ಧನ್ಯವಾಯಿತು ಹುಟ್ಟು ಸಾವಿನಲ್ಲಿ

ಕೈ ತುಂಬ ಹಣ
ಕೈ ತುಂಬ ಅವಕಾಶ
ಇದ್ದಾಗ ನೆನಪಾಗಲಿಲ್ಲ
ಪಾಪ ಅಸಹಾಯ –
ಪುರಸೊತ್ತೂ ಇರಲಿಲ್ಲ ಎನ್ನಿ
ಬಹುಜನ ಹಿತಾಯ
ಬಹುಜನ ಸುಖಾಯ
ಮಂತ್ರ ಪಠಿಸುವುದಕ್ಕೆ
ಆದರೂ ಏನಿದೆ ಧಕ್ಕೆ ?
ಸಾಯುವೆ ರಸ್ತೆಯ ಮೇಲೆ
ತಾನು ಸತ್ತರೇ ಉಪಕಾರ
ಇನ್ನು ರಸ್ತೆಯ ಮೇಲೆ
ಸತ್ತರೆ ಮತ್ತೂ ಉಪಕಾರ
ಎಂದೆಲ್ಲಾ ಯೋಚಿಸಿ
ಸತ್ತ ರಸ್ತೆಯ ಮೇಲೆ
ಸತ್ತರೆ ಸಾಯಲಿ ಬಿಡೋ
ಎಂಬ ತಾತ್ಸಾರಕ್ಕೆ
ಕೊಳೆಯಿತು ಹೆಣ
ನಕ್ಕವು
ನೆಕ್ಕಿದವು ನೊಣ

ತನ್ನ ಸ್ವಾರ್ಥವ ನೆನೆದು
ವ್ಯರ್ಥವಾಗಿಹ ಜೀವ
ಈ ರೀತಿ
ಸತ್ತ ಮೇಲಾದರೂ ಸೇವೆಗೆ ನಿಂತು
ಕೇರಿ ಕೇರಿಗೆ ಎಲ್ಲಾ
ವಾಸನೆ ತಂತು

ಆದರೂ
ನೊಣ ನಾಯಿ ನರಿಗಳಿಗೆ
ಭೋಜನ ಬಡಿಸಿದ ಪುಣ್ಯ
ಬಂದೇ ಬಂತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ
Next post ಕಾಮ ಇಲ್ಲದ ಮುಂಚೆ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…