ಸಹೋದರಿ ಮೊರೆ

ರಕ್ಷಿಸಿ… ಉಳಿಸಿ, ವಾತ್ಸಲ್ಯದ
ಓ… ನನ್ನ ಪ್ರೀತಿಯ ಸಹೋದರರೇ
ನನ್ನಿಹ ಉಳಿವು ಅಳಿವಾಗುತಿದೆ
ಶೋಷಣೆ ಎಲ್ಲೆಡೆ ನಡೆದಿದೆ

ಕೀಚಕ, ದುಶ್ಯಾಸನರು ತುಂಬಿಹರು
ಮಾತೆ-ಸಹೋದರಿಯ ಅರ್ಥ ಅರಿಯದ
ಲೈಂಗಿಕ ಲಾಲಸೆಯಲಿರುವರು

ಬಲಿಪಶುವಾಗಿಸಿ ಬಲಿಗೊಡುತಿಹರು
ಮಾನ ಹರಾಜುಗೊಳಿಸುತಲಿ
ನೋವು-ನರಳಾಟದಲಿ ನೂಕುತ
ಅಟ್ಟಹಾಸಗೈಯುತಿಹರು

ನನ್ನಯ ಆಸರೆಗೆ ನೀ ನೆರಳಾಗು
ತಂಗಿಯ ಕರುಳಿನ ಕೊರಳಾಗು
ಪ್ರೀತಿವಾತ್ಸಲ್ಯದ ಶಕ್ತಿಯಲಿ
ನನಗೆಂದೆಂದು… ಬದುಕಲಿ
ಬಾಂಧವ್ಯದ ಶಿಲ್ಪಿಯು ನೀನಾಗು…

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಮ ಇಲ್ಲದ ಮುಂಚೆ
Next post ಹಾಯಿಕು-ಹಂದರ

ಸಣ್ಣ ಕತೆ

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…