Home / ಕವನ / ಕವಿತೆ / ಕಾಮ ಇಲ್ಲದ ಮುಂಚೆ

ಕಾಮ ಇಲ್ಲದ ಮುಂಚೆ

ಕಾಮ ಇಲ್ಲದ ಮುಂಚೆ ಕಾಮ ಆದಿಯಲ್ಲಿ
ಕಾಮಶಾಸ್ತ್ರ ಯಾವಲ್ಲಿತ್ತು
ಕಾಮ ಸುಟ್ಟು ಬಹು ಕಷ್ಟವಾಯಿತು
ರತಿದೇವಿಗೆ ಬಂದಿತು ಹೊತ್ತು
ಭೂಮಿಯೊಳಗ ಆತಿ ಕೌತುಕವಾಯಿತು
ಆ ಮಹಾದೇವರು ಬ್ಯಾಸತ್ತು
ನೇಮ ಹಿಡಿದು ಆ ಹೇಮಕೂಟದಲಿ
ತಾನು ರಹಿತ ಒಂಭತ್ತು ಹೇಮಕೂಟದಲಿ
ಉತ್ಕರಿಸುತ ನದಿ ಭೀಮನಾಂಗ ನೋಡಿ ಬಂದಿತು
ಕ್ಷೇಮದಿಂದ ಸಂಚಾರವು ತಿಳಿಯಲು
ಈ ಮಹಿಮೆ ಯಾರಿಗೆ ಗೊತ್ತು

||ಇಳವು||
ರತಿದೇವಿಯೆಂಬು ಐದು ಅಕ್ಷರಾ
ಮತಿಗೆಟ್ಟು ನಾನಾವಿಕಾರಾ
ಜತಿಗೂಡಿ ಮೆರೆವ ವಿಸ್ತಾರಾ
ಕ್ಷಿತಿಯೊಳಗೆ ಆತೋ ವಿಕಾರಾ
ಸತಿ ಪುರುಷರು ಇಬ್ಬರು ಜರಾ
ಪ್ರತಿಭೂಮಿ ಇರುವದು ಚಮತ್ಕಾರಾ

||ಏರು||
ವೀರ ಪುರುಷರು ವಿಧ್ವಂಸಕ ನೇತ್ರರು
ಸತಿ ಪುರುಷರು ಇಬ್ಬರು ಜತ್ತು
ಕಾಮ ಸುಟ್ಟು ಬಹು ಕಷ್ಟವಾಯಿತು
ರತಿದೇವಿಗೆ ಬಂದಿತು ಹೊತ್ತು ||೧||

ನಾಗಲಿಂಗ ಆಲಿಂಗನ ಕೊಟ್ಟರೆ
ಈಗ ಆತು ಪದ್ಮಿನಿಗೆ ಸುಖಭೋಗ
ವಿಷಯದಾಗ ಮುಖವಿಲ್ಲದೆ ಈ
ಹಸ್ತಿನಿಕಾಲೊಳು ಆತೋ ಸುಖಾ
ಈಗ ಪುರುಷಜಾತಿಗಳು ಮೋಹಿಸಿ
ಮಾನಿನಿಯರು ನೋಡತಾರೋ ಮುಖಾ
ರೋಗ ಬಲಿದು ಏಕಾಗಿ ಅಂದದಿ
ತೆಕ್ಕಿಯೊಳಗೆ ಅಪ್ಪುವದು ಜೋಕಾ
ಸಾರಮನಸ್ಸು ಸಂಯೋಗನಿದ್ರಿ ಕುಚದಾ
ಗಿರಿಯಲಿ ಮಲಗೋದು ಠೀಕಾ
ಮ್ಯಾಗಬಿದ್ದು ಮಾತಾಡಲು ಮನ್ಮಥಾ
ದಾಗರಿಸುತ ನಗುತಿಹನ್ಯಾಕೆ

||ಇಳವು||
ಸಾಗಲಿಕ್ಕೆ ಪಶ್ಚಿಮದ ಭಾಗ
ಅಲ್ಲೇ ಇಡಬೇಕು ಕೈ ಅದರೂಳಗಾ
ಚಾಗನ ಉತ್ತರದ ಲಾಗಾ
ಇರಬೇಕು ದಕ್ಷಿಣದ ತ್ಯಾಗಾ
ಸೋಗಿತಿ ಪೂರ್ವದ ಯೋಗಾ
ತೂಗ್ಯಾಡು ಅನಕಾ ಸಂಯೋಗಾ

||ಏರು||
ಆಗ ಹಿಡಿದು ಅಧರಾಮೃತ ಸವಿಯಲು
ಶ್ರೀ ಗಿರಿಯಲಿ ಉದರಿತ ಮುತ್ತು
ಕಾಮ ಸುಟ್ಟು ಕಷ್ಟವಾಯಿತು ||೨||

ಚಿತ್ತಿನಿ ಜಾತಿಗೆ ಹಸ್ತವು ಮೇಲು
ಹತ್ತಿಪ್ಪತ್ತು ಹಿಡಿ ಹನ್ನೊಂದು ಗೆರಿ
ಹಸ್ತಿನಿ ಮುಖಮಂಡಲ ಕಪೋಲಕ
ಮಸ್ತಕದೊಳಗಿನ ನೀರ ಕೆರಿ
ಉತ್ತಮ ಪದ್ಮಿನಿ ಮತ್ತ ನೋಡಲು
ಎತ್ತಿ ಕಣ್ಣು ಕೈಬೀಸಿ ಕರಿ
ಚಿತ್ತಜನಕರ ಹಸ್ತಿನಿ ಶಂಕಿನಿ
ಮುತ್ತಿಹೊಡೆದರು ಮಾಯಮಾಡಿ
ಮುತ್ತಿಗಾಯಿತಲ್ಲಾ ಮೈಸೂರು ಸೀಮೆಗೆ
ರತ್ನ ಮೇಲೆ ಶಿಶುಪೇಚು ಗರಿ
ಕುಸ್ತಿ ಇಟ್ಟು ಕರಮಸ್ತಕ ಮುಚ್ಚಲು
ಅಳಿಸಿಹೋಯಿತು ಅತಿಲ್ಕವರಿ

||ಇಳವು||
ವಿಸ್ತರವು ಕಾಮಶಾಸ್ತ್ರದಲಿ
ಚಿತ್ತಿರಬೇಕು ಸೂರತದ ಲೀಲಿ
ಗೊತ್ತಿಟ್ಟು ಪ್ರೀತಿ ಧರ್ಮದಲಿ
ಮುತ್ತಿನ ಜ್ಯೋತಿ ರತ್ನದಲಿ

|| ಏರು||
ಸತ್ಯ ಶಿಶುನಾಳಧೀಶನ ಸೇವಕ
ಮತ್ತೆ ಹೇಳಿದ ಮಾತಿನ ಗೊತ್ತು
ಕಾಮಸುಟ್ಟು ಕಷ್ಟವಾಯಿತು
ರತಿದೇವಿಗೆ ಬಂದೀತು ಹೊತ್ತು ||೩||
*****

 

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...