ಕಾಮ ಇಲ್ಲದ ಮುಂಚೆ

ಕಾಮ ಇಲ್ಲದ ಮುಂಚೆ ಕಾಮ ಆದಿಯಲ್ಲಿ
ಕಾಮಶಾಸ್ತ್ರ ಯಾವಲ್ಲಿತ್ತು
ಕಾಮ ಸುಟ್ಟು ಬಹು ಕಷ್ಟವಾಯಿತು
ರತಿದೇವಿಗೆ ಬಂದಿತು ಹೊತ್ತು
ಭೂಮಿಯೊಳಗ ಆತಿ ಕೌತುಕವಾಯಿತು
ಆ ಮಹಾದೇವರು ಬ್ಯಾಸತ್ತು
ನೇಮ ಹಿಡಿದು ಆ ಹೇಮಕೂಟದಲಿ
ತಾನು ರಹಿತ ಒಂಭತ್ತು ಹೇಮಕೂಟದಲಿ
ಉತ್ಕರಿಸುತ ನದಿ ಭೀಮನಾಂಗ ನೋಡಿ ಬಂದಿತು
ಕ್ಷೇಮದಿಂದ ಸಂಚಾರವು ತಿಳಿಯಲು
ಈ ಮಹಿಮೆ ಯಾರಿಗೆ ಗೊತ್ತು

||ಇಳವು||
ರತಿದೇವಿಯೆಂಬು ಐದು ಅಕ್ಷರಾ
ಮತಿಗೆಟ್ಟು ನಾನಾವಿಕಾರಾ
ಜತಿಗೂಡಿ ಮೆರೆವ ವಿಸ್ತಾರಾ
ಕ್ಷಿತಿಯೊಳಗೆ ಆತೋ ವಿಕಾರಾ
ಸತಿ ಪುರುಷರು ಇಬ್ಬರು ಜರಾ
ಪ್ರತಿಭೂಮಿ ಇರುವದು ಚಮತ್ಕಾರಾ

||ಏರು||
ವೀರ ಪುರುಷರು ವಿಧ್ವಂಸಕ ನೇತ್ರರು
ಸತಿ ಪುರುಷರು ಇಬ್ಬರು ಜತ್ತು
ಕಾಮ ಸುಟ್ಟು ಬಹು ಕಷ್ಟವಾಯಿತು
ರತಿದೇವಿಗೆ ಬಂದಿತು ಹೊತ್ತು ||೧||

ನಾಗಲಿಂಗ ಆಲಿಂಗನ ಕೊಟ್ಟರೆ
ಈಗ ಆತು ಪದ್ಮಿನಿಗೆ ಸುಖಭೋಗ
ವಿಷಯದಾಗ ಮುಖವಿಲ್ಲದೆ ಈ
ಹಸ್ತಿನಿಕಾಲೊಳು ಆತೋ ಸುಖಾ
ಈಗ ಪುರುಷಜಾತಿಗಳು ಮೋಹಿಸಿ
ಮಾನಿನಿಯರು ನೋಡತಾರೋ ಮುಖಾ
ರೋಗ ಬಲಿದು ಏಕಾಗಿ ಅಂದದಿ
ತೆಕ್ಕಿಯೊಳಗೆ ಅಪ್ಪುವದು ಜೋಕಾ
ಸಾರಮನಸ್ಸು ಸಂಯೋಗನಿದ್ರಿ ಕುಚದಾ
ಗಿರಿಯಲಿ ಮಲಗೋದು ಠೀಕಾ
ಮ್ಯಾಗಬಿದ್ದು ಮಾತಾಡಲು ಮನ್ಮಥಾ
ದಾಗರಿಸುತ ನಗುತಿಹನ್ಯಾಕೆ

||ಇಳವು||
ಸಾಗಲಿಕ್ಕೆ ಪಶ್ಚಿಮದ ಭಾಗ
ಅಲ್ಲೇ ಇಡಬೇಕು ಕೈ ಅದರೂಳಗಾ
ಚಾಗನ ಉತ್ತರದ ಲಾಗಾ
ಇರಬೇಕು ದಕ್ಷಿಣದ ತ್ಯಾಗಾ
ಸೋಗಿತಿ ಪೂರ್ವದ ಯೋಗಾ
ತೂಗ್ಯಾಡು ಅನಕಾ ಸಂಯೋಗಾ

||ಏರು||
ಆಗ ಹಿಡಿದು ಅಧರಾಮೃತ ಸವಿಯಲು
ಶ್ರೀ ಗಿರಿಯಲಿ ಉದರಿತ ಮುತ್ತು
ಕಾಮ ಸುಟ್ಟು ಕಷ್ಟವಾಯಿತು ||೨||

ಚಿತ್ತಿನಿ ಜಾತಿಗೆ ಹಸ್ತವು ಮೇಲು
ಹತ್ತಿಪ್ಪತ್ತು ಹಿಡಿ ಹನ್ನೊಂದು ಗೆರಿ
ಹಸ್ತಿನಿ ಮುಖಮಂಡಲ ಕಪೋಲಕ
ಮಸ್ತಕದೊಳಗಿನ ನೀರ ಕೆರಿ
ಉತ್ತಮ ಪದ್ಮಿನಿ ಮತ್ತ ನೋಡಲು
ಎತ್ತಿ ಕಣ್ಣು ಕೈಬೀಸಿ ಕರಿ
ಚಿತ್ತಜನಕರ ಹಸ್ತಿನಿ ಶಂಕಿನಿ
ಮುತ್ತಿಹೊಡೆದರು ಮಾಯಮಾಡಿ
ಮುತ್ತಿಗಾಯಿತಲ್ಲಾ ಮೈಸೂರು ಸೀಮೆಗೆ
ರತ್ನ ಮೇಲೆ ಶಿಶುಪೇಚು ಗರಿ
ಕುಸ್ತಿ ಇಟ್ಟು ಕರಮಸ್ತಕ ಮುಚ್ಚಲು
ಅಳಿಸಿಹೋಯಿತು ಅತಿಲ್ಕವರಿ

||ಇಳವು||
ವಿಸ್ತರವು ಕಾಮಶಾಸ್ತ್ರದಲಿ
ಚಿತ್ತಿರಬೇಕು ಸೂರತದ ಲೀಲಿ
ಗೊತ್ತಿಟ್ಟು ಪ್ರೀತಿ ಧರ್ಮದಲಿ
ಮುತ್ತಿನ ಜ್ಯೋತಿ ರತ್ನದಲಿ

|| ಏರು||
ಸತ್ಯ ಶಿಶುನಾಳಧೀಶನ ಸೇವಕ
ಮತ್ತೆ ಹೇಳಿದ ಮಾತಿನ ಗೊತ್ತು
ಕಾಮಸುಟ್ಟು ಕಷ್ಟವಾಯಿತು
ರತಿದೇವಿಗೆ ಬಂದೀತು ಹೊತ್ತು ||೩||
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧನ್ಯವಾಯಿತು ಹುಟ್ಟು ಸಾವಿನಲ್ಲಿ
Next post ಸಹೋದರಿ ಮೊರೆ

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys