ತಾಯಂದಿರಿಗೆ

ತಾಯಂದಿರೇ
ಹುಟ್ಟುತ್ತಲೇ ಯಾರೂ
ಕರ್ಣಕುಂಡಲ ಜಟೆ ಗಡ್ಡ ಮೀಸೆಗಳ
ಪಡೆದುಕೊಂಡೇ ಬರುವುದಿಲ್ಲ
ಹುಟ್ಟುತ್ತಲೇ ವೇದಾದಿಗಳು
ಯಾರ ನಾಲಿಗೆಯ ಮೇಲೂ ನರ್ತಿಸುವುದಿಲ್ಲ
ಹುಟ್ಟಿ ಬಂದ ಕುಲ
ಕುಂದು ದೋಷ ವೃತ್ತಿಗಳೆಲ್ಲ
ಶಿಲಾ ಶಾಸನವೇನಲ್ಲ
ಇದನ್ನು ಬರೆದಿಟ್ಟುಕೊಳ್ಳಿ

ಇಂಥ ಕರಿ ಮೋಡಗಳು ನಿಮ್ಮ ಸೂರ್ಯರಿಗೆ
ಬಾಲಾರಿಷ್ಟರಾಗಿ ಬಡಿದುಕೊಂಡಿರಬಹುದು
ಇದರಿಂದ ನಿಮ್ಮ ಕರುಳಕಿಡಿಗಳು
ಇದ್ದಿಲ ಚೂರುಗಳಂತೆ ಭಾಸವಾಗಬಹುದು
ಆದರೆ ತಾಯಂದಿರೆ
ಆ ಬಾಲಾರಿಷ್ಟ ಗ್ರಹ ಬಾಧೆಗಳ
ನಿಮ್ಮ ಚೈತನ್ಯ ಬೆಂಕಿಯಿಂದ ಸುಡಿರಿ
ಭವಿಷ್ಯದ ಆಶಾ ಮಾರುತನಿಂದ ಝಾಡಿಸಿರಿ
ನಿಮ್ಮ ಇದ್ದಿಲ ಚೂರನ್ನೇ ಗಟ್ಟಿ ಮಾಡಿ ಮಾಡಿ
ಸಾಣೆ ಹಿಡಿದು ವಜ್ರ ಮಾಡುವ
ಸಾಣೆಯಂತ್ರ ನಿಮ್ಮ ಕೈಯಲ್ಲೇ ಇದೆ
ನಿಮ್ಮ ಸೊಂಟಕ್ಕಂಟಿದ ಉಪಗ್ರಹಗಳಿಗೆ
ಕಾವು ಕಸುವು ತುಂಬಿ ತುಂಬಿ
ಸ್ವಯಂ ತೇಜೋಮೂರ್ತಿ ಮಾಡುವ
ಮಾಯಾ ದಂಡವೂ ನಿಮ್ಮ ಕೈಯಲ್ಲೇ ಇದೆ
ಇದನ್ನು ನಂಬಿ|
ನಿಮ್ಮ ಮನೆಗೋಡೆಯ ಮೇಲೆ
ಬರೆದಿಟ್ಟು ಬಣ್ಣ ತುಂಬಿ
ಗ್ರಹವು ಸೂರ್ಯನಾಗುವುದನ್ನು
ಹುಳುವು ಸಿಂಹವಾಗುವುದನ್ನು
ಈ ದೇಶ ಕಳ್ಳಕತ್ತಲೆ ಎಂದೂ ಸಹಿಸದು
ಎಲ್ಲ ಕಡೆ ಬೆಳಕಾದರೆ ಬಾವಲಿ ಹೆಗ್ಗಣ
ದರೋಡೆಖೋರ ನಿಶಾಚರರಿಗೆ ಅನುಕೂಲವಾಗದು

ಎಲ್ಲಾದರೂಂದೊಂದು ಕಿಡಿ ಹೊತ್ತಿಕೊಂಡರೆ
ಅಗ್ನಿ ಸತ್ಯ ಮೂಡಿದರೆ
ಕರಿನೆರಳ ಬುಟ್ಟಿ ಬೋರಲು ಹಾಕಿ ಬಿಡುವುದು
ಇಲ್ಲಿಯ ಚರಿತ್ರಾಹೀನ ಚರಿತ್ರೆ

ಸೂರ್ಯನ ಸೃಷ್ಟಿಸುವ
ಸಾಣೆಯಂತ್ರವನ್ನು ಕಸಿದುಕೊಂಡು,
ನಿಮಗೆ ಕೇವಲ ಸೌಟು ಕೊಟ್ಟಿರುವುದು
ಇಂಥ ಚರಿತ್ರಯೇ

ಆದ್ದರಿಂದ ತಾಯಂದಿರೇ
ನಿಮ್ಮ ಕರುಳ ಕುಡಿಗಳಲ್ಲಿ
ಕಿಡಿ ಹೊತ್ತಿಸಿ ಅಗ್ನಿ ಪುಂಜಗಳಾಗಿ ಮಾಡಿ
ಕತ್ತಲೆಯೋಡಿಸುವ ಕಜ್ಜದಲ್ಲಿ ಕೈಗೂಡಿ

೧೨-೬-೮೬
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೆಡ್ಡಾ ಹಾಗೂ ನಮ್ಮ ಕಿರು ಪ್ರಪಂಚ
Next post ಇಂಜೆಕ್ಷನ್ ನೀರಿನಲ್ಲಿ ಸೋಂಕು

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

cheap jordans|wholesale air max|wholesale jordans|wholesale jewelry|wholesale jerseys