಾರಲು
ಬುದ್ದಿ ಜೀವಿಗಳು ಕೂಡಾ ಅರಲು ಬರಲು

ವರ್ತಮಾನದ ದೀಪ ಭವಿಷ್ಯದ ತಾಪ
ತಣ್ಣಗಾಗಿ ಭೂತದ ಪೆಡಂಭೂತ ತೆಕ್ಕೆಯೊಳಗೆ
ನಲುಗುತ್ತದೆ ಮುಲುಮುಲುಗಿ

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮೆರಿಕಾ
Next post ವಿ-ನಿಯೋಗ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

cheap jordans|wholesale air max|wholesale jordans|wholesale jewelry|wholesale jerseys