Home / ಕವನ / ಕವಿತೆ / ಡೊಳ್ಳನ ಪದ

ಡೊಳ್ಳನ ಪದ

ಗುರುವೇ ನಮ್ಮಾಯ ದೇವಾರ್ ಬಂದಾವ ಬನ್ನಿರೂ
ಹರನೇ ನಮ್ಮಾಯ್ ದೇವರಿಗೆ ಶರಣೆನ್ನಿರೋ
ಸ್ವಾಮಿ ನಮ್ಮಾಯ್ ದೇವಾರ್ ಬಂದಾವ ಬನ್ನಿರೋ ||ಪ||

ದೇವರು ಊರಿಗೆ ಬಂದಾವೇ ಅಕ್ಷರ ವರವಾ ತಂದಾವೆ
ಸಾವಿರದಂಥ ನೋವಿರದಂಥ ವಿದ್ಯೆಯ ಅಮೃತ ತಂದಾವೆ ||೧||

ವಿದ್ಯೆಯ ಕಲಿಯಿರಿ ಬುದ್ದಿಯ ಬೆಳೆಸಿರಿ ಅದುವೇ ಸಂಪತ್ತು ಅಂದಾವೆ
ನಿಮ್ಮ ಉದ್ದಾರ ನಿಮ್ಮ್ಮ ಕೈಯಾಗೆ ಎನ್ನುತ ಕತ್ತಲೆ ಕೊಂದಾವೆ ||೨||

ಹೆಬ್ಬಟ್ಟು ಗುರುತು ನರನಿಗೆ ಶಾಪಾ
ಶಾಪವ ಬಿಡಿಸಾಕೆ ಬಂದಾವೆ
ದೇವರ ಲೋಕದ ಒಳಗಡೆ ಪರವೇಶ
ಅಂಥಾವ್ರಿಗಿಲ್ಲಂತ ಸಾರ್ಯಾವೆ ||೩||

ಇಲ್ಲಿಯವರೆಗೆಲ್ಲ ಓದಿದ್ದ ತಲೆಗಳು
ನಮ್ಮನ್ನ ಕಾಲಾಗೆ ತುಳಿದಾವೆ
ಕೆಳಗೆ ಬಿದ್ದವರೆಲ್ಲ ಮ್ಯಾಲೆದ್ದು ನಿಲ್ಲಾಕ
ಆಸರೆ ಒಂದಾ ತಂದಾವೆ ||೪||

ಮಕ್ಕಳು ಭಾಳಾ ದೇಶಕೆ ಭಾರಾ
ಭಾರತ ಮಾತೆಯ ಕೊಂದಾವೆ
ಒಂದೊಂದು ಮನಿಯಾಗೆ ಇಬ್ಬರು ಮಕ್ಕಳು
ಸಾಕೇ ಸಾಕು ಅಂದಾವೆ ||೫||

ಆರೋಗ್ಯ ಜೀವನ ಸ್ವಚ್ಛತೆ ಜೀವನ
ಅದುವೇ ಸ್ವರ್ಗಾ ಅಂದಾವೆ
ಕಾಯಿಲೆಗಳಿಗೆಲ್ಲ ದೇವರ ಗುರಿ ಮಾಡಿ
ಮೂಢರಾಗಬೇಡಿ ಅಂದಾವೆ ||೬||

ಹೆಣ್ಣು ಗಂಡೂ ಒಲವಿನ ಬಾಳಿಗೆ
ಸರಳ ವಿವಾಹವೆ ಸರಿ ನೋಡ್ರಿ
ಅದ್ದೂರಿ ಗದ್ದಲ ವೈಭವದ ಮದುವೆಯ
ಮಾಡುತ ಸಾಲದಿ ಕೊಳಿಬ್ಯಾಡ್ರಿ ||೭||

ಗಂಡೂ ಹೆಣ್ಣೂ ಎರಡೂ ಕಣ್ಣು
ದೇವರ ಲೀಲ್ಯಾಗ ಅಂದಾವೆ
ಹೆಣ್ಣನು ತುಳಿಯುತ ಬದುಕುವ ಗಂಡು
ಗಂಡಲ್ಲ ಭಂಡಾ ಅಂದಾವೆ ||೮||

ಪುರಾಣ ಕತೆಗಳ ಕತೆಯಂತೆ ನೋಡಿರಿ
ನೂರಕ್ಕೆ ನೂರು ನಿಜವಲ್ಲ
ಧರ್ಮದ ಮರ್ಮವ ಸರಿಯಾಗಿ ತಿಳಿಯಿರಿ
ಧರ್ರ್ಮಾಂಧತೆಯಿಂದ ಉಳಿವಿಲ್ಲ ||೯||

ಮಾನವರೆಲ್ಲ ಒಂದೇ ಎನ್ನಿರಿ
ಭೇದವ ಮಾಡೋದು ಮಹಾಪಾಪ
ಮೇಲು ಕೀಳೆನ್ನುತ ಮೆರೆಯುವ ಮೂರ್ಖರಿಗೆ
ದೇವರು ಕೊಡತಾವ ಹಿಡಿಶಾಪ ||೧೦||

ಎಲ್ಲರು ಕೂಡುತ ದುಡಿಯುತ ಹಾಡುತ
ಬಾಳಿರಿ ಎನ್ನುತ ಹರಸ್ಯಾವೆ
ಎಲ್ಲರಿಗಾಗಿಯೆ ಎಲ್ಲರು ಇದುವೇ
ಮಾನವ ಧರ್ಮೆಂದು ಸಾರ್ಯಾವೆ ||೧೧||

******

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...