ಡೊಳ್ಳನ ಪದ

ಗುರುವೇ ನಮ್ಮಾಯ ದೇವಾರ್ ಬಂದಾವ ಬನ್ನಿರೂ
ಹರನೇ ನಮ್ಮಾಯ್ ದೇವರಿಗೆ ಶರಣೆನ್ನಿರೋ
ಸ್ವಾಮಿ ನಮ್ಮಾಯ್ ದೇವಾರ್ ಬಂದಾವ ಬನ್ನಿರೋ ||ಪ||

ದೇವರು ಊರಿಗೆ ಬಂದಾವೇ ಅಕ್ಷರ ವರವಾ ತಂದಾವೆ
ಸಾವಿರದಂಥ ನೋವಿರದಂಥ ವಿದ್ಯೆಯ ಅಮೃತ ತಂದಾವೆ ||೧||

ವಿದ್ಯೆಯ ಕಲಿಯಿರಿ ಬುದ್ದಿಯ ಬೆಳೆಸಿರಿ ಅದುವೇ ಸಂಪತ್ತು ಅಂದಾವೆ
ನಿಮ್ಮ ಉದ್ದಾರ ನಿಮ್ಮ್ಮ ಕೈಯಾಗೆ ಎನ್ನುತ ಕತ್ತಲೆ ಕೊಂದಾವೆ ||೨||

ಹೆಬ್ಬಟ್ಟು ಗುರುತು ನರನಿಗೆ ಶಾಪಾ
ಶಾಪವ ಬಿಡಿಸಾಕೆ ಬಂದಾವೆ
ದೇವರ ಲೋಕದ ಒಳಗಡೆ ಪರವೇಶ
ಅಂಥಾವ್ರಿಗಿಲ್ಲಂತ ಸಾರ್ಯಾವೆ ||೩||

ಇಲ್ಲಿಯವರೆಗೆಲ್ಲ ಓದಿದ್ದ ತಲೆಗಳು
ನಮ್ಮನ್ನ ಕಾಲಾಗೆ ತುಳಿದಾವೆ
ಕೆಳಗೆ ಬಿದ್ದವರೆಲ್ಲ ಮ್ಯಾಲೆದ್ದು ನಿಲ್ಲಾಕ
ಆಸರೆ ಒಂದಾ ತಂದಾವೆ ||೪||

ಮಕ್ಕಳು ಭಾಳಾ ದೇಶಕೆ ಭಾರಾ
ಭಾರತ ಮಾತೆಯ ಕೊಂದಾವೆ
ಒಂದೊಂದು ಮನಿಯಾಗೆ ಇಬ್ಬರು ಮಕ್ಕಳು
ಸಾಕೇ ಸಾಕು ಅಂದಾವೆ ||೫||

ಆರೋಗ್ಯ ಜೀವನ ಸ್ವಚ್ಛತೆ ಜೀವನ
ಅದುವೇ ಸ್ವರ್ಗಾ ಅಂದಾವೆ
ಕಾಯಿಲೆಗಳಿಗೆಲ್ಲ ದೇವರ ಗುರಿ ಮಾಡಿ
ಮೂಢರಾಗಬೇಡಿ ಅಂದಾವೆ ||೬||

ಹೆಣ್ಣು ಗಂಡೂ ಒಲವಿನ ಬಾಳಿಗೆ
ಸರಳ ವಿವಾಹವೆ ಸರಿ ನೋಡ್ರಿ
ಅದ್ದೂರಿ ಗದ್ದಲ ವೈಭವದ ಮದುವೆಯ
ಮಾಡುತ ಸಾಲದಿ ಕೊಳಿಬ್ಯಾಡ್ರಿ ||೭||

ಗಂಡೂ ಹೆಣ್ಣೂ ಎರಡೂ ಕಣ್ಣು
ದೇವರ ಲೀಲ್ಯಾಗ ಅಂದಾವೆ
ಹೆಣ್ಣನು ತುಳಿಯುತ ಬದುಕುವ ಗಂಡು
ಗಂಡಲ್ಲ ಭಂಡಾ ಅಂದಾವೆ ||೮||

ಪುರಾಣ ಕತೆಗಳ ಕತೆಯಂತೆ ನೋಡಿರಿ
ನೂರಕ್ಕೆ ನೂರು ನಿಜವಲ್ಲ
ಧರ್ಮದ ಮರ್ಮವ ಸರಿಯಾಗಿ ತಿಳಿಯಿರಿ
ಧರ್ರ್ಮಾಂಧತೆಯಿಂದ ಉಳಿವಿಲ್ಲ ||೯||

ಮಾನವರೆಲ್ಲ ಒಂದೇ ಎನ್ನಿರಿ
ಭೇದವ ಮಾಡೋದು ಮಹಾಪಾಪ
ಮೇಲು ಕೀಳೆನ್ನುತ ಮೆರೆಯುವ ಮೂರ್ಖರಿಗೆ
ದೇವರು ಕೊಡತಾವ ಹಿಡಿಶಾಪ ||೧೦||

ಎಲ್ಲರು ಕೂಡುತ ದುಡಿಯುತ ಹಾಡುತ
ಬಾಳಿರಿ ಎನ್ನುತ ಹರಸ್ಯಾವೆ
ಎಲ್ಲರಿಗಾಗಿಯೆ ಎಲ್ಲರು ಇದುವೇ
ಮಾನವ ಧರ್ಮೆಂದು ಸಾರ್ಯಾವೆ ||೧೧||

******

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏಷ್ಯಾ
Next post ಮನೆ ವಿಮೆ : ಏನು? ಹೇಗೆ?

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…