ನ್ಯಾಯ ಬೇಡುತಾವೆ

ನ್ಯಾಯ ಬೇಡುತಾವೆ ಬಂದು ನ್ಯಾಯ ಬೇಡುತಾವೆ
ನಾಮುಂದು ನೀಮುಂದು ಒಂದು ಬಿಟ್ಟಿನ್ನೊಂದು
ಎಂದು ಮುಂದುಗಡೆ ಬಂದು ನಿಂದು ತಾವ್                     ||ಪ||

ಒಳಗೆ ಕೊಳೆಯುತಾವೆ ಇಲ್ಲೇ ಕೆಳಗೆ ನರಳುತಾವೆ
ಹೊರಗೆ ಮೇಲೆ ಬಂದೆರಗಲೆಂದು ಕಳವಳದಿ ಕೂಗುತಾವೆ
ನನ್ನ ಪಾಡು ನೀ ಹಾಡು ನೋಡು ಎಂದೆನುತ ತುಡಿಯುತಾವೆ ||೧||

ಹಕ್ಕಿಯಾಗಿದೀವಿ ಪಂಜರದೊಳಗೆ ಸಿಕ್ಕಿದೀವಿ
ರೆಕ್ಕೆಗೆದರಿ ಆಕಾಶದಾಗೆ ನಾವ್
ನಕ್ಕು ಹಾರುತೀವಿ ಬಿಡು ಬಿಡು ನಕ್ಕು ಹಾರುತೀವಿ              ||೨||

ಚಿಕ್ಕಿಯಾಗಿದೀವಿ ಹಗಲಲಿ ಬಿಕ್ಕೆ ಬೇಡುತೀವಿ
ಸೊಕ್ಕಿ ಉರಿವ ಆ ಸೂರ್ಯಗಿಂತ ಬಲು
ಹಕ್ಕು ದೊಡ್ಡದೈತೆ ನಮ್ಮದು ಹಕ್ಕು ದೊಡ್ಡದೈತೆ                ||೩||

ಪ್ರಾಣಿ ಅಂತಿಯಲ್ಲೋ ನರ ನಿನ್ನ ತ್ರಾಣವೇನು ಹೆಚ್ಚೋ
ಜಾಣನಾಗಿ ಏಣಿಯಲಿ ಮ್ಯಾಲೆ ನೀ
ಕೋಣನಾಗಿ ಕುಂತಿ ಶಾಂತಿಯ ಕಾಣದಂತೆ ಸೋತಿ          ||೪||

ಮಣ್ಣು ಕಲ್ಲು ಎಂದು ತುಳಿಯುವಿ ಕಣ್ಣು ಮ್ಯಾಲೆ ಬಂದು
ಮಣ್ಣ ಜೊತೆಗೆ ಆ ಗಾಳಿ ನೀರುಗಳ
ಬಣ್ಣ ಸೇರಿದಾಗ ಮೆರೆಯುವಿ ಮಣ್ಣು ಸೇರೊವರೆಗೆ            ||೫||

ಹೆಣ್ಣು ಸಣ್ಣದೆಂದಿ ಗಂಡಿನ ಉನ್ನತಿಯನೆ ನಡೆಸಿ
ತಣ್ಣ ಸಾಗರದ ಸಣ್ಣ ಕೆಂಡ ಪುಂಡಾಟ ನಡೆಸಿದಂತೆ
ಕರಗುವಿ ಹೆಣ್ಣ ಕಣ್ಣಿನೊಳಗೆ                                     ||೬||

ಬಟ್ಟೆ ಭ್ರಮೆಯ ನೆಚ್ಚಿ ರೊಕ್ಕದ ಹೊಟ್ಟುರವುದೆ ಮುಚ್ಚಿ
ಹೊಟ್ಟೆ ರಟ್ಟೆಗಳ ಕಾಲ ಕೆಳಗೆ ತುಳಿದಿಟ್ಟು ಮೆರೆವ ಮಳ್ಳ ನೀನು
ಸುಟ್ಟು ಹೋಗುತೀಯ ಎಚ್ಚರ ಸುಟ್ಟು ಹೋಗುತೀಯ         ||೭||

ಕಂಡುದನ್ನೆ ನಿಜವು ಅಂತಾ ಉಂಡು ತಿಂದು ಕೊಬ್ಬಿ
ಭಂಡತನದಿ ಉದ್ದಂಡನಾಗಿ ಕಂಡಿರದ ಸತ್ಯ ಬಿಟ್ಟಿ ಬರಿಯ
ತುಂಡು ಬಟ್ಟೆ ಆದೀ ಬರಿಯ ತುಂಡು ಬಟ್ಟೆ ಆದಿ               ||೮||

******************************
೧೯೮೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೌದಿ ಪೇಟೆಗಳು
Next post ಐಸ್ ಕ್ರೀಂ ತಂಪಿನ ಬಿಸಿ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…