ಧನ್ಯವಾಯಿತು ಹುಟ್ಟು ಸಾವಿನಲ್ಲಿ

ಕೈ ತುಂಬ ಹಣ
ಕೈ ತುಂಬ ಅವಕಾಶ
ಇದ್ದಾಗ ನೆನಪಾಗಲಿಲ್ಲ
ಪಾಪ ಅಸಹಾಯ –
ಪುರಸೊತ್ತೂ ಇರಲಿಲ್ಲ ಎನ್ನಿ
ಬಹುಜನ ಹಿತಾಯ
ಬಹುಜನ ಸುಖಾಯ
ಮಂತ್ರ ಪಠಿಸುವುದಕ್ಕೆ
ಆದರೂ ಏನಿದೆ ಧಕ್ಕೆ ?
ಸಾಯುವೆ ರಸ್ತೆಯ ಮೇಲೆ
ತಾನು ಸತ್ತರೇ ಉಪಕಾರ
ಇನ್ನು ರಸ್ತೆಯ ಮೇಲೆ
ಸತ್ತರೆ ಮತ್ತೂ ಉಪಕಾರ
ಎಂದೆಲ್ಲಾ ಯೋಚಿಸಿ
ಸತ್ತ ರಸ್ತೆಯ ಮೇಲೆ
ಸತ್ತರೆ ಸಾಯಲಿ ಬಿಡೋ
ಎಂಬ ತಾತ್ಸಾರಕ್ಕೆ
ಕೊಳೆಯಿತು ಹೆಣ
ನಕ್ಕವು
ನೆಕ್ಕಿದವು ನೊಣ

ತನ್ನ ಸ್ವಾರ್ಥವ ನೆನೆದು
ವ್ಯರ್ಥವಾಗಿಹ ಜೀವ
ಈ ರೀತಿ
ಸತ್ತ ಮೇಲಾದರೂ ಸೇವೆಗೆ ನಿಂತು
ಕೇರಿ ಕೇರಿಗೆ ಎಲ್ಲಾ
ವಾಸನೆ ತಂತು

ಆದರೂ
ನೊಣ ನಾಯಿ ನರಿಗಳಿಗೆ
ಭೋಜನ ಬಡಿಸಿದ ಪುಣ್ಯ
ಬಂದೇ ಬಂತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾರಿಯರ ವಿಸ್ತರಿಸಿ ಸಾರಶಾಸ್ತ್ರ ಪೂರವಿಸಿ
Next post ಕಾಮ ಇಲ್ಲದ ಮುಂಚೆ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys