Home / ಕವನ / ಕವಿತೆ / ತಾಯಂದಿರಿಗೆ

ತಾಯಂದಿರಿಗೆ

ತಾಯಂದಿರೇ
ಹುಟ್ಟುತ್ತಲೇ ಯಾರೂ
ಕರ್ಣಕುಂಡಲ ಜಟೆ ಗಡ್ಡ ಮೀಸೆಗಳ
ಪಡೆದುಕೊಂಡೇ ಬರುವುದಿಲ್ಲ
ಹುಟ್ಟುತ್ತಲೇ ವೇದಾದಿಗಳು
ಯಾರ ನಾಲಿಗೆಯ ಮೇಲೂ ನರ್ತಿಸುವುದಿಲ್ಲ
ಹುಟ್ಟಿ ಬಂದ ಕುಲ
ಕುಂದು ದೋಷ ವೃತ್ತಿಗಳೆಲ್ಲ
ಶಿಲಾ ಶಾಸನವೇನಲ್ಲ
ಇದನ್ನು ಬರೆದಿಟ್ಟುಕೊಳ್ಳಿ

ಇಂಥ ಕರಿ ಮೋಡಗಳು ನಿಮ್ಮ ಸೂರ್ಯರಿಗೆ
ಬಾಲಾರಿಷ್ಟರಾಗಿ ಬಡಿದುಕೊಂಡಿರಬಹುದು
ಇದರಿಂದ ನಿಮ್ಮ ಕರುಳಕಿಡಿಗಳು
ಇದ್ದಿಲ ಚೂರುಗಳಂತೆ ಭಾಸವಾಗಬಹುದು
ಆದರೆ ತಾಯಂದಿರೆ
ಆ ಬಾಲಾರಿಷ್ಟ ಗ್ರಹ ಬಾಧೆಗಳ
ನಿಮ್ಮ ಚೈತನ್ಯ ಬೆಂಕಿಯಿಂದ ಸುಡಿರಿ
ಭವಿಷ್ಯದ ಆಶಾ ಮಾರುತನಿಂದ ಝಾಡಿಸಿರಿ
ನಿಮ್ಮ ಇದ್ದಿಲ ಚೂರನ್ನೇ ಗಟ್ಟಿ ಮಾಡಿ ಮಾಡಿ
ಸಾಣೆ ಹಿಡಿದು ವಜ್ರ ಮಾಡುವ
ಸಾಣೆಯಂತ್ರ ನಿಮ್ಮ ಕೈಯಲ್ಲೇ ಇದೆ
ನಿಮ್ಮ ಸೊಂಟಕ್ಕಂಟಿದ ಉಪಗ್ರಹಗಳಿಗೆ
ಕಾವು ಕಸುವು ತುಂಬಿ ತುಂಬಿ
ಸ್ವಯಂ ತೇಜೋಮೂರ್ತಿ ಮಾಡುವ
ಮಾಯಾ ದಂಡವೂ ನಿಮ್ಮ ಕೈಯಲ್ಲೇ ಇದೆ
ಇದನ್ನು ನಂಬಿ|
ನಿಮ್ಮ ಮನೆಗೋಡೆಯ ಮೇಲೆ
ಬರೆದಿಟ್ಟು ಬಣ್ಣ ತುಂಬಿ
ಗ್ರಹವು ಸೂರ್ಯನಾಗುವುದನ್ನು
ಹುಳುವು ಸಿಂಹವಾಗುವುದನ್ನು
ಈ ದೇಶ ಕಳ್ಳಕತ್ತಲೆ ಎಂದೂ ಸಹಿಸದು
ಎಲ್ಲ ಕಡೆ ಬೆಳಕಾದರೆ ಬಾವಲಿ ಹೆಗ್ಗಣ
ದರೋಡೆಖೋರ ನಿಶಾಚರರಿಗೆ ಅನುಕೂಲವಾಗದು

ಎಲ್ಲಾದರೂಂದೊಂದು ಕಿಡಿ ಹೊತ್ತಿಕೊಂಡರೆ
ಅಗ್ನಿ ಸತ್ಯ ಮೂಡಿದರೆ
ಕರಿನೆರಳ ಬುಟ್ಟಿ ಬೋರಲು ಹಾಕಿ ಬಿಡುವುದು
ಇಲ್ಲಿಯ ಚರಿತ್ರಾಹೀನ ಚರಿತ್ರೆ

ಸೂರ್ಯನ ಸೃಷ್ಟಿಸುವ
ಸಾಣೆಯಂತ್ರವನ್ನು ಕಸಿದುಕೊಂಡು,
ನಿಮಗೆ ಕೇವಲ ಸೌಟು ಕೊಟ್ಟಿರುವುದು
ಇಂಥ ಚರಿತ್ರಯೇ

ಆದ್ದರಿಂದ ತಾಯಂದಿರೇ
ನಿಮ್ಮ ಕರುಳ ಕುಡಿಗಳಲ್ಲಿ
ಕಿಡಿ ಹೊತ್ತಿಸಿ ಅಗ್ನಿ ಪುಂಜಗಳಾಗಿ ಮಾಡಿ
ಕತ್ತಲೆಯೋಡಿಸುವ ಕಜ್ಜದಲ್ಲಿ ಕೈಗೂಡಿ

೧೨-೬-೮೬
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...