ನ್ಯಾಯ ಬೇಡುತಾವೆ

ನ್ಯಾಯ ಬೇಡುತಾವೆ ಬಂದು ನ್ಯಾಯ ಬೇಡುತಾವೆ
ನಾಮುಂದು ನೀಮುಂದು ಒಂದು ಬಿಟ್ಟಿನ್ನೊಂದು
ಎಂದು ಮುಂದುಗಡೆ ಬಂದು ನಿಂದು ತಾವ್                     ||ಪ||

ಒಳಗೆ ಕೊಳೆಯುತಾವೆ ಇಲ್ಲೇ ಕೆಳಗೆ ನರಳುತಾವೆ
ಹೊರಗೆ ಮೇಲೆ ಬಂದೆರಗಲೆಂದು ಕಳವಳದಿ ಕೂಗುತಾವೆ
ನನ್ನ ಪಾಡು ನೀ ಹಾಡು ನೋಡು ಎಂದೆನುತ ತುಡಿಯುತಾವೆ ||೧||

ಹಕ್ಕಿಯಾಗಿದೀವಿ ಪಂಜರದೊಳಗೆ ಸಿಕ್ಕಿದೀವಿ
ರೆಕ್ಕೆಗೆದರಿ ಆಕಾಶದಾಗೆ ನಾವ್
ನಕ್ಕು ಹಾರುತೀವಿ ಬಿಡು ಬಿಡು ನಕ್ಕು ಹಾರುತೀವಿ              ||೨||

ಚಿಕ್ಕಿಯಾಗಿದೀವಿ ಹಗಲಲಿ ಬಿಕ್ಕೆ ಬೇಡುತೀವಿ
ಸೊಕ್ಕಿ ಉರಿವ ಆ ಸೂರ್ಯಗಿಂತ ಬಲು
ಹಕ್ಕು ದೊಡ್ಡದೈತೆ ನಮ್ಮದು ಹಕ್ಕು ದೊಡ್ಡದೈತೆ                ||೩||

ಪ್ರಾಣಿ ಅಂತಿಯಲ್ಲೋ ನರ ನಿನ್ನ ತ್ರಾಣವೇನು ಹೆಚ್ಚೋ
ಜಾಣನಾಗಿ ಏಣಿಯಲಿ ಮ್ಯಾಲೆ ನೀ
ಕೋಣನಾಗಿ ಕುಂತಿ ಶಾಂತಿಯ ಕಾಣದಂತೆ ಸೋತಿ          ||೪||

ಮಣ್ಣು ಕಲ್ಲು ಎಂದು ತುಳಿಯುವಿ ಕಣ್ಣು ಮ್ಯಾಲೆ ಬಂದು
ಮಣ್ಣ ಜೊತೆಗೆ ಆ ಗಾಳಿ ನೀರುಗಳ
ಬಣ್ಣ ಸೇರಿದಾಗ ಮೆರೆಯುವಿ ಮಣ್ಣು ಸೇರೊವರೆಗೆ            ||೫||

ಹೆಣ್ಣು ಸಣ್ಣದೆಂದಿ ಗಂಡಿನ ಉನ್ನತಿಯನೆ ನಡೆಸಿ
ತಣ್ಣ ಸಾಗರದ ಸಣ್ಣ ಕೆಂಡ ಪುಂಡಾಟ ನಡೆಸಿದಂತೆ
ಕರಗುವಿ ಹೆಣ್ಣ ಕಣ್ಣಿನೊಳಗೆ                                     ||೬||

ಬಟ್ಟೆ ಭ್ರಮೆಯ ನೆಚ್ಚಿ ರೊಕ್ಕದ ಹೊಟ್ಟುರವುದೆ ಮುಚ್ಚಿ
ಹೊಟ್ಟೆ ರಟ್ಟೆಗಳ ಕಾಲ ಕೆಳಗೆ ತುಳಿದಿಟ್ಟು ಮೆರೆವ ಮಳ್ಳ ನೀನು
ಸುಟ್ಟು ಹೋಗುತೀಯ ಎಚ್ಚರ ಸುಟ್ಟು ಹೋಗುತೀಯ         ||೭||

ಕಂಡುದನ್ನೆ ನಿಜವು ಅಂತಾ ಉಂಡು ತಿಂದು ಕೊಬ್ಬಿ
ಭಂಡತನದಿ ಉದ್ದಂಡನಾಗಿ ಕಂಡಿರದ ಸತ್ಯ ಬಿಟ್ಟಿ ಬರಿಯ
ತುಂಡು ಬಟ್ಟೆ ಆದೀ ಬರಿಯ ತುಂಡು ಬಟ್ಟೆ ಆದಿ               ||೮||

******************************
೧೯೮೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೌದಿ ಪೇಟೆಗಳು
Next post ಐಸ್ ಕ್ರೀಂ ತಂಪಿನ ಬಿಸಿ

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…