Home / ಕವನ / ಕವಿತೆ / ತಾಯಂದಿರಿಗೆ

ತಾಯಂದಿರಿಗೆ

ತಾಯಂದಿರೇ
ಹುಟ್ಟುತ್ತಲೇ ಯಾರೂ
ಕರ್ಣಕುಂಡಲ ಜಟೆ ಗಡ್ಡ ಮೀಸೆಗಳ
ಪಡೆದುಕೊಂಡೇ ಬರುವುದಿಲ್ಲ
ಹುಟ್ಟುತ್ತಲೇ ವೇದಾದಿಗಳು
ಯಾರ ನಾಲಿಗೆಯ ಮೇಲೂ ನರ್ತಿಸುವುದಿಲ್ಲ
ಹುಟ್ಟಿ ಬಂದ ಕುಲ
ಕುಂದು ದೋಷ ವೃತ್ತಿಗಳೆಲ್ಲ
ಶಿಲಾ ಶಾಸನವೇನಲ್ಲ
ಇದನ್ನು ಬರೆದಿಟ್ಟುಕೊಳ್ಳಿ

ಇಂಥ ಕರಿ ಮೋಡಗಳು ನಿಮ್ಮ ಸೂರ್ಯರಿಗೆ
ಬಾಲಾರಿಷ್ಟರಾಗಿ ಬಡಿದುಕೊಂಡಿರಬಹುದು
ಇದರಿಂದ ನಿಮ್ಮ ಕರುಳಕಿಡಿಗಳು
ಇದ್ದಿಲ ಚೂರುಗಳಂತೆ ಭಾಸವಾಗಬಹುದು
ಆದರೆ ತಾಯಂದಿರೆ
ಆ ಬಾಲಾರಿಷ್ಟ ಗ್ರಹ ಬಾಧೆಗಳ
ನಿಮ್ಮ ಚೈತನ್ಯ ಬೆಂಕಿಯಿಂದ ಸುಡಿರಿ
ಭವಿಷ್ಯದ ಆಶಾ ಮಾರುತನಿಂದ ಝಾಡಿಸಿರಿ
ನಿಮ್ಮ ಇದ್ದಿಲ ಚೂರನ್ನೇ ಗಟ್ಟಿ ಮಾಡಿ ಮಾಡಿ
ಸಾಣೆ ಹಿಡಿದು ವಜ್ರ ಮಾಡುವ
ಸಾಣೆಯಂತ್ರ ನಿಮ್ಮ ಕೈಯಲ್ಲೇ ಇದೆ
ನಿಮ್ಮ ಸೊಂಟಕ್ಕಂಟಿದ ಉಪಗ್ರಹಗಳಿಗೆ
ಕಾವು ಕಸುವು ತುಂಬಿ ತುಂಬಿ
ಸ್ವಯಂ ತೇಜೋಮೂರ್ತಿ ಮಾಡುವ
ಮಾಯಾ ದಂಡವೂ ನಿಮ್ಮ ಕೈಯಲ್ಲೇ ಇದೆ
ಇದನ್ನು ನಂಬಿ|
ನಿಮ್ಮ ಮನೆಗೋಡೆಯ ಮೇಲೆ
ಬರೆದಿಟ್ಟು ಬಣ್ಣ ತುಂಬಿ
ಗ್ರಹವು ಸೂರ್ಯನಾಗುವುದನ್ನು
ಹುಳುವು ಸಿಂಹವಾಗುವುದನ್ನು
ಈ ದೇಶ ಕಳ್ಳಕತ್ತಲೆ ಎಂದೂ ಸಹಿಸದು
ಎಲ್ಲ ಕಡೆ ಬೆಳಕಾದರೆ ಬಾವಲಿ ಹೆಗ್ಗಣ
ದರೋಡೆಖೋರ ನಿಶಾಚರರಿಗೆ ಅನುಕೂಲವಾಗದು

ಎಲ್ಲಾದರೂಂದೊಂದು ಕಿಡಿ ಹೊತ್ತಿಕೊಂಡರೆ
ಅಗ್ನಿ ಸತ್ಯ ಮೂಡಿದರೆ
ಕರಿನೆರಳ ಬುಟ್ಟಿ ಬೋರಲು ಹಾಕಿ ಬಿಡುವುದು
ಇಲ್ಲಿಯ ಚರಿತ್ರಾಹೀನ ಚರಿತ್ರೆ

ಸೂರ್ಯನ ಸೃಷ್ಟಿಸುವ
ಸಾಣೆಯಂತ್ರವನ್ನು ಕಸಿದುಕೊಂಡು,
ನಿಮಗೆ ಕೇವಲ ಸೌಟು ಕೊಟ್ಟಿರುವುದು
ಇಂಥ ಚರಿತ್ರಯೇ

ಆದ್ದರಿಂದ ತಾಯಂದಿರೇ
ನಿಮ್ಮ ಕರುಳ ಕುಡಿಗಳಲ್ಲಿ
ಕಿಡಿ ಹೊತ್ತಿಸಿ ಅಗ್ನಿ ಪುಂಜಗಳಾಗಿ ಮಾಡಿ
ಕತ್ತಲೆಯೋಡಿಸುವ ಕಜ್ಜದಲ್ಲಿ ಕೈಗೂಡಿ

೧೨-೬-೮೬
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...