ಕಾಮ ಇಲ್ಲದ ಮುಂಚೆ

ಕಾಮ ಇಲ್ಲದ ಮುಂಚೆ ಕಾಮ ಆದಿಯಲ್ಲಿ
ಕಾಮಶಾಸ್ತ್ರ ಯಾವಲ್ಲಿತ್ತು
ಕಾಮ ಸುಟ್ಟು ಬಹು ಕಷ್ಟವಾಯಿತು
ರತಿದೇವಿಗೆ ಬಂದಿತು ಹೊತ್ತು
ಭೂಮಿಯೊಳಗ ಆತಿ ಕೌತುಕವಾಯಿತು
ಆ ಮಹಾದೇವರು ಬ್ಯಾಸತ್ತು
ನೇಮ ಹಿಡಿದು ಆ ಹೇಮಕೂಟದಲಿ
ತಾನು ರಹಿತ ಒಂಭತ್ತು ಹೇಮಕೂಟದಲಿ
ಉತ್ಕರಿಸುತ ನದಿ ಭೀಮನಾಂಗ ನೋಡಿ ಬಂದಿತು
ಕ್ಷೇಮದಿಂದ ಸಂಚಾರವು ತಿಳಿಯಲು
ಈ ಮಹಿಮೆ ಯಾರಿಗೆ ಗೊತ್ತು

||ಇಳವು||
ರತಿದೇವಿಯೆಂಬು ಐದು ಅಕ್ಷರಾ
ಮತಿಗೆಟ್ಟು ನಾನಾವಿಕಾರಾ
ಜತಿಗೂಡಿ ಮೆರೆವ ವಿಸ್ತಾರಾ
ಕ್ಷಿತಿಯೊಳಗೆ ಆತೋ ವಿಕಾರಾ
ಸತಿ ಪುರುಷರು ಇಬ್ಬರು ಜರಾ
ಪ್ರತಿಭೂಮಿ ಇರುವದು ಚಮತ್ಕಾರಾ

||ಏರು||
ವೀರ ಪುರುಷರು ವಿಧ್ವಂಸಕ ನೇತ್ರರು
ಸತಿ ಪುರುಷರು ಇಬ್ಬರು ಜತ್ತು
ಕಾಮ ಸುಟ್ಟು ಬಹು ಕಷ್ಟವಾಯಿತು
ರತಿದೇವಿಗೆ ಬಂದಿತು ಹೊತ್ತು ||೧||

ನಾಗಲಿಂಗ ಆಲಿಂಗನ ಕೊಟ್ಟರೆ
ಈಗ ಆತು ಪದ್ಮಿನಿಗೆ ಸುಖಭೋಗ
ವಿಷಯದಾಗ ಮುಖವಿಲ್ಲದೆ ಈ
ಹಸ್ತಿನಿಕಾಲೊಳು ಆತೋ ಸುಖಾ
ಈಗ ಪುರುಷಜಾತಿಗಳು ಮೋಹಿಸಿ
ಮಾನಿನಿಯರು ನೋಡತಾರೋ ಮುಖಾ
ರೋಗ ಬಲಿದು ಏಕಾಗಿ ಅಂದದಿ
ತೆಕ್ಕಿಯೊಳಗೆ ಅಪ್ಪುವದು ಜೋಕಾ
ಸಾರಮನಸ್ಸು ಸಂಯೋಗನಿದ್ರಿ ಕುಚದಾ
ಗಿರಿಯಲಿ ಮಲಗೋದು ಠೀಕಾ
ಮ್ಯಾಗಬಿದ್ದು ಮಾತಾಡಲು ಮನ್ಮಥಾ
ದಾಗರಿಸುತ ನಗುತಿಹನ್ಯಾಕೆ

||ಇಳವು||
ಸಾಗಲಿಕ್ಕೆ ಪಶ್ಚಿಮದ ಭಾಗ
ಅಲ್ಲೇ ಇಡಬೇಕು ಕೈ ಅದರೂಳಗಾ
ಚಾಗನ ಉತ್ತರದ ಲಾಗಾ
ಇರಬೇಕು ದಕ್ಷಿಣದ ತ್ಯಾಗಾ
ಸೋಗಿತಿ ಪೂರ್ವದ ಯೋಗಾ
ತೂಗ್ಯಾಡು ಅನಕಾ ಸಂಯೋಗಾ

||ಏರು||
ಆಗ ಹಿಡಿದು ಅಧರಾಮೃತ ಸವಿಯಲು
ಶ್ರೀ ಗಿರಿಯಲಿ ಉದರಿತ ಮುತ್ತು
ಕಾಮ ಸುಟ್ಟು ಕಷ್ಟವಾಯಿತು ||೨||

ಚಿತ್ತಿನಿ ಜಾತಿಗೆ ಹಸ್ತವು ಮೇಲು
ಹತ್ತಿಪ್ಪತ್ತು ಹಿಡಿ ಹನ್ನೊಂದು ಗೆರಿ
ಹಸ್ತಿನಿ ಮುಖಮಂಡಲ ಕಪೋಲಕ
ಮಸ್ತಕದೊಳಗಿನ ನೀರ ಕೆರಿ
ಉತ್ತಮ ಪದ್ಮಿನಿ ಮತ್ತ ನೋಡಲು
ಎತ್ತಿ ಕಣ್ಣು ಕೈಬೀಸಿ ಕರಿ
ಚಿತ್ತಜನಕರ ಹಸ್ತಿನಿ ಶಂಕಿನಿ
ಮುತ್ತಿಹೊಡೆದರು ಮಾಯಮಾಡಿ
ಮುತ್ತಿಗಾಯಿತಲ್ಲಾ ಮೈಸೂರು ಸೀಮೆಗೆ
ರತ್ನ ಮೇಲೆ ಶಿಶುಪೇಚು ಗರಿ
ಕುಸ್ತಿ ಇಟ್ಟು ಕರಮಸ್ತಕ ಮುಚ್ಚಲು
ಅಳಿಸಿಹೋಯಿತು ಅತಿಲ್ಕವರಿ

||ಇಳವು||
ವಿಸ್ತರವು ಕಾಮಶಾಸ್ತ್ರದಲಿ
ಚಿತ್ತಿರಬೇಕು ಸೂರತದ ಲೀಲಿ
ಗೊತ್ತಿಟ್ಟು ಪ್ರೀತಿ ಧರ್ಮದಲಿ
ಮುತ್ತಿನ ಜ್ಯೋತಿ ರತ್ನದಲಿ

|| ಏರು||
ಸತ್ಯ ಶಿಶುನಾಳಧೀಶನ ಸೇವಕ
ಮತ್ತೆ ಹೇಳಿದ ಮಾತಿನ ಗೊತ್ತು
ಕಾಮಸುಟ್ಟು ಕಷ್ಟವಾಯಿತು
ರತಿದೇವಿಗೆ ಬಂದೀತು ಹೊತ್ತು ||೩||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧನ್ಯವಾಯಿತು ಹುಟ್ಟು ಸಾವಿನಲ್ಲಿ
Next post ಸಹೋದರಿ ಮೊರೆ

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…